ಸಿಪಿಐ ಮಂಜುನಾಥ, ಎಎಸ್ಐ ಜೋವಿತ್ರಾಜ್ ಮತ್ತು ಸಿಬ್ಬಂದಿ ಹೈವೆ ಗಸ್ತು ವಾಹನದಲ್ಲಿ ವಾಹನ ತಪಾಸಣೆ ಮಾಡುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಸಂಜೀವ್ ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ₹ 1.5 ಲಕ್ಷ ಮೌಲ್ಯದ ಅಕ್ಕಿ, ₹ 4 ಲಕ್ಷ ಮೌಲ್ಯದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಲಾರಿ ಚಾಲಕನನ್ನು ಬಂಧಿಸಲಾಗಿದೆ.