ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್. ಶಿಶುಪಾಲ, ‘ವಿಜ್ಞಾನ ಕೇವಲ ಕಲಿಕೆಗಲ್ಲ. ಇದು ಜೀವನದ ಭಾಗವಾಗಬೇಕು. ವಿಜ್ಞಾನದ ದಂತ ಕಥೆಗಳಾದ ಚಾರ್ಲ್ಸ್ ಡಾರ್ವಿನ್ ಅವರು ಸುತ್ತಲಿನ ಪರಿಸರವನ್ನೇ ಪ್ರಯೋಗಶಾಲೆಯಾಗಿ ಬಳಸಿ, ಸೂಕ್ಷ್ಮವಾಗಿ ಗಮನಿಸಿ ಅದರಿಂದ ವಿಕಾಸವಾದ ಸಿದ್ಧಾಂತವನ್ನೇ ಪ್ರತಿಪಾದಿಸಿದರು. ಅದರಂತೆಯೇ, ಮೆಂಡೆಲ್ರವರು ತಳಿಶಾಸ್ತ್ರವನ್ನು ಅಭಿವೃದ್ಧಿಪಡಿಸಿದರು. ಹಾಗಾಗಿ ವಿಜ್ಞಾನದ ಪ್ರತಿ ವಿದ್ಯಾರ್ಥಿಗೂ ಗಮನಿಸುವ ಕುತೂಹಲ ಅವಶ್ಯ’ ಎಂದರು.