ಚನ್ನಗಿರಿ ತಾಲ್ಲೂಕಿನ ಆರ್ಎಫ್ಒ ಗಮನಕ್ಕೆ ತಂದ ನಂತರ, ಕರಡಿ ಸೆರೆ ಹಿಡಿಯಲು ಬೋನು ಇರಿಸಲಾಗಿತ್ತು. ಆದರೂ ಕರಡಿ ಅದರಲ್ಲಿ ಬಿದ್ದಿರಲಿಲ್ಲ. ಈ ಭಾಗದ ಜನರಿಗೆ ಆತಂಕ ಇದ್ದೇ ಇತ್ತು. ಶಾಸಕ ಡಿ.ಜಿ. ಶಾಂತನಗೌಡ ಅವರ ಸೂಚನೆ ಬಳಿಕ ದೇವಸ್ಥಾನ ಹಾಗೂ ಪೊದೆಯ ಸುತ್ತ ಬಲೆಯನ್ನು ಕಟ್ಟಲಾಗಿತ್ತು. ಪಟಾಕಿ ಸಿಡಿಸಿ, ಗದ್ದಲ ಎಬ್ಬಿಸಿ ಅದು ಗುಹೆಯಿಂದ ಹೊರಬರುವಂತೆ ಮಾಡಲಾಯಿತು. ಪಟಾಕಿ ಶಬ್ದಕ್ಕೆ ಹೆದರಿ ಹೊರಬಂದ ಕರಡಿ ಬಲೆಯೊಳಗೆ ಸಿಕ್ಕಿಕೊಂಡಿತು.