ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಷತ್ತು ಇಂದು ಮೂಲ ಆಶಯ ಕಳೆದುಕೊಂಡಿದೆ. ಈಗಿನ ಬೈಲಾದಲ್ಲಿ ಒಂದು ಮನೆಯ, ಒಂದು ಊರಿನ ಎಲ್ಲರೂಮತದಾರರಾಗಲು ಅವಕಾಶ ಇದೆ. ಈಗ ಒಂದು ಶಾಲೆಯಲ್ಲೇ 290 ಮತಗಳು ಇವೆ. ಹೀಗಾಗಿ ಬೈಲಾಗೆ ತಿದ್ದುಪಡಿ ಅಗತ್ಯವಿದೆ. ನಮ್ಮ ಸಮಾನ ಮನಸ್ಕರ ತಂಡ ಚುನಾವಣೆಯಲ್ಲಿ ಆಯ್ಕೆಯಾದರೆ ಇದಕ್ಕೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.