ಕಾನೂನು ವಿಭಾಗದ ನ್ಯಾಯಾಂಗ, ವಕೀಲಿಕೆ, ಪೊಲೀಸ್ ಮತ್ತು ಜೈಲು ಸರಿಯಾಗಿ ಕಾರ್ಯನಿರ್ವಹಿಸಬೇಕು. ಅಮೆರಿಕ, ಫ್ರಾನ್ಸ್, ಜಪಾನ್ ಸಹಿತ ಮುಂದುವರಿದ ದೇಶಗಳಲ್ಲಿ ಅಧ್ಯಕ್ಷರ ಮಗನೇ ತಪ್ಪು ಮಾಡಿದರೂ ದಂಡ ವಿಧಿಸಲಾಗುತ್ತದೆ. ಭಾರತದಲ್ಲಿ ಸೈಕಲ್ ಕಳ್ಳರಿಗೆ, ಬಡವರಿಗೆ ಅಷ್ಟೇ ಶಿಕ್ಷೆ, ದಂಡ ಆಗುತ್ತದೆ. ಕೋಟ್ಯಂತರ ರೂಪಾಯಿ ವಂಚನೆ ಮಾಡಿದವರಿಗೆ ಶಿಕ್ಷೆಯಾಗುವುದಿಲ್ಲ.ಕಾನೂನು ವ್ಯವಸ್ಥೆಯನ್ನು ನಿರ್ಭೀತಿಯಿಂದ, ನಿಷ್ಪಕ್ಷಪಾತವಾಗಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಹಿತ ಯಾರೇ ಅಧಿಕಾರಕ್ಕೆ ಬಂದರೂ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾರೆ ಎಂದಾದರೆ ಅದು ಬರೀ ಭ್ರಮೆ ಎಂದು ವಿಷಾದ ವ್ಯಕ್ತಪಡಿಸಿದರು.