ದಾವಣಗೆರೆ: ಇಲ್ಲಿನ ಹಳೇ ಕುಂದುವಾಡದಲ್ಲಿ ಹಲವು ದಿನಗಳಿಂದ ದಾರಿಯಲ್ಲಿ ಹೋಗುತ್ತಿದ್ದ ಜನರ ಮೇಲೆ ದಾಳಿ ಮಾಡುತ್ತಿದ್ದ, ಮನೆಯ ಒಳಗೆ ನುಗ್ಗಿ ಆಹಾರದ ಪದಾರ್ಥಗಳನ್ನು ಒಯ್ಯುತ್ತಿದ್ದ ಮುಸಿಯಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸೆರೆ ಹಿಡಿದಿದ್ದಾರೆ.
ಗ್ರಾಮದಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರು, ಮಕ್ಕಳ ಮೇಲೆ ಮುಸಿಯಾ ದಾಳಿ ಮಾಡಿತ್ತು. ಇದರಿಂದ ಮಕ್ಕಳು ಶಾಲೆಗೆ ಹೋಗಲು, ವಾಪಸ್ ಮನೆಗೆ ತೆರಳಲು ಭಯಪಡುತ್ತಿದ್ದರು. ಬೈಕ್ನಲ್ಲಿ ಹೋಗುತ್ತಿದ್ದವರ ಹೆಗಲ ಮೇಲೆ ಓಡಿ ಬಂದು ಕೂತು ಕಚ್ಚುತ್ತಿತ್ತು. ಇದರಿಂದ ಹಲವರು ಬಿದ್ದು ಗಾಯಗೊಂಡಿದ್ದರು.
ಮನೆಯ ಹೆಂಚುಗಳನ್ನು ಕೀಳುತ್ತಿತ್ತು. ಮನೆಯೊಳಗೆ ನುಗ್ಗುತ್ತಿತ್ತು. ಮುಸಿಯಾ ಕೀಟಲೆಯಿಂದ ಬೇಸತ್ತು ಹೋಗಿದ್ದ ಜನರು ಅರಣ್ಯ ಇಲಾಖೆ ಉಪಸಂರಕ್ಷಣಾ ಅಧಿಕಾರಿ ಶಶಿಧರ್ ಅವರಿಗೆ ದೂರು ನೀಡಿದ್ದರು.
ದೂರಿನ ಹಿಲ್ಲೆಯಲ್ಲಿ ಕಾರ್ಯಾಚರಣೆಗೆ ಇಳಿದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ಕೈದು ದಿನದಿಂದ ಬೋನಿ ಇಟ್ಟಿದ್ದರು. ಗುರುವಾರ ಬೋನಿಗೆ ಮುಸಿಯಾ ಬಿದ್ದಿದೆ.
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇದಾಯಿತ್, ಹರೀಶ್, ಮರುಳಸಿದ್ದಪ್ಪ, ದೇವರಾಜ್, ಶರಣಪ್ಪ ಭಾಗವಹಿಸಿದ್ದರು.