ದಾವಣಗೆರೆ: ‘33 ವರ್ಷ ಸರ್ಕಾರಿ ಸೇವೆಯಲ್ಲಿದ್ದುಕೊಂಡು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದೆ. ಮಸ್ಟರಿಂಗ್, ಡಿಮಸ್ಟರಿಂಗ್ ನಡೆಸಿದ್ದೆ. ಜತೆಗೆ ಪ್ರತಿಬಾರಿಯೂ ಮತ ಚಲಾಯಿಸಿದ್ದೆ. ಈ ಬಾರಿ ನನ್ನ ಹೆಸರೇ ಪಟ್ಟಿಯಲ್ಲಿ ಇಲ್ಲ’ ಎಂದು ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಶಿವಕುಮಾರ ಬಡಾವಣೆ ನಿವಾಸಿ ಜಿ. ಚಂದ್ರಯ್ಯ ನೊಂದುಕೊಂಡರು.