ಇಲ್ಲಿನ ಅಶೋಕನಗರದ ನಿವಾಸಿ ಬಸವರಾಜ್ ಶಿಕ್ಷೆಗೆ ಗುರಿಯಾದ ಆರೋಪಿ.ನಗರದ ದೇವರಾಜ್ ಅರಸ್ ಬಡಾವಣೆ 'ಸಿ' ಬ್ಲಾಕ್, 5ನೇ ಕ್ರಾಸ್ನ ಮನೆಯಲ್ಲಿ ನೀಲಮ್ಮ ಒಬ್ಬರೇ ವಾಸವಾಗಿದ್ದರು. 2014ರ ಮಾರ್ಚ್ 24ರಂದು ಬಸವರಾಜ್ ಮನೆಗೆ ನುಗ್ಗಿ ದೇವರ ಮನೆಯಲ್ಲಿದ್ದ ಪಂಚಲೋಹದ ಲಕ್ಷ್ಮೀದೇವಿಯ ಮೂರ್ತಿ ಹಾಗೂ 2 ಪಾದುಕೆಗಳನ್ನು ಕಳ್ಳತನ ಮಾಡಿದ.