<p><strong>ಮಲೇಬೆನ್ನೂರು</strong>: ಸಮೀಪದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯದ ಕಾರ್ಣೀಕದ ಕಟ್ಟೆಯಲ್ಲಿ ಮಂಗಳವಾರ ತುಂತುರು ಮಳೆ ಸಿಂಚನದ ನಡುವೆ ಕಾರ್ಣೀಕೋತ್ಸವ ವೈಭವದಿಂದ ಜರುಗಿತು.</p>.<p>ಹರಳಹಳ್ಳಿ ಆಂಜನೇಯ ಸ್ವಾಮಿ ಆವಾಹಿತ ವ್ಯಕ್ತಿ ʼ ಕರಿ ಕಂಬಳಿ ಮೇಲೆ ಮುತ್ತಿನ ರಾಶಿ, ಸುರಿದೀತಲೆ ರಾಶಿ ಮೂರಾದೀತಲೆ ಎಚ್ಚರʼ ಎಂದು ನುಡಿದ.</p>.<p>ಮುಂದಿನ ದಿನಮಾನಗಳ ಕುರಿತು ಕಾರ್ಣೀಕೋತ್ಸವ ಆಲಿಸಲು ಸುತ್ತಮುತ್ತಲ ಗ್ರಾಮಗಳಿಂದ ಸಹಸ್ರಾರು ಸಂಖ್ಯೆ ಜನತೆ ಆಗಮಿಸಿದ್ದರು.</p>.<p>ರಾಜಬೀದಿ ಉತ್ಸವ: ಕಾರ್ಣೀಕೋತ್ಸವಕ್ಕೂ ಮುನ್ನ ಗ್ರಾಮದ ರಾಜಬೀದಿಯಲ್ಲಿ ಹರಳಹಳ್ಳಿ ಆಂಜನೇಯ ಸ್ವಾಮಿ, ಹಿರೆಹಾಲಿವಾಣದ ಏಳೂರು ಕರಿಯಮ್ಮ, ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.</p>.<p>ಪಟ್ಟಣದ ಜೋಯ್ಸರ ಬೀದಿಯಲ್ಲಿ ಕಾರ್ಣೀಕ ಹೇಳುವ ಹರಳಹಳ್ಳಿ ಆಂಜನೇಯಸ್ವಾಮಿಗೆ 'ತುಳಸಿಹಾರ' ಸಮರ್ಪಿಸಿ ಪೂಜೆ ಮಾಡಿ ಬೀಳ್ಕೊಟ್ಟರು.</p>.<p>ಕೊಂಬು. ಕಹಳೆ, ಮಂಗಳವಾದ್ಯ, ಜಾಗಟೆ ಮೇಳ, ಗೊರವರ ತಂಡ, ಜಾಂಚ್ ಮೇಳ, ನಾಸಿಕ್ ಡೋಲು. ಭೂತದ ಹಲಗೆ ಹಿಡಿದವರು, ದಾಸರು, ಗೊರವರ ತಂಡ, ಡೊಳ್ಳು, ತಮಟೆ ಮೇಳ ಉತ್ಸವಕ್ಕೆ ಕಳೆ ತಂದಿದ್ದವು.</p>.<p>ಬೀರಲಿಂಗೇಶ್ವರ, ದುರ್ಗಾಂಬಿಕ, ಏಕನಾಥೇಶ್ವರಿ, ಕೋಡಿಮಾರೇಶ್ವರಿ, ಕಾಳಮ್ಮ, ಜೋಡಿ ಆಂಜನೇಯ ಉತ್ಸವಮೂರ್ತಿಗಳು ಸುತ್ತಮುತ್ತಲ ಗ್ರಾಮಗಳಾದ ದಿಬ್ಬದಹಳ್ಳಿ, ಕೊಪ್ಪ, ಹಾಲಿವಾಣ, ತಿಮ್ಲಾಪುರದಿಂದ ಆಗಮಿಸಿದ್ದವು.</p>.<p>ಕೆರೆ ಬಯಲಿನ ಜಾತ್ರೆಗೆ ಜನಸಾಗರ ಹರಿದುಬಂದು ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಾರ ಮಂಡಕ್ಕಿ, ಮೆಣಸಿನಕಾಯಿ, ಬೆಂಡು ಬತ್ತಾಸು, ಐಸ್ ಕ್ರೀಂ, ಜ್ಯೂಸ್ ಸ್ಟಾಲ್. ಬಲೂನ್, ಆಟಿಕೆ ಸಾಮಾನು, ಪೂಜಾ ಸಾಮಗ್ರಿ ಅಂಗಡಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಆಗಿದ್ದು ವಿಶೇಷ.</p>.<p>ಟ್ರಾಕ್ಟರ್, ಆಟೋ, ದ್ವಿಚಕ್ರವಾಹನ, ಕಾರುಗಳ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಪೊಲೀಸರು ಭದ್ರತೆ ಒದಗಿಸಿ ಸುಗಮ ವಾಹನ ಸಂಚಾರ ವ್ಯವಸ್ಥೆ ಮಾಡಿದ್ದರು.</p>.<p><strong>ಹೆಳವನಕಟ್ಟೆ ಗಿರಿಯಮ್ಮ ಸಂಸ್ಮರಣೆ</strong>: ಹರಿಹರ ದಾಸ ಸಾಹಿತಿ ಹೆಳವನಕಟ್ಟೆ ಗಿರಿಯಮ್ಮನ ಐಕ್ಯದಿನವನ್ನು ಕೊಮಾರನಹಳ್ಳಿಯ ದೇವಾಲಯದಲ್ಲಿ ಮಂಗಳವಾರ ಆಚರಿಸಿದರು.</p>.<p>ಸಂಸ್ಮರಣಾ ದಿನದ ಪ್ರಯುಕ್ತ ಮೂಲ ವಿಗ್ರಹಕ್ಕೆ ವಿಶೇಷ ಪೂಜೆ, ವಸಂತೋತ್ಸವ, ಗಿರಿಯಮ್ಮ ವಿರಚಿತ ಗೀತೆಗಳನ್ನು ಹಾಡಿದರು.</p>.<p><strong>ಹುತ್ತ ಪೂಜೆ</strong>: ನಾಗರ ಪಂಚಮಿ ಹಬ್ಬದ ಪ್ರಯುಕ್ತ ಕೆಲವೆಡೆ ಹುತ್ತಕ್ಕೆ ಹಾಲೆರದು ಮಹಿಳೆಯರು ಪೂಜೆ ಸಲ್ಲಿಸಿದರು. ಮಕ್ಕಳು ಜೋಕಾಲಿ ಆಡಿ ಸಂಭ್ರಮಿಸಿದರು.</p>.<p>ಕುಂಬಳೂರು ಹನುಮಂತ ದೇವರ ಕಾರ್ಣೀಕ ʼಬಸವನ ಪಾದಕ್ಕೆ ಗೆಜ್ಜೆ ಬಿಗಿದೀತು, ಆಕಾಶಕ್ಕೆ ಸಿಡಿಲು ಬಡಿದು ಮುತ್ತಿನ ಮಳೆ ಸುರಿಸೀತು, ಕಾಳಿಂಗ ಸರ್ಪ ವಿಷ ಕಕ್ಕಿ ಅಮೃತ ಕುಡಿದೀತು, ಸಂಪುʼ</p>.<p>ದೇವರಬೆಳಕೆರೆ ಮೈಲಾರ ಲಿಂಗೇಶ್ವರ ಕಾರ್ಣೀಕ’ ಕಂಚಿನ ಗಂಗಾಳದಾಗ ಪಂಜರದ ಗಿಳಿ ಕುತೀತಲೆ ಪರಾಕ್ʼ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು</strong>: ಸಮೀಪದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯದ ಕಾರ್ಣೀಕದ ಕಟ್ಟೆಯಲ್ಲಿ ಮಂಗಳವಾರ ತುಂತುರು ಮಳೆ ಸಿಂಚನದ ನಡುವೆ ಕಾರ್ಣೀಕೋತ್ಸವ ವೈಭವದಿಂದ ಜರುಗಿತು.</p>.<p>ಹರಳಹಳ್ಳಿ ಆಂಜನೇಯ ಸ್ವಾಮಿ ಆವಾಹಿತ ವ್ಯಕ್ತಿ ʼ ಕರಿ ಕಂಬಳಿ ಮೇಲೆ ಮುತ್ತಿನ ರಾಶಿ, ಸುರಿದೀತಲೆ ರಾಶಿ ಮೂರಾದೀತಲೆ ಎಚ್ಚರʼ ಎಂದು ನುಡಿದ.</p>.<p>ಮುಂದಿನ ದಿನಮಾನಗಳ ಕುರಿತು ಕಾರ್ಣೀಕೋತ್ಸವ ಆಲಿಸಲು ಸುತ್ತಮುತ್ತಲ ಗ್ರಾಮಗಳಿಂದ ಸಹಸ್ರಾರು ಸಂಖ್ಯೆ ಜನತೆ ಆಗಮಿಸಿದ್ದರು.</p>.<p>ರಾಜಬೀದಿ ಉತ್ಸವ: ಕಾರ್ಣೀಕೋತ್ಸವಕ್ಕೂ ಮುನ್ನ ಗ್ರಾಮದ ರಾಜಬೀದಿಯಲ್ಲಿ ಹರಳಹಳ್ಳಿ ಆಂಜನೇಯ ಸ್ವಾಮಿ, ಹಿರೆಹಾಲಿವಾಣದ ಏಳೂರು ಕರಿಯಮ್ಮ, ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.</p>.<p>ಪಟ್ಟಣದ ಜೋಯ್ಸರ ಬೀದಿಯಲ್ಲಿ ಕಾರ್ಣೀಕ ಹೇಳುವ ಹರಳಹಳ್ಳಿ ಆಂಜನೇಯಸ್ವಾಮಿಗೆ 'ತುಳಸಿಹಾರ' ಸಮರ್ಪಿಸಿ ಪೂಜೆ ಮಾಡಿ ಬೀಳ್ಕೊಟ್ಟರು.</p>.<p>ಕೊಂಬು. ಕಹಳೆ, ಮಂಗಳವಾದ್ಯ, ಜಾಗಟೆ ಮೇಳ, ಗೊರವರ ತಂಡ, ಜಾಂಚ್ ಮೇಳ, ನಾಸಿಕ್ ಡೋಲು. ಭೂತದ ಹಲಗೆ ಹಿಡಿದವರು, ದಾಸರು, ಗೊರವರ ತಂಡ, ಡೊಳ್ಳು, ತಮಟೆ ಮೇಳ ಉತ್ಸವಕ್ಕೆ ಕಳೆ ತಂದಿದ್ದವು.</p>.<p>ಬೀರಲಿಂಗೇಶ್ವರ, ದುರ್ಗಾಂಬಿಕ, ಏಕನಾಥೇಶ್ವರಿ, ಕೋಡಿಮಾರೇಶ್ವರಿ, ಕಾಳಮ್ಮ, ಜೋಡಿ ಆಂಜನೇಯ ಉತ್ಸವಮೂರ್ತಿಗಳು ಸುತ್ತಮುತ್ತಲ ಗ್ರಾಮಗಳಾದ ದಿಬ್ಬದಹಳ್ಳಿ, ಕೊಪ್ಪ, ಹಾಲಿವಾಣ, ತಿಮ್ಲಾಪುರದಿಂದ ಆಗಮಿಸಿದ್ದವು.</p>.<p>ಕೆರೆ ಬಯಲಿನ ಜಾತ್ರೆಗೆ ಜನಸಾಗರ ಹರಿದುಬಂದು ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಾರ ಮಂಡಕ್ಕಿ, ಮೆಣಸಿನಕಾಯಿ, ಬೆಂಡು ಬತ್ತಾಸು, ಐಸ್ ಕ್ರೀಂ, ಜ್ಯೂಸ್ ಸ್ಟಾಲ್. ಬಲೂನ್, ಆಟಿಕೆ ಸಾಮಾನು, ಪೂಜಾ ಸಾಮಗ್ರಿ ಅಂಗಡಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಆಗಿದ್ದು ವಿಶೇಷ.</p>.<p>ಟ್ರಾಕ್ಟರ್, ಆಟೋ, ದ್ವಿಚಕ್ರವಾಹನ, ಕಾರುಗಳ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಪೊಲೀಸರು ಭದ್ರತೆ ಒದಗಿಸಿ ಸುಗಮ ವಾಹನ ಸಂಚಾರ ವ್ಯವಸ್ಥೆ ಮಾಡಿದ್ದರು.</p>.<p><strong>ಹೆಳವನಕಟ್ಟೆ ಗಿರಿಯಮ್ಮ ಸಂಸ್ಮರಣೆ</strong>: ಹರಿಹರ ದಾಸ ಸಾಹಿತಿ ಹೆಳವನಕಟ್ಟೆ ಗಿರಿಯಮ್ಮನ ಐಕ್ಯದಿನವನ್ನು ಕೊಮಾರನಹಳ್ಳಿಯ ದೇವಾಲಯದಲ್ಲಿ ಮಂಗಳವಾರ ಆಚರಿಸಿದರು.</p>.<p>ಸಂಸ್ಮರಣಾ ದಿನದ ಪ್ರಯುಕ್ತ ಮೂಲ ವಿಗ್ರಹಕ್ಕೆ ವಿಶೇಷ ಪೂಜೆ, ವಸಂತೋತ್ಸವ, ಗಿರಿಯಮ್ಮ ವಿರಚಿತ ಗೀತೆಗಳನ್ನು ಹಾಡಿದರು.</p>.<p><strong>ಹುತ್ತ ಪೂಜೆ</strong>: ನಾಗರ ಪಂಚಮಿ ಹಬ್ಬದ ಪ್ರಯುಕ್ತ ಕೆಲವೆಡೆ ಹುತ್ತಕ್ಕೆ ಹಾಲೆರದು ಮಹಿಳೆಯರು ಪೂಜೆ ಸಲ್ಲಿಸಿದರು. ಮಕ್ಕಳು ಜೋಕಾಲಿ ಆಡಿ ಸಂಭ್ರಮಿಸಿದರು.</p>.<p>ಕುಂಬಳೂರು ಹನುಮಂತ ದೇವರ ಕಾರ್ಣೀಕ ʼಬಸವನ ಪಾದಕ್ಕೆ ಗೆಜ್ಜೆ ಬಿಗಿದೀತು, ಆಕಾಶಕ್ಕೆ ಸಿಡಿಲು ಬಡಿದು ಮುತ್ತಿನ ಮಳೆ ಸುರಿಸೀತು, ಕಾಳಿಂಗ ಸರ್ಪ ವಿಷ ಕಕ್ಕಿ ಅಮೃತ ಕುಡಿದೀತು, ಸಂಪುʼ</p>.<p>ದೇವರಬೆಳಕೆರೆ ಮೈಲಾರ ಲಿಂಗೇಶ್ವರ ಕಾರ್ಣೀಕ’ ಕಂಚಿನ ಗಂಗಾಳದಾಗ ಪಂಜರದ ಗಿಳಿ ಕುತೀತಲೆ ಪರಾಕ್ʼ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>