<p><strong>ಸಾಸ್ವೆಹಳ್ಳಿ</strong>: ‘ಭಕ್ತರೇ ನಮ್ಮ ಶಕ್ತಿ ಎಂದು ನಂಬಿ ತಮ್ಮ ಜೀವಿತಾವಧಿಯನ್ನು ಭಕ್ತರಿಗೆ ಮೀಸಲಿಟ್ಟ ಮಹಾನ್ ಚೇತನ ಲಿಂ. ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ. ಜಾತ್ಯತೀತವಾಗಿ ಭಕ್ತರನ್ನು ಗಳಿಸಿದ್ದಾರೆ. ಅವರ ಸೇವೆ ಅವಿಸ್ಮರಣೀಯ’ ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ಸಮೀಪದ ರಾಂಪುರದ ಹಾಲಸ್ವಾಮಿ ಮಠದ ಸಮುದಾಯ ಭವನದಲ್ಲಿ ಲಿಂ. ಶ್ರೀಗಳ ಕರ್ತೃಗದ್ದುಗೆ ನಿರ್ಮಾಣ ಕುರಿತ ಸಭೆಯಲ್ಲಿ ಮಾತನಾಡಿದರು.</p>.<p>‘ಹಾಲ ಸ್ವಾಮೀಜಿ ಭಕ್ತರಿಗೆ ಆಯುರ್ವೇದ ಚಿಕಿತ್ಸೆ ನೀಡುತ್ತಿದ್ದರು. 75 ವರ್ಷ ಮಾಡಬಹುದಾದ ಕೆಲಸವನ್ನು ಕೇವಲ 25 ವರ್ಷಗಳಲ್ಲಿಯೇ ಪೂರೈಸಿದ್ದರು. ಭಕ್ತರು ಮನಸ್ಸು ಮಾಡಿದರೆ ಅವರ ಕರ್ತೃಗದ್ದುಗೆ ಉತ್ತಮವಾಗಿ ನಿರ್ಮಾಣವಾಗಲಿದೆ’ ಎಂದರು.</p>.<p>‘ಸ್ವಾಮೀಜಿ ಕಾರ್ಯಕ್ಷೇತ್ರ ವಿಸ್ತಾರವಾಗಿದೆ. ಹಾಗಾಗಿಯೇ ಅವರು ಈ ಭಾಗದ ನಡೆದಾಡುವ ದೇವರು ಎಂದು ಖ್ಯಾತರಾಗಿದ್ದರು’ ಎಂದು ಹೊಟ್ಯಾಪುರದ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>‘ಶ್ರೀಗಳ ಕನಸು ರಾಂಪುರದಿಂದ ಗೋವಿನಕೋವಿಗೆ ಸೇತುವೆ ನಿರ್ಮಾಣ. ಅವರು ಒತ್ತಾಯದ ಮೇಲೆ ₹ 160 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿತ್ತು. ಸರ್ಕಾರ ಬದಲಾದ ಕಾರಣ ಆ ಕಾರ್ಯ ಅರ್ಧಕ್ಕೆ ನಿಂತಿದೆ. ಮುಖ್ಯಮಂತ್ರಿಯಿಂದ ಮತ್ತೆ ಈ ಯೋಜನೆಯ ಅನುಮೋದನೆ ಪಡೆಯುತ್ತೇನೆ. ಕತೃಗದ್ದುಗೆಗೆ ಮಠ ಬಯಸಿದ ಸಹಾಯ ನೀಡಲು ಸಿದ್ಧ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.</p>.<p>‘ಶ್ರೀಗಳಿಂದ ಹಣ ಪಡೆದು ಅವರಿಗೆ ಕೊಡದೆ ಮೋಸ ಮಾಡಿರುವುದಾಗಿ ಕೆಲವು ಭಕ್ತರು ಅರೋಪಿಸುತ್ತಿದ್ದಾರೆ. ಅದು ಸುಳ್ಳು. ಅವರಿಂದ ಹಣ ಪಡೆದಿದ್ದು ನಿಜ. ಹಣವನ್ನು ಅವರಿಗೆ ಹಿಂತಿರುಗಿಸಿದ್ದೇನೆ’ ಎಂದು ಶಾಸಕರು ಹೇಳಿದರು.</p>.<p>‘ಶ್ರೀಗಳ ಕರ್ತೃಗದ್ದುಗೆ ₹ 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಮಠದ ಮುಖ್ಯಸ್ಥ ಗಿರೀಶ್ ಪಾಟೀಲ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಸ್ವೆಹಳ್ಳಿ</strong>: ‘ಭಕ್ತರೇ ನಮ್ಮ ಶಕ್ತಿ ಎಂದು ನಂಬಿ ತಮ್ಮ ಜೀವಿತಾವಧಿಯನ್ನು ಭಕ್ತರಿಗೆ ಮೀಸಲಿಟ್ಟ ಮಹಾನ್ ಚೇತನ ಲಿಂ. ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ. ಜಾತ್ಯತೀತವಾಗಿ ಭಕ್ತರನ್ನು ಗಳಿಸಿದ್ದಾರೆ. ಅವರ ಸೇವೆ ಅವಿಸ್ಮರಣೀಯ’ ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ಸಮೀಪದ ರಾಂಪುರದ ಹಾಲಸ್ವಾಮಿ ಮಠದ ಸಮುದಾಯ ಭವನದಲ್ಲಿ ಲಿಂ. ಶ್ರೀಗಳ ಕರ್ತೃಗದ್ದುಗೆ ನಿರ್ಮಾಣ ಕುರಿತ ಸಭೆಯಲ್ಲಿ ಮಾತನಾಡಿದರು.</p>.<p>‘ಹಾಲ ಸ್ವಾಮೀಜಿ ಭಕ್ತರಿಗೆ ಆಯುರ್ವೇದ ಚಿಕಿತ್ಸೆ ನೀಡುತ್ತಿದ್ದರು. 75 ವರ್ಷ ಮಾಡಬಹುದಾದ ಕೆಲಸವನ್ನು ಕೇವಲ 25 ವರ್ಷಗಳಲ್ಲಿಯೇ ಪೂರೈಸಿದ್ದರು. ಭಕ್ತರು ಮನಸ್ಸು ಮಾಡಿದರೆ ಅವರ ಕರ್ತೃಗದ್ದುಗೆ ಉತ್ತಮವಾಗಿ ನಿರ್ಮಾಣವಾಗಲಿದೆ’ ಎಂದರು.</p>.<p>‘ಸ್ವಾಮೀಜಿ ಕಾರ್ಯಕ್ಷೇತ್ರ ವಿಸ್ತಾರವಾಗಿದೆ. ಹಾಗಾಗಿಯೇ ಅವರು ಈ ಭಾಗದ ನಡೆದಾಡುವ ದೇವರು ಎಂದು ಖ್ಯಾತರಾಗಿದ್ದರು’ ಎಂದು ಹೊಟ್ಯಾಪುರದ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>‘ಶ್ರೀಗಳ ಕನಸು ರಾಂಪುರದಿಂದ ಗೋವಿನಕೋವಿಗೆ ಸೇತುವೆ ನಿರ್ಮಾಣ. ಅವರು ಒತ್ತಾಯದ ಮೇಲೆ ₹ 160 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿತ್ತು. ಸರ್ಕಾರ ಬದಲಾದ ಕಾರಣ ಆ ಕಾರ್ಯ ಅರ್ಧಕ್ಕೆ ನಿಂತಿದೆ. ಮುಖ್ಯಮಂತ್ರಿಯಿಂದ ಮತ್ತೆ ಈ ಯೋಜನೆಯ ಅನುಮೋದನೆ ಪಡೆಯುತ್ತೇನೆ. ಕತೃಗದ್ದುಗೆಗೆ ಮಠ ಬಯಸಿದ ಸಹಾಯ ನೀಡಲು ಸಿದ್ಧ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.</p>.<p>‘ಶ್ರೀಗಳಿಂದ ಹಣ ಪಡೆದು ಅವರಿಗೆ ಕೊಡದೆ ಮೋಸ ಮಾಡಿರುವುದಾಗಿ ಕೆಲವು ಭಕ್ತರು ಅರೋಪಿಸುತ್ತಿದ್ದಾರೆ. ಅದು ಸುಳ್ಳು. ಅವರಿಂದ ಹಣ ಪಡೆದಿದ್ದು ನಿಜ. ಹಣವನ್ನು ಅವರಿಗೆ ಹಿಂತಿರುಗಿಸಿದ್ದೇನೆ’ ಎಂದು ಶಾಸಕರು ಹೇಳಿದರು.</p>.<p>‘ಶ್ರೀಗಳ ಕರ್ತೃಗದ್ದುಗೆ ₹ 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಮಠದ ಮುಖ್ಯಸ್ಥ ಗಿರೀಶ್ ಪಾಟೀಲ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>