<p><strong>ದಾವಣಗೆರೆ</strong>: ಎಸ್.ಶ್ರೇಯಸ್ ಆಲ್ರೌಂಡ್ ಆಟ ಹಾಗೂ ಕೆ.ಸಿ. ವೀರೇಶ್ ಸ್ಪಿನ್ ಬೌಲಿಂಗ್ ನೆರವಿನಿಂದ ದಾವಣಗೆರೆ ಜಿಲ್ಲಾ ತಂಡ ತುಮಕೂರು ವಲಯದ 16 ವರ್ಷದೊಳಗಿನ ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಮವಾರ ಮತ್ತೊಂದು ಪಂದ್ಯದಲ್ಲಿ ಸುಲಭ ಜಯ ಗಳಿಸಿತು.</p>.<p>ದಿನದ ಇನ್ನೊಂದು ಪಂದ್ಯದಲ್ಲಿ ತುಮಕೂರು ತಂಡ ಬಳ್ಳಾರಿ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಜಯ ದಾಖಲಿಸಿತು.</p>.<p>ಇಲ್ಲಿನ ಎಂಬಿಎ ಕಾಲೇಜು ಟರ್ಫ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಆಯೋಜಿಸಿರುವ ಪಂದ್ಯಾವಳಿಯಲ್ಲಿ ಚಿತ್ರದುರ್ಗ ತಂಡದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಾವಣಗೆರೆ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿತು.</p>.<p>ಎಸ್.ಶ್ರೇಯಸ್ 67 (96 ಎಸೆತ, 5 ಬೌಂಡರಿ, 1 ಸಿಕ್ಸರ್), ಕೆ.ಅಖಿಲ್ 42 (31 ಎಸೆತ, 5 ಬೌಂಡರಿ), ಆರಂಭಿಕ ಆಟಗಾರ ಎ.ಜಿ. ಕಲ್ಲೇಶ್ 34 (41 ಎಸೆತ, 5 ಬೌಂಡರಿ) ಹಾಗೂ ಎಸ್.ಎನ್. ಅರ್ಜುನ್ 26 (50 ಎಸೆತ, 1 ಬೌಂಡರಿ) ರನ್ ಪೇರಿಸಿ ತಂಡಕ್ಕೆ ನೆರವಾದರು.</p>.<p>ಚಿತ್ರದುರ್ಗ ಪರ ಪಿ.ಎ. ಹೊನ್ನೇಶ್ 2, ಮಹಮ್ಮದ್ ನವಾಜ್, ಧ್ರುವಕುಮಾರ್ ಹಾಗೂ ಬಿ.ಕೆ. ಪುನೀತ್ ತಲಾ 1 ವಿಕೆಟ್ ಗಳಿಸಿದರು.<br>ಬೃಹತ್ ಗುರಿಯನ್ನು ಬೆನ್ನತ್ತಿದ ಚಿತ್ರದುರ್ಗ ತಂಡಕ್ಕೆ ದಾವಣಗೆರೆಯ ಎಡಗೈ ಸ್ಪಿನ್ನರ್ ಕೆ.ಸಿ. ವೀರೇಶ್ (4ಕ್ಕೆ 4) ಮಾರಕವಾಗಿ ಪರಿಣಮಿಸಿದರು. 10 ಓವರ್ ಬೌಲಿಂಗ್ ಮಾಡಿದ ವೀರೇಶ್, 7 ಓವರ್ ಮೇಡನ್ ಎಸೆದರು. ಬ್ಯಾಟಿಂಗ್ನಲ್ಲಿ ಮಿಂಚಿದ್ದ ಎಸ್.ಶ್ರೇಯಸ್ ಪಟಪಟನೇ 3 ವಿಕೆಟ್ ಪಡೆಯುವ ಎದುರಾಳಿ ತಂಡದ ಬ್ಯಾಟಿಂಗ್ ಮೂಲಕ ಮಗ್ಗುಲು ಮುರಿದರು.</p>.<p>ಮಹಮ್ಮದ್ ಅಕ್ರಮ್, ಕೆ.ಎಸ್. ಶ್ರೇಷ್ಠ, ಬಿ.ಸೃಜನ್ ತಲಾ 1 ವಿಕೆಟ್ ಪಡೆದರು. ಚಿತ್ರದುರ್ಗ ತಂಡ ಕೇವಲ 104 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಪಂದ್ಯಾವಳಿಯಲ್ಲಿ ಎರಡನೇ ಸೋಲು ಅನುಭವಿಸಿತು.</p>.<p><strong>ತುಮಕೂರಿಗೆ ರೋಚಕ ಗೆಲುವು:</strong></p>.<p>ಮೊದಲ ಪಂದ್ಯದಲ್ಲಿ ಚಿತ್ರದುರ್ಗ ತಂಡದೆದುರು ಗೆಲುವ ಉ ಕಂಡಿದ್ದ ತುಮಕೂರು ಜಿಲ್ಲಾ ತಂಡ ಸೋಮವಾರ ಬಳ್ಳಾರಿ ವಿರುದ್ಧ 4 ರನ್ಗಳ ರೋಚಕ ಗೆಲುವು ಸಾಧಿಸಿತು.</p>.<p>ಇಲ್ಲಿನ ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಬಳ್ಳಾರಿ ತಂಡ ತೀವ್ರ ಹಣಾಹಣಿ ನಡೆಸಿಯೂ ಸೋಲೊಪ್ಪಿಕೊಂಡಿತು.</p>.<p>ಮೊದಲು ಬ್ಯಾಟ್ ಮಾಡಿದ ತುಮಕೂರು, ಆರಂಭಿಕ ಆಘಾತಕ್ಕೆ ಒಳಗಾಗಿತ್ತಾದರೂ, ಮಧ್ಯಮ ಕ್ರಮಾಂಕದ ಎ.ಎಂ. ಅಭಿನವ್ ಅಜೇಯ ಶತಕ (103 ರನ್, 148 ಎಸೆತ, 13 ಬೌಂಡರಿ, 1 ಸಿಕ್ಸರ್) ದೊಂದಿಗೆ ಉತ್ತಮ ಮೊತ್ತ ಪೇರಿಸಿತು. 46 ರನ್ (31 ಎಸೆತ, 7 ಬೌಂಡರಿ) ಗಳಿಸಿದ ಅಭಿ ಕೊನೆಯಲ್ಲಿ ಸೂಕ್ತ ಬೆಂಬಲ ನೀಡಿದ್ದರಿಂದ ತಂಡ 50 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತು.</p>.<p>ಬಳ್ಳಾರಿ ಪರ ಶೇಖ್ ಮಹಮ್ಮದ್ 3, ಪ್ರತೀಕ್ ಸಾಯಿ 3 ಹಾಗೂ ಅಭಿಷೇಕ್ ಮತ್ತು ರೋಹಿತ್ ರೆಡ್ಡಿ ತಲಾ 1 ವಿಕೆಟ್ ಗಳಿಸಿದರು.</p>.<p>237 ರನ್ಗಳ ಗುರಿ ಬೆನ್ನತ್ತಿದ ಬಳ್ಳಾರಿ ತಂಡ ರೋಹಿತ್ 66 (96 ಎಸೆತ, 9 ಬೌಂಡರಿ) ಹಾಗೂ ಆದಿಲ್ 44 (31 ಎಸೆತ, 8 ಬೌಂಡರಿ), ಅಮಿತ್ 28 (35 ಎಸೆತ, 2 ಬೌಂಡರಿ) ಅವರ ತೀವ್ರ ಹೋರಾಟದ ಹೊರತಾಗಿಯೂ ಕೇವಲ 4 ರನ್ಗಳ ಅಂತರದಲ್ಲಿ ಪರಾಭವಗೊಂಡಿತು.</p>.<p>ತುಮಕೂರು ಪರ ಕೆ.ಎಸ್. ರೋಹಿತ್ 39ಕ್ಕೆ 4 ವಿಕೆಟ್ ಗಳಿಸುವ ಮೂಲಕ ಗಮನ ಸೆಳೆದರು. ಅಭಿ 2, ನವೀನ್ಕುಮಾರ್, ಎಂ.ಜಿ. ಕಿಶೋರ್, ಲಕ್ಷಿತ್ ತಲಾ 1 ವಿಕೆಟ್ ಗಳಿಸಿದರು.</p>.<p>ಮಂಗಳವಾರ ನಡೆಯಲಿರುವ ಪಂದ್ಯಗಳಲ್ಲಿ ದಾವಣಗೆರೆ ತಂಡ ತುಮಕೂರು ವಿರುದ್ಧ, ಚಿತ್ರದುರ್ಗ ತಂಡ ಬಳ್ಳಾರಿ ವಿರುದ್ಧ ಸೆಣೆಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಎಸ್.ಶ್ರೇಯಸ್ ಆಲ್ರೌಂಡ್ ಆಟ ಹಾಗೂ ಕೆ.ಸಿ. ವೀರೇಶ್ ಸ್ಪಿನ್ ಬೌಲಿಂಗ್ ನೆರವಿನಿಂದ ದಾವಣಗೆರೆ ಜಿಲ್ಲಾ ತಂಡ ತುಮಕೂರು ವಲಯದ 16 ವರ್ಷದೊಳಗಿನ ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಮವಾರ ಮತ್ತೊಂದು ಪಂದ್ಯದಲ್ಲಿ ಸುಲಭ ಜಯ ಗಳಿಸಿತು.</p>.<p>ದಿನದ ಇನ್ನೊಂದು ಪಂದ್ಯದಲ್ಲಿ ತುಮಕೂರು ತಂಡ ಬಳ್ಳಾರಿ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಜಯ ದಾಖಲಿಸಿತು.</p>.<p>ಇಲ್ಲಿನ ಎಂಬಿಎ ಕಾಲೇಜು ಟರ್ಫ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಆಯೋಜಿಸಿರುವ ಪಂದ್ಯಾವಳಿಯಲ್ಲಿ ಚಿತ್ರದುರ್ಗ ತಂಡದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಾವಣಗೆರೆ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿತು.</p>.<p>ಎಸ್.ಶ್ರೇಯಸ್ 67 (96 ಎಸೆತ, 5 ಬೌಂಡರಿ, 1 ಸಿಕ್ಸರ್), ಕೆ.ಅಖಿಲ್ 42 (31 ಎಸೆತ, 5 ಬೌಂಡರಿ), ಆರಂಭಿಕ ಆಟಗಾರ ಎ.ಜಿ. ಕಲ್ಲೇಶ್ 34 (41 ಎಸೆತ, 5 ಬೌಂಡರಿ) ಹಾಗೂ ಎಸ್.ಎನ್. ಅರ್ಜುನ್ 26 (50 ಎಸೆತ, 1 ಬೌಂಡರಿ) ರನ್ ಪೇರಿಸಿ ತಂಡಕ್ಕೆ ನೆರವಾದರು.</p>.<p>ಚಿತ್ರದುರ್ಗ ಪರ ಪಿ.ಎ. ಹೊನ್ನೇಶ್ 2, ಮಹಮ್ಮದ್ ನವಾಜ್, ಧ್ರುವಕುಮಾರ್ ಹಾಗೂ ಬಿ.ಕೆ. ಪುನೀತ್ ತಲಾ 1 ವಿಕೆಟ್ ಗಳಿಸಿದರು.<br>ಬೃಹತ್ ಗುರಿಯನ್ನು ಬೆನ್ನತ್ತಿದ ಚಿತ್ರದುರ್ಗ ತಂಡಕ್ಕೆ ದಾವಣಗೆರೆಯ ಎಡಗೈ ಸ್ಪಿನ್ನರ್ ಕೆ.ಸಿ. ವೀರೇಶ್ (4ಕ್ಕೆ 4) ಮಾರಕವಾಗಿ ಪರಿಣಮಿಸಿದರು. 10 ಓವರ್ ಬೌಲಿಂಗ್ ಮಾಡಿದ ವೀರೇಶ್, 7 ಓವರ್ ಮೇಡನ್ ಎಸೆದರು. ಬ್ಯಾಟಿಂಗ್ನಲ್ಲಿ ಮಿಂಚಿದ್ದ ಎಸ್.ಶ್ರೇಯಸ್ ಪಟಪಟನೇ 3 ವಿಕೆಟ್ ಪಡೆಯುವ ಎದುರಾಳಿ ತಂಡದ ಬ್ಯಾಟಿಂಗ್ ಮೂಲಕ ಮಗ್ಗುಲು ಮುರಿದರು.</p>.<p>ಮಹಮ್ಮದ್ ಅಕ್ರಮ್, ಕೆ.ಎಸ್. ಶ್ರೇಷ್ಠ, ಬಿ.ಸೃಜನ್ ತಲಾ 1 ವಿಕೆಟ್ ಪಡೆದರು. ಚಿತ್ರದುರ್ಗ ತಂಡ ಕೇವಲ 104 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಪಂದ್ಯಾವಳಿಯಲ್ಲಿ ಎರಡನೇ ಸೋಲು ಅನುಭವಿಸಿತು.</p>.<p><strong>ತುಮಕೂರಿಗೆ ರೋಚಕ ಗೆಲುವು:</strong></p>.<p>ಮೊದಲ ಪಂದ್ಯದಲ್ಲಿ ಚಿತ್ರದುರ್ಗ ತಂಡದೆದುರು ಗೆಲುವ ಉ ಕಂಡಿದ್ದ ತುಮಕೂರು ಜಿಲ್ಲಾ ತಂಡ ಸೋಮವಾರ ಬಳ್ಳಾರಿ ವಿರುದ್ಧ 4 ರನ್ಗಳ ರೋಚಕ ಗೆಲುವು ಸಾಧಿಸಿತು.</p>.<p>ಇಲ್ಲಿನ ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಬಳ್ಳಾರಿ ತಂಡ ತೀವ್ರ ಹಣಾಹಣಿ ನಡೆಸಿಯೂ ಸೋಲೊಪ್ಪಿಕೊಂಡಿತು.</p>.<p>ಮೊದಲು ಬ್ಯಾಟ್ ಮಾಡಿದ ತುಮಕೂರು, ಆರಂಭಿಕ ಆಘಾತಕ್ಕೆ ಒಳಗಾಗಿತ್ತಾದರೂ, ಮಧ್ಯಮ ಕ್ರಮಾಂಕದ ಎ.ಎಂ. ಅಭಿನವ್ ಅಜೇಯ ಶತಕ (103 ರನ್, 148 ಎಸೆತ, 13 ಬೌಂಡರಿ, 1 ಸಿಕ್ಸರ್) ದೊಂದಿಗೆ ಉತ್ತಮ ಮೊತ್ತ ಪೇರಿಸಿತು. 46 ರನ್ (31 ಎಸೆತ, 7 ಬೌಂಡರಿ) ಗಳಿಸಿದ ಅಭಿ ಕೊನೆಯಲ್ಲಿ ಸೂಕ್ತ ಬೆಂಬಲ ನೀಡಿದ್ದರಿಂದ ತಂಡ 50 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತು.</p>.<p>ಬಳ್ಳಾರಿ ಪರ ಶೇಖ್ ಮಹಮ್ಮದ್ 3, ಪ್ರತೀಕ್ ಸಾಯಿ 3 ಹಾಗೂ ಅಭಿಷೇಕ್ ಮತ್ತು ರೋಹಿತ್ ರೆಡ್ಡಿ ತಲಾ 1 ವಿಕೆಟ್ ಗಳಿಸಿದರು.</p>.<p>237 ರನ್ಗಳ ಗುರಿ ಬೆನ್ನತ್ತಿದ ಬಳ್ಳಾರಿ ತಂಡ ರೋಹಿತ್ 66 (96 ಎಸೆತ, 9 ಬೌಂಡರಿ) ಹಾಗೂ ಆದಿಲ್ 44 (31 ಎಸೆತ, 8 ಬೌಂಡರಿ), ಅಮಿತ್ 28 (35 ಎಸೆತ, 2 ಬೌಂಡರಿ) ಅವರ ತೀವ್ರ ಹೋರಾಟದ ಹೊರತಾಗಿಯೂ ಕೇವಲ 4 ರನ್ಗಳ ಅಂತರದಲ್ಲಿ ಪರಾಭವಗೊಂಡಿತು.</p>.<p>ತುಮಕೂರು ಪರ ಕೆ.ಎಸ್. ರೋಹಿತ್ 39ಕ್ಕೆ 4 ವಿಕೆಟ್ ಗಳಿಸುವ ಮೂಲಕ ಗಮನ ಸೆಳೆದರು. ಅಭಿ 2, ನವೀನ್ಕುಮಾರ್, ಎಂ.ಜಿ. ಕಿಶೋರ್, ಲಕ್ಷಿತ್ ತಲಾ 1 ವಿಕೆಟ್ ಗಳಿಸಿದರು.</p>.<p>ಮಂಗಳವಾರ ನಡೆಯಲಿರುವ ಪಂದ್ಯಗಳಲ್ಲಿ ದಾವಣಗೆರೆ ತಂಡ ತುಮಕೂರು ವಿರುದ್ಧ, ಚಿತ್ರದುರ್ಗ ತಂಡ ಬಳ್ಳಾರಿ ವಿರುದ್ಧ ಸೆಣೆಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>