‘ಶ್ರೀಗಳ ಕನಸು ರಾಂಪುರದಿಂದ ಗೋವಿನಕೋವಿಗೆ ಸೇತುವೆ ನಿರ್ಮಾಣ. ಅವರು ಒತ್ತಾಯದ ಮೇಲೆ ₹ 160 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿತ್ತು. ಸರ್ಕಾರ ಬದಲಾದ ಕಾರಣ ಆ ಕಾರ್ಯ ಅರ್ಧಕ್ಕೆ ನಿಂತಿದೆ. ಮುಖ್ಯಮಂತ್ರಿಯಿಂದ ಮತ್ತೆ ಈ ಯೋಜನೆಯ ಅನುಮೋದನೆ ಪಡೆಯುತ್ತೇನೆ. ಕತೃಗದ್ದುಗೆಗೆ ಮಠ ಬಯಸಿದ ಸಹಾಯ ನೀಡಲು ಸಿದ್ಧ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.