ಎಸ್ಬಿಐನಿಂದ ₹ 3.49 ಲಕ್ಷವನ್ನು ನಗದೀಕರಿಸಿಕೊಂಡು ಬಂದ ಚಂದ್ರಶೇಖರಪ್ಪ ಅವರು ತಮ್ಮ ಕಾರಿನಲ್ಲಿಟ್ಟು ಒಳಗೆ ಕುಳಿತಿದ್ದರು. ಅದೇ ವೇಳೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕಾರಿನ ಚಕ್ರದ ಬಳಿ ₹ 100 ಹಾಗೂ ₹ 10ರ ನೋಟು ಬಿದ್ದಿದೆ ಎಂದು ತೋರಿಸಿದ್ದಾರೆ. ತಮ್ಮದೇ ಹಣವಿರಬೇಕು ಎಂದು ಚಂದ್ರಶೇಖರಪ್ಪ ಅವರು ನೋಟನ್ನು ತೆಗೆದುಕೊಳ್ಳಲು ಹೋದಾಗಿ ಆ ವ್ಯಕ್ತಿಯು ಹಣದ ಬ್ಯಾಗನ್ನು ಎಗರಿಸಿಕೊಂಡು ಪರಾರಿಯಾಗಿದ್ದಾನೆ.