ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಜಿಲ್ಲಾಡಳಿತ ಸಭಾಂಗಣದಲ್ಲಿ ಜೈನಧರ್ಮದ 24ನೇ ತೀರ್ಥಂಕರ ಭಗವಾನ್ ಮಹಾವೀರರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.
‘ಮಹಾವೀರರು ಅಹಿಂಸೆ, ಸತ್ಯ, ಕಳ್ಳತನ ಮಾಡದಿರುವುದು, ಪರಿಶುದ್ಧತೆ, ಅನುಬಂಧ ವಚನ ಪಾಲಿಸುವುದು ಆಧ್ಯಾತ್ಮಿಕ ವಿಮೋಚನೆಗೆ ಅಗತ್ಯ ಎಂದು ಪ್ರತಿಪಾದಿಸಿದವರು. ಅವರ ತತ್ವ, ಆದರ್ಶಗಳು ಪ್ರಸ್ತುತವಾಗಿವೆ’ ಎಂದು ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜೈನ್ ಮೂರ್ತಿ ಪೂಜಕ್ ಸಂಘದ ಉಪಾಧ್ಯಕ್ಷ ಸುಪಾರ್ಶ್ವನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳನಾಯ್ಕ, ಶಿವಾಜಿ ಟಿ, ನರೇಂದ್ರ ಕುಮಾರ್, ಅಶೋಕ್ ಕುಮಾರ್ ವನೇಚಂದ್, ರಮೇಶ್, ಅಶೋಕ್ ಕುಮಾರ್ ಶ್ರೀ ಶ್ರೀ ಮಾಳ್, ಸುನಿಲ್ ಕುಮಾರ್ ಓಸ್ವಾಲ್, ಭಾವನ ಮೆಹೆತಾ, ದೀಪಕ್.ಜೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಮೆರವಣಿಗೆ: ಶ್ರೀ ಸುಪಾರ್ಶ್ವನಾಥ್ ಜೈನ್ ಶ್ವೇತಾಂಬರ್ ಮೂರ್ತಿಪೂಜಕ ಸಂಘದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಭಗವಾನ್ ಮಹಾವೀರರ ಭಾವಚಿತ್ರದ ಮೆರವಣಿಗೆ ನಡೆಯಿತು. ಎನ್.ಆರ್. ರಸ್ತೆ, ಮಂಡಿಪೇಟೆ, ಗಡಿಯಾರ ಕಂಬದ ರಸ್ತೆ, ವಿಜಯಲಕ್ಷ್ಮಿ ರಸ್ತೆಯಿಂದ ಚೌಕಿಪೇಟೆಯ ದೇವಸ್ಥಾನದಲ್ಲಿ ಮೆರವಣಿಗೆ ಮುಕ್ತಾಯಗೊಂಡಿತು.
ಆಚಾರ್ಯ ಭಗವಾನ್ ಶ್ರೀ ಮಹಾಸೇನ್ ಸುರೇಶ್ವರ್ ಜೀ ಮಹಾರಾಜ್, ಜೈನ ಸಮಾಜದ ಮುಖಂಡರಾದ ಛಗನ್ ಲಾಲ್ ಜೈನ್, ನರೇಂದ್ರ ಜೈನ್, ರಮೇಶ್ ಜೈನ್, ವಿಜಯರಾಜ್, ಗೌತಮ್ ಜೈನ್, ಅಶೋಕ್ ಜೈನ್, ದೀಪಕ್ ಜೈನ್ ಇನ್ನಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.