ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಬರಿಗೆ ಅವಕಾಶ ಅಂದ್ರೆ ರೇಣುಕಾಚಾರ್ಯನೂ ಮಂತ್ರಿಯಾಗಲ್ಲ: ಶಾಸಕ ರವೀಂದ್ರನಾಥ್‌

Last Updated 25 ಜನವರಿ 2022, 3:27 IST
ಅಕ್ಷರ ಗಾತ್ರ

ದಾವಣಗೆರೆ: ‘ಹೊಸಬರಿಗೆ ಅವಕಾಶ ಕೊಡಿ ಎಂದು ಕೇಳಲು ಹೋದರೆ ನಾನೂ ಮಂತ್ರಿಯಾಗಲ್ಲ, ರೇಣುಕಾಚಾರ್ಯನೂ ಮಂತ್ರಿಯಾಗಲ್ಲ. ಯಾಕೆಂದರೆ ನಾವು ಹಿಂದೆ ಮಂತ್ರಿಯಾಗಿದ್ದವರು’ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಅವರು ಮಾತನಾಡಿ, ‘ಗುಜರಾತ್‌ ಮಾದರಿ ಆದರೆ ಹಿಂದೆ ಮಂತ್ರಿ ಆದವರು ಯಾರೂ ಮತ್ತೆ ಮಂತ್ರಿ ಆಗಲು ಆಗುವುದಿಲ್ಲ. ಹೊಸಬರಿಗೆ ಅವಕಾಶ ಕೊಡಿ ಎಂದು ರೇಣುಕಾಚಾರ್ಯ ಹೇಳುವುದಾದರೆ ನಾನೂ ಅದೇ
ಮಾತು ಹೇಳುತ್ತೇನೆ’ ಎಂದು ತಿಳಿಸಿದರು.

ನೀವು ಪಕ್ಷ ಕಟ್ಟಿದ ಹಿರಿಯರು ಎಂದು ಸುದ್ದಿಗಾರರು ತಿಳಿಸಿದಾಗ, ‘ಅದೇ ಅಪಾಯ ಈಗ ಆಗಿರೋದು’ ಎಂದು ಪ್ರತಿಕ್ರಿಯಿಸಿದ ಶಾಸಕರು, ‘ನನಗೆ ಮಂತ್ರಿ ಸ್ಥಾನ ನೀಡಿದರೆ ಒಳ್ಳೆಯ ಕೆಲಸ ಮಾಡುತ್ತೇನೆ’ ಎಂದುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT