<p><strong>ಮಲೇಬೆನ್ನೂರು:</strong> ಸಮೀಪದ ದೇವರ ಬೆಳಕೆರೆ ಮೈಲಾರ ಲಿಂಗೇಶ್ವರ ರಥೋತ್ಸವದ ಪ್ರಯುಕ್ತ ಶನಿವಾರ ನಡೆದ ‘ಕಾಲಶಸ್ತ್ರ ಪವಾಡ’ ಜನಮನ ಸೂರೆಗೊಂಡಿತು.</p>.<p>ಗೊರವಪ್ಪ ತ್ರಿಶೂಲ ತೂರಿಸಿಕೊಂಡು ಇನ್ನೊಂದು ಬದಿಯಿಂದ ಹೊರಕ್ಕೆ ತೆಗೆದು ಪವಾಡ ಪ್ರದರ್ಶಿಸಿದರು. ಇನ್ನೊಂದು ಪವಾಡದಲ್ಲಿ, ಕೈಗೆ ಮುಳ್ಳಿನ ಮಾದರಿಯ ದೀಪ ಚುಚ್ಚಿಕೊಂಡು ದೇವತೆಗೆ ಆರತಿ ಮಾಡಿದರು. ನಂತರ ಕಂಬಕ್ಕೆ ಭದ್ರವಾಗಿ ಬಿಗಿಯಲಾಗಿದ್ದ ಸರಪಳಿಯನ್ನು ಎಳೆದು ತುಂಡು ಮಾಡುವ ಪ್ರದರ್ಶನ ನೀಡಿದರು.</p>.<p>ಪವಾಡ ಮಾಡಿದ್ದ ವ್ಯಕ್ತಿ ಭಂಡಾರ ಹಚ್ಚಿಕೊಂಡು ಯಾವುದೇ ನೋವು ಆಗದ ರೀತಿ ಸಾಮಾನ್ಯನಂತೆ ನಡೆದು ಹೋಗಿದ್ದು ವಿಶೇಷ. </p>.<p>ಭಕ್ತರು ‘ಏಳು ಕೋಟಿ, ಏಳು ಕೋಟಿ, ಏಳು ಕೋಟಿಗೋ.. ಚಾಂಗಮಲೋ’ ಎಂದು ಕೂಗಿದರು. ಓಕಳಿಯಾಟದೊಂದಿಗೆ ಉತ್ಸವಕ್ಕೆ ತೆರೆಬಿತ್ತು.</p>.<p>ದೀವಟಿಗೆ, ಚಾಮರ, ಚಾವಟಿ ಸೇವೆ, ಬಾಯಿಗೆ ಬೀಗ ಬೀಗ ಹಾಕಿಕೊಂಡವರು ಹರಕೆ ಸಮರ್ಪಣೆ ಮಾಡಿದರು.</p>.<p>ಮೈಲಾರ ಜಾತ್ರೆ ಮುಕ್ತಾಯವಾದ 3 ದಿನದ ನಂತರ ಇಲ್ಲಿ ಜಾತ್ರೆ ನಡೆಯುವ ಪರಂಪರೆ ಹಿಂದಿನಿಂದ ನಡೆದು ಬಂದಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.</p>.<p>ಸುತ್ತಮುತ್ತಲ ಪ್ರದೇಶಗಳಿಂದ ಸಾವಿರಾರು ಜನರು ಪವಾಡ ವೀಕ್ಷಣೆಗೆ ಆಗಮಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು:</strong> ಸಮೀಪದ ದೇವರ ಬೆಳಕೆರೆ ಮೈಲಾರ ಲಿಂಗೇಶ್ವರ ರಥೋತ್ಸವದ ಪ್ರಯುಕ್ತ ಶನಿವಾರ ನಡೆದ ‘ಕಾಲಶಸ್ತ್ರ ಪವಾಡ’ ಜನಮನ ಸೂರೆಗೊಂಡಿತು.</p>.<p>ಗೊರವಪ್ಪ ತ್ರಿಶೂಲ ತೂರಿಸಿಕೊಂಡು ಇನ್ನೊಂದು ಬದಿಯಿಂದ ಹೊರಕ್ಕೆ ತೆಗೆದು ಪವಾಡ ಪ್ರದರ್ಶಿಸಿದರು. ಇನ್ನೊಂದು ಪವಾಡದಲ್ಲಿ, ಕೈಗೆ ಮುಳ್ಳಿನ ಮಾದರಿಯ ದೀಪ ಚುಚ್ಚಿಕೊಂಡು ದೇವತೆಗೆ ಆರತಿ ಮಾಡಿದರು. ನಂತರ ಕಂಬಕ್ಕೆ ಭದ್ರವಾಗಿ ಬಿಗಿಯಲಾಗಿದ್ದ ಸರಪಳಿಯನ್ನು ಎಳೆದು ತುಂಡು ಮಾಡುವ ಪ್ರದರ್ಶನ ನೀಡಿದರು.</p>.<p>ಪವಾಡ ಮಾಡಿದ್ದ ವ್ಯಕ್ತಿ ಭಂಡಾರ ಹಚ್ಚಿಕೊಂಡು ಯಾವುದೇ ನೋವು ಆಗದ ರೀತಿ ಸಾಮಾನ್ಯನಂತೆ ನಡೆದು ಹೋಗಿದ್ದು ವಿಶೇಷ. </p>.<p>ಭಕ್ತರು ‘ಏಳು ಕೋಟಿ, ಏಳು ಕೋಟಿ, ಏಳು ಕೋಟಿಗೋ.. ಚಾಂಗಮಲೋ’ ಎಂದು ಕೂಗಿದರು. ಓಕಳಿಯಾಟದೊಂದಿಗೆ ಉತ್ಸವಕ್ಕೆ ತೆರೆಬಿತ್ತು.</p>.<p>ದೀವಟಿಗೆ, ಚಾಮರ, ಚಾವಟಿ ಸೇವೆ, ಬಾಯಿಗೆ ಬೀಗ ಬೀಗ ಹಾಕಿಕೊಂಡವರು ಹರಕೆ ಸಮರ್ಪಣೆ ಮಾಡಿದರು.</p>.<p>ಮೈಲಾರ ಜಾತ್ರೆ ಮುಕ್ತಾಯವಾದ 3 ದಿನದ ನಂತರ ಇಲ್ಲಿ ಜಾತ್ರೆ ನಡೆಯುವ ಪರಂಪರೆ ಹಿಂದಿನಿಂದ ನಡೆದು ಬಂದಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.</p>.<p>ಸುತ್ತಮುತ್ತಲ ಪ್ರದೇಶಗಳಿಂದ ಸಾವಿರಾರು ಜನರು ಪವಾಡ ವೀಕ್ಷಣೆಗೆ ಆಗಮಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>