<p><strong>ಮಲೇಬೆನ್ನೂರು</strong>: ಸಮೀಪದ ಕೋಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ವೈಭವದಿಂದ ಜರುಗಿತು.</p>.<p>ಶ್ರೀದೇವಿ–ಭೂದೇವಿಯೊಂದಿಗೆ ರಂಗನಾಥಸ್ವಾಮಿ ಕಲ್ಯಾಣೋತ್ಸವ ನಡೆಯಿತು. ಗಜೇಂದ್ರಮೋಕ್ಷದ ನಂತರ ಉತ್ಸವಮೂರ್ತಿ ಪಲ್ಲಕ್ಕಿ ಉತ್ಸವದ ಗ್ರಾಮ ಪ್ರದಕ್ಷಿಣೆ ಮಾಡಿತು. ದೇವಾಲಯದ ಯಾಗಶಾಲೆಯಲ್ಲಿ ರಥ ಶಾಂತಿ, ಶ್ರೀಚಕ್ರ ಪೂಜೆ, ಪುಣ್ಯಾಹವಾಚನ, ಹೋಮ ಹವನ ನಡೆದವು.</p>.<p>ರಾಷ್ಟ್ರಾಶೀರ್ವಾದ, ಮಂತ್ರಪುಷ್ಪ, ವಿಪ್ರ ಸಮುದಾಯದವರ ವೇದಘೋಷ, ಮಂಗಳಾಷ್ಟಕಗಳ ಪಠಣದ ಮಧ್ಯೆ ಅಷ್ಟದಿಕ್ಷಾಲಕರು, ರಥಕ್ಕೆ ಬಲಿ ಹಾಕಿದ ನಂತರ ಉತ್ಸವಮೂರ್ತಿ ರಥಾರೋಹಣದ ನಂತರ ತಹಶೀಲ್ದಾರ್ ಡಾ.ಎಂ.ಬಿ. ಅಶ್ವತ್ಥ್ ರಥಪೂಜೆ ನೆರವೇರಿಸಿದರು.</p>.<p>ಭಕ್ತರು ರಥಕ್ಕೆ ಬಾಳೆಹಣ್ಣು, ತೆಂಗಿನಕಾಯಿ ಅರ್ಪಿಸಿದರು. ‘ಹರಹರ ಮಹಾದೇವ’, ‘ಲಕ್ಷ್ಮೀ ರಮಣ’, ‘ಇಂದಿರಾರಮಣ’, ‘ರಮಾರಮಣ ಗೋವಿಂದ’ ಉದ್ಘೋಷದೊಂದಿಗೆ ತೇರು ಎಳೆದರು.</p>.<p>ಮಂಗಳವಾದ್ಯ, ತಮಟೆ ಮೇಳ, ವಿಪ್ರ ಸಮೂಹದ ವೇದ ಘೋಷ ಮೆರವಣಿಗೆಗೆ ಮೆರುಗು ತಂದಿದ್ದವು.ರಥದಲ್ಲಿನ ಉತ್ಸವಮೂರ್ತಿಗೆ ಬನ್ನಿಪತ್ರೆ, ಹೂ, ಧ್ವಜ ಪತಾಕೆಗಳಿಂದ ರಥ ಹಾಗೂ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.</p>.<p>ಬಳಿಕ ಜನರು ಬನ್ನಿಪತ್ರೆ ಪಡೆದು ಪರಸ್ಪರ ವಿನಿಮಯ ಮಾಡಿಕೊಂಡರು.ಅನ್ನ ಸಂತರ್ಪಣೆ ನಡೆಯಿತು.ಪೊಲೀಸರು ಭದ್ರತೆ ಒದಗಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು</strong>: ಸಮೀಪದ ಕೋಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ವೈಭವದಿಂದ ಜರುಗಿತು.</p>.<p>ಶ್ರೀದೇವಿ–ಭೂದೇವಿಯೊಂದಿಗೆ ರಂಗನಾಥಸ್ವಾಮಿ ಕಲ್ಯಾಣೋತ್ಸವ ನಡೆಯಿತು. ಗಜೇಂದ್ರಮೋಕ್ಷದ ನಂತರ ಉತ್ಸವಮೂರ್ತಿ ಪಲ್ಲಕ್ಕಿ ಉತ್ಸವದ ಗ್ರಾಮ ಪ್ರದಕ್ಷಿಣೆ ಮಾಡಿತು. ದೇವಾಲಯದ ಯಾಗಶಾಲೆಯಲ್ಲಿ ರಥ ಶಾಂತಿ, ಶ್ರೀಚಕ್ರ ಪೂಜೆ, ಪುಣ್ಯಾಹವಾಚನ, ಹೋಮ ಹವನ ನಡೆದವು.</p>.<p>ರಾಷ್ಟ್ರಾಶೀರ್ವಾದ, ಮಂತ್ರಪುಷ್ಪ, ವಿಪ್ರ ಸಮುದಾಯದವರ ವೇದಘೋಷ, ಮಂಗಳಾಷ್ಟಕಗಳ ಪಠಣದ ಮಧ್ಯೆ ಅಷ್ಟದಿಕ್ಷಾಲಕರು, ರಥಕ್ಕೆ ಬಲಿ ಹಾಕಿದ ನಂತರ ಉತ್ಸವಮೂರ್ತಿ ರಥಾರೋಹಣದ ನಂತರ ತಹಶೀಲ್ದಾರ್ ಡಾ.ಎಂ.ಬಿ. ಅಶ್ವತ್ಥ್ ರಥಪೂಜೆ ನೆರವೇರಿಸಿದರು.</p>.<p>ಭಕ್ತರು ರಥಕ್ಕೆ ಬಾಳೆಹಣ್ಣು, ತೆಂಗಿನಕಾಯಿ ಅರ್ಪಿಸಿದರು. ‘ಹರಹರ ಮಹಾದೇವ’, ‘ಲಕ್ಷ್ಮೀ ರಮಣ’, ‘ಇಂದಿರಾರಮಣ’, ‘ರಮಾರಮಣ ಗೋವಿಂದ’ ಉದ್ಘೋಷದೊಂದಿಗೆ ತೇರು ಎಳೆದರು.</p>.<p>ಮಂಗಳವಾದ್ಯ, ತಮಟೆ ಮೇಳ, ವಿಪ್ರ ಸಮೂಹದ ವೇದ ಘೋಷ ಮೆರವಣಿಗೆಗೆ ಮೆರುಗು ತಂದಿದ್ದವು.ರಥದಲ್ಲಿನ ಉತ್ಸವಮೂರ್ತಿಗೆ ಬನ್ನಿಪತ್ರೆ, ಹೂ, ಧ್ವಜ ಪತಾಕೆಗಳಿಂದ ರಥ ಹಾಗೂ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.</p>.<p>ಬಳಿಕ ಜನರು ಬನ್ನಿಪತ್ರೆ ಪಡೆದು ಪರಸ್ಪರ ವಿನಿಮಯ ಮಾಡಿಕೊಂಡರು.ಅನ್ನ ಸಂತರ್ಪಣೆ ನಡೆಯಿತು.ಪೊಲೀಸರು ಭದ್ರತೆ ಒದಗಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>