ಕೆ.ಟಿ.ಜೆ. ನಗರದ 1ನೇ ಮೇನ್ 12 ಕ್ರಾಸ್ ನಿವಾಸಿ ಶಂಕರ ಪತ್ನಿ ವೀಣಾ (28) ಅವರ ಶೀಲ ಶಂಕಿಸಿ ಪ್ರತಿದಿನ ಗಲಾಟೆ ಮಾಡುತ್ತಿದ್ದ. 2016ರ ನವೆಂಬರ್ 5ರಂದು ರಾತ್ರಿ ಇದೇ ವಿಷಯಕ್ಕೆ ಪತ್ನಿಯೊಂದಿಗೆ ಜಗಳ ತೆಗೆದು ಈಳಿಗೆ ಮಣೆ, ಟಿಪಾಯಿ, ಮಿಕ್ಸರ್ ಗ್ರೈಂಡರ್ನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದ. ವೀಣಾರ ತಲೆಯನ್ನು ಗೋಡೆಗೆ ಗುದ್ದಿ ಕೊಲೆ ಮಾಡಿದ್ದ. ತಡೆಯಲು ಬಂದ ಮಕ್ಕಳಿಗೂ ಬೆದರಿಕೆ ಹಾಕಿ, ಮನೆಯಲ್ಲಿ ಕೂಡಿ ಹಾಕಿದ್ದ ಎಂದುಕೆ.ಟಿ.ಜೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.