ಮಲೇಬೆನ್ನೂರು: ಸಮೀಪದ ಕೋಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ವೈಭವದಿಂದ ಜರುಗಿತು.
ಶ್ರೀದೇವಿ–ಭೂದೇವಿಯೊಂದಿಗೆ ರಂಗನಾಥಸ್ವಾಮಿ ಕಲ್ಯಾಣೋತ್ಸವ ನಡೆಯಿತು. ಗಜೇಂದ್ರಮೋಕ್ಷದ ನಂತರ ಉತ್ಸವಮೂರ್ತಿ ಪಲ್ಲಕ್ಕಿ ಉತ್ಸವದ ಗ್ರಾಮ ಪ್ರದಕ್ಷಿಣೆ ಮಾಡಿತು. ದೇವಾಲಯದ ಯಾಗಶಾಲೆಯಲ್ಲಿ ರಥ ಶಾಂತಿ, ಶ್ರೀಚಕ್ರ ಪೂಜೆ, ಪುಣ್ಯಾಹವಾಚನ, ಹೋಮ ಹವನ ನಡೆದವು.
ರಾಷ್ಟ್ರಾಶೀರ್ವಾದ, ಮಂತ್ರಪುಷ್ಪ, ವಿಪ್ರ ಸಮುದಾಯದವರ ವೇದಘೋಷ, ಮಂಗಳಾಷ್ಟಕಗಳ ಪಠಣದ ಮಧ್ಯೆ ಅಷ್ಟದಿಕ್ಷಾಲಕರು, ರಥಕ್ಕೆ ಬಲಿ ಹಾಕಿದ ನಂತರ ಉತ್ಸವಮೂರ್ತಿ ರಥಾರೋಹಣದ ನಂತರ ತಹಶೀಲ್ದಾರ್ ಡಾ.ಎಂ.ಬಿ. ಅಶ್ವತ್ಥ್ ರಥಪೂಜೆ ನೆರವೇರಿಸಿದರು.