‘ಅವರೆಗೆ ರೋಗಕ್ಕಿಂತ ಹುಳಗಳ ಬಾಧೆ ಬಹಳವಾಗಿದ್ದು, 15 ದಿನಗಳಿಗೆ ಒಮ್ಮೆ ಕೀಟನಾಶಕ ಸಿಂಪರಣೆ ಮಾಡಬೇಕಿದೆ. ಮೋಡ ಕವಿದ ವಾತಾವರಣ ಹೆಚ್ಚಾದಾಗ ಹುಳಗಳು ಹೆಚ್ಚಾಗಿ ಕಂಡುಬರುವುದರಿಂದ ನಿರಂತರ ಕಾಳಜಿ ಅಗತ್ಯ. ಹುಳ ಕೊರೆದ ಕಾಯಿಗಳನ್ನು ಸಾರ್ವಜನಿಕರು ಕೊಳ್ಳುವುದಿಲ್ಲ. ಗೊಬ್ಬರ, ಬೀಜ, ನಿತ್ಯ ಹಸಿಕಾಯಿಗಳ ಕೊಯ್ಲು, ಸಾಗಣೆ ಸೇರಿ ಎಕರೆಗೆ ಸುಮಾರು ₹12,000 ಖರ್ಚು ಬರುತ್ತಿದೆ. ಪ್ರತಿದಿನ ಎರಡು ಕ್ವಿಂಟಲ್ ಹಸಿ ಅವರೆ ಸಿಗುತ್ತಿದೆ. ಸೀಜನ್ ಮುಗಿಯುವ ವೇಳೆಗೆ ಎಕರೆಗೆ 12ರಿಂದ 13 ಕ್ವಿಂಟಲ್ ಹಸಿ ಅವರೆ ಕೈಗೆ ಬರುತ್ತದೆ. ಸ್ಥಳೀಯವಾಗಿಯೇ ಕ್ವಿಂಟಲ್ಗೆ ₹4,000ದಂತೆ ಅವರೆಕಾಯಿ ಮಾರುತ್ತಿದ್ದೇವೆ. ಜವಾರಿ ಕಾಯಿಗೆ ನಿರಂತರ ಬೇಡಿಕೆ ಇದೆ’ ಎನ್ನುತ್ತಾರೆ ಅವರು.