<p><strong>ದಾವಣಗೆರೆ:</strong> ಪಂಚಲೋಹದ ಮೂರ್ತಿ ಹಾಗೂ ಪಾದುಕೆಗಳನ್ನು ಕಳ್ಳತನ ಮಾಡಿ, ಮಹಿಳೆಯ ಕುತ್ತಿಗೆಯಿಂದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ಅಪರಾಧಿಗೆ ಇಲ್ಲಿನಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.</p>.<p>ಇಲ್ಲಿನ ಅಶೋಕನಗರದ ನಿವಾಸಿ ಬಸವರಾಜ್ ಶಿಕ್ಷೆಗೆ ಗುರಿಯಾದ ಆರೋಪಿ.ನಗರದ ದೇವರಾಜ್ ಅರಸ್ ಬಡಾವಣೆ 'ಸಿ' ಬ್ಲಾಕ್, 5ನೇ ಕ್ರಾಸ್ನ ಮನೆಯಲ್ಲಿ ನೀಲಮ್ಮ ಒಬ್ಬರೇ ವಾಸವಾಗಿದ್ದರು. 2014ರ ಮಾರ್ಚ್ 24ರಂದು ಬಸವರಾಜ್ ಮನೆಗೆ ನುಗ್ಗಿ ದೇವರ ಮನೆಯಲ್ಲಿದ್ದ ಪಂಚಲೋಹದ ಲಕ್ಷ್ಮೀದೇವಿಯ ಮೂರ್ತಿ ಹಾಗೂ 2 ಪಾದುಕೆಗಳನ್ನು ಕಳ್ಳತನ ಮಾಡಿದ.</p>.<p>ಬಳಿಕ ಅಲ್ಲಿದ್ದ ನೀಲಮ್ಮ ಅವರಿಗೆ ಚಾಕುವಿನಿಂದ ತಿವಿದು ಅವರ ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡ. ಆ ವೇಳೆ ಮನೆಯಿಂದ ಹೊರಗೆ ಓಡಿಹೋಗುತ್ತಿದ್ದಾಗ ಸಾರ್ವಜನಿಕರು ಬಸವರಾಜ್ನನ್ನು ಹಿಡಿದು ಬಸವನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ಸಿಬ್ಬಂದಿ ಮಾಲು ಸಮೇತ ಹಿಡಿದು ಪ್ರಕರಣ ದಾಖಲಿಸಿ ಆರೋಪಿಯ ವಿರುದ್ಧ ನಗರದ ಸಿಪಿಐ ಅವರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.</p>.<p>ಮಂಗಳವಾರ ವಿಚಾರಣೆ ನಡೆದು ನ್ಯಾಯಾಧೀಶರಾದ ಗೀತಾ ಕೆ.ಬಿ. ಅವರು ಆರೋಪಿ ಬಸವರಾಜನಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಅಭಿಯೋಜಕ ಎಸ್.ವಿ. ಪಾಟೀಲ್ ವಾದ ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಪಂಚಲೋಹದ ಮೂರ್ತಿ ಹಾಗೂ ಪಾದುಕೆಗಳನ್ನು ಕಳ್ಳತನ ಮಾಡಿ, ಮಹಿಳೆಯ ಕುತ್ತಿಗೆಯಿಂದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ಅಪರಾಧಿಗೆ ಇಲ್ಲಿನಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.</p>.<p>ಇಲ್ಲಿನ ಅಶೋಕನಗರದ ನಿವಾಸಿ ಬಸವರಾಜ್ ಶಿಕ್ಷೆಗೆ ಗುರಿಯಾದ ಆರೋಪಿ.ನಗರದ ದೇವರಾಜ್ ಅರಸ್ ಬಡಾವಣೆ 'ಸಿ' ಬ್ಲಾಕ್, 5ನೇ ಕ್ರಾಸ್ನ ಮನೆಯಲ್ಲಿ ನೀಲಮ್ಮ ಒಬ್ಬರೇ ವಾಸವಾಗಿದ್ದರು. 2014ರ ಮಾರ್ಚ್ 24ರಂದು ಬಸವರಾಜ್ ಮನೆಗೆ ನುಗ್ಗಿ ದೇವರ ಮನೆಯಲ್ಲಿದ್ದ ಪಂಚಲೋಹದ ಲಕ್ಷ್ಮೀದೇವಿಯ ಮೂರ್ತಿ ಹಾಗೂ 2 ಪಾದುಕೆಗಳನ್ನು ಕಳ್ಳತನ ಮಾಡಿದ.</p>.<p>ಬಳಿಕ ಅಲ್ಲಿದ್ದ ನೀಲಮ್ಮ ಅವರಿಗೆ ಚಾಕುವಿನಿಂದ ತಿವಿದು ಅವರ ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡ. ಆ ವೇಳೆ ಮನೆಯಿಂದ ಹೊರಗೆ ಓಡಿಹೋಗುತ್ತಿದ್ದಾಗ ಸಾರ್ವಜನಿಕರು ಬಸವರಾಜ್ನನ್ನು ಹಿಡಿದು ಬಸವನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ಸಿಬ್ಬಂದಿ ಮಾಲು ಸಮೇತ ಹಿಡಿದು ಪ್ರಕರಣ ದಾಖಲಿಸಿ ಆರೋಪಿಯ ವಿರುದ್ಧ ನಗರದ ಸಿಪಿಐ ಅವರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.</p>.<p>ಮಂಗಳವಾರ ವಿಚಾರಣೆ ನಡೆದು ನ್ಯಾಯಾಧೀಶರಾದ ಗೀತಾ ಕೆ.ಬಿ. ಅವರು ಆರೋಪಿ ಬಸವರಾಜನಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಅಭಿಯೋಜಕ ಎಸ್.ವಿ. ಪಾಟೀಲ್ ವಾದ ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>