‘ಕಳೆದ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯದ ಕಾರು ಚಾಲಕ ಸ್ವಾಮಿಯನ್ನು ಕಳ್ಳತನ ಆರೋಪದ ಮೇಲೆ ಬಂಧಿಸಿ, ವಿಚಾರಣೆ ನಡೆಸಿ ಆತನಿಂದ ನಗದು, ಮೊಬೈಲ್, ಚಿನ್ನಾಭರಣ ಒಳಗೊಂಡಂತೆ ₹ 96 ಲಕ್ಷ ವಶಪಡಿಸಿಕೊಂಡಿದ್ದರು. ‘ಅದು ಹವಾಲಾ ದುಡ್ಡು. ಜಿ.ಎಂ. ಸಿದ್ದೇಶ್ವರ ಹಾಗೂ ಪ್ರಸನ್ನಕುಮಾರ್ ಎಂಬುವವರಿಗೆ ಸೇರಿದ್ದು’ ಎಂದು ತನಿಖೆಯ ವೇಳೆ ಆತ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ನನಗಾಗಲಿ, ನನ್ನ ಸಂಸ್ಥೆಗಳಿಗಾಗಲಿ, ಸಹೋದರಿಗಾಗಲಿ ಈ ಹಣದೊಂದಿಗೆ ಸಂಬಂಧವಿಲ್ಲ. ನಾವು ವರ್ಷಕ್ಕೆ ₹ 50 ಕೋಟಿ ತೆರಿಗೆ ಕಟ್ಟಿ ವ್ಯಾಪಾರ ಮಾಡುತ್ತೇವೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.