ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಜ್ಞಾನ ಪರಿಷತ್ತಿನ ಬೈಲಾಗೆ ತಿದ್ದುಪಡಿಗೆ ಆದ್ಯತೆ’

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಚುನಾವಣೆ 23ಕ್ಕೆ
Last Updated 20 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ದಾವಣಗೆರೆ: ‘ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಚುನಾವಣೆ ಫೆ. 23ರಂದು ನಡೆಯಲಿದೆ. ಚುನಾವಣೆಗೆ ಬೆಂಗಳೂರು ವಿಭಾಗದಿಂದ ಸ್ಪರ್ಧಿಸುತ್ತಿದ್ದು, ಪರಿಷತ್ತಿನ ಬೈಲಾಗೆ ತಿದ್ದುಪಡಿ ತರಲು ನಮ್ಮ ತಂಡ ಆದ್ಯತೆ ನೀಡಲಿದೆ’ ಎಂದು ಅಭ್ಯರ್ಥಿ ಎಂ. ಗುರುಸಿದ್ಧಸ್ವಾಮಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಷತ್ತು ಇಂದು ಮೂಲ ಆಶಯ ಕಳೆದುಕೊಂಡಿದೆ. ಈಗಿನ ಬೈಲಾದಲ್ಲಿ ಒಂದು ಮನೆಯ, ಒಂದು ಊರಿನ ಎಲ್ಲರೂಮತದಾರರಾಗಲು ಅವಕಾಶ ಇದೆ. ಈಗ ಒಂದು ಶಾಲೆಯಲ್ಲೇ 290 ಮತಗಳು ಇವೆ. ಹೀಗಾಗಿ ಬೈಲಾಗೆ ತಿದ್ದುಪಡಿ ಅಗತ್ಯವಿದೆ. ನಮ್ಮ ಸಮಾನ ಮನಸ್ಕರ ತಂಡ ಚುನಾವಣೆಯಲ್ಲಿ ಆಯ್ಕೆಯಾದರೆ ಇದಕ್ಕೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

‘ಪ್ರತಿ ಜಿಲ್ಲೆಗೂ ಪ್ರಾತಿನಿಧ್ಯ ಸಿಗಬೇಕು ಎಂಬುದು ನಮ್ಮ ಆಶಯ. ಸಮಾನ ಮನಸ್ಕರ ತಂಡದಲ್ಲಿ ಸ್ಪರ್ಧಿಸಿರುವ 6 ಜನರೂ ಒಂದೊಂದು ಜಿಲ್ಲೆಯವರು. ರಾಜ್ಯದಲ್ಲಿ ಒಟ್ಟು 4 ವಿಭಾಗಗಳಿದ್ದು, 9800 ಜನ ಮತದಾರರು ಇದ್ದಾರೆ. ಬೆಂಗಳೂರು ವಿಭಾಗ 10 ಜಿಲ್ಲೆ ಒಳಗೊಂಡಿದ್ದು, 2203 ಮತದಾರರು ಇದ್ದಾರೆ. ದಾವಣಗೆರೆಯಲ್ಲಿ 148 ಮತದಾರರು ಇದ್ದಾರೆ’ ಎಂದು ಮಾಹಿತಿ ನೀಡಿದರು.

ಪರಿಷತ್ತು ಸ್ವಾಯತ್ತ ಸಂಸ್ಥೆಯಾದರೂ ಸ್ವಾಯತ್ತತೆ ಕಾಪಾಡಲು ವಿಫಲವಾಗಿದೆ. ಸ್ವಾಯತ್ತತೆ ತರಲು ಈಗಿನ ತಂಡದವರು ಗಮನಹರಿಸುತ್ತಿಲ್ಲ ಎಂದು ಆರೋಪಿಸಿದ ಅವರು, ‘ಪವಾಡ ಬಯಲು, ಗ್ರಹಣ ವೀಕ್ಷಣೆ ಸೇರಿ ಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಹಲವು ಕಾರ್ಯಕ್ರಮ ತಂಡದಿಂದ ಆಯೋಜಿಸಲಾಗಿದೆ. ನಮ್ಮ ತಂಡಕ್ಕೆದಾನಿ ಸದಸ್ಯರು ಮತ ನೀಡಬೇಕು’ ಎಂದು ಮನವಿ ಮಾಡಿದರು.

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಬಿ. ರಂಗಸ್ವಾಮಿ, ‘ಗುರುಸಿದ್ಧಸ್ವಾಮಿ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಅವರಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

ಆವರಗೆರೆ ರುದ್ರಮುನಿ, ಸಿದ್ದೇಶ್‌ ಕೆ., ಎಚ್‌.ಕೆ. ವಿವೇಕಾನಂದಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT