<p><strong>ಹೊನ್ನಾಳಿ: </strong>ನಗರದಲ್ಲಿ ಒಂದು ತಿಂಗಳಿನಿಂದ ಜನರಿಗೆ ಕಾಟ ಕೊಡುತ್ತಿದ್ದ ಮುಸಿಯಾವನ್ನು ಸೆರೆಹಿಡಿದು ಶಿವಮೊಗ್ಗದ ಲಯನ್ ಸಫಾರಿಗೆ ಕಳುಹಿಸಲಾಯಿತು. ಪಟ್ಟಣದಲ್ಲಿ ಸೆರೆ ಹಿಡಿದ ಎರಡನೇ ಮುಸಿಯಾ ಇದಾಗಿದೆ.</p>.<p>ಮುಸಿಯಾನ ಹುಚ್ಚಾಟಕ್ಕೆ 30 ಜನರು ಗಾಯಗೊಂಡಿದ್ದರು. ಇದರಿಂದ ಪುರಸಭೆಯ ಆಡಳಿತ ಮಂಡಳಿ ಮುಸಿಯಾವನ್ನು ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಭಾನುವಾರ ಬೆಳಿಗ್ಗೆಯಿಂದಲೇ ಮುಸಿಯಾವನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಕಾರ್ಯತಂತ್ರ ರೂಪಿಸಿ ಸಂಜೆ 4 ಗಂಟೆ ವೇಳೆಗೆ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು.</p>.<p>ಮುಸಿಯಾವನ್ನು ಜೀವಸಹಿತ ಹಿಡಿಯಲು ಬೋನು ಸಹಿತ ಆಗಮಿಸಿದ್ದ ತಜ್ಞರ ತಂಡ ಅದನ್ನು ಹಿಡಿಯಲು ಸಾಕಷ್ಟು ಶ್ರಮಪಟ್ಟಿತು. ಕೊನೆಯಲ್ಲಿ ಅರಿವಳಿಕೆ ತಜ್ಞರು ಮದ್ದನ್ನು ಚುಚ್ಚಿ ಪ್ರಜ್ಞೆ ತಪ್ಪಿಸಿ ಹಿಡಿಯಬೇಕಾಯಿತು. ಮುಸಿಯಾವನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯ 5 ಜನರ ತಂಡ ಹಾಗೂ ಪುರಸಭೆಯ ಸಿಬ್ಬಂದಿ ಸಾಕಷ್ಟು ಬೆವರು ಹರಿಸಬೇಕಾಯಿತು.</p>.<p>ಪುರಸಭೆಯ ಅಧ್ಯಕ್ಷ ಕೆ.ವಿ. ಶ್ರೀಧರ್, ಹೆಲ್ತ್ ಇನ್ಸ್ಪೆಕ್ಟರ್ ನಾಗೇಶ್, ಸಿಬ್ಬಂದಿ ರವಿ, ಲಕ್ಷ್ಮಣ್, ರಾಜು, ಅಂಕಣ್ಣ ಹಾಜರಿದ್ದರು.</p>.<p>ಐದು ತಿಂಗಳಿನಿಂದ ಕಾಟ ಕೊಡುತ್ತಿದ್ದ ಮುಸಿಯಾವನ್ನು ಈಚೆಗೆ ಸೆರೆಹಿಡಿಯಲಾಗಿತ್ತು. 40ಕ್ಕೂ ಹೆಚ್ಚು ಸಾರ್ವಜನಿಕರಿಗೆ ಕಚ್ಚಿ ಗಾಯಗೊಳಿಸಿತ್ತು. ಅದನ್ನು ಇದೇ ತಜ್ಞರ ತಂಡ ಹಿಡಿದು ಲಯನ್ ಸಫಾರಿಗೆ ಬಿಟ್ಟಿದ್ದನ್ನು ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ: </strong>ನಗರದಲ್ಲಿ ಒಂದು ತಿಂಗಳಿನಿಂದ ಜನರಿಗೆ ಕಾಟ ಕೊಡುತ್ತಿದ್ದ ಮುಸಿಯಾವನ್ನು ಸೆರೆಹಿಡಿದು ಶಿವಮೊಗ್ಗದ ಲಯನ್ ಸಫಾರಿಗೆ ಕಳುಹಿಸಲಾಯಿತು. ಪಟ್ಟಣದಲ್ಲಿ ಸೆರೆ ಹಿಡಿದ ಎರಡನೇ ಮುಸಿಯಾ ಇದಾಗಿದೆ.</p>.<p>ಮುಸಿಯಾನ ಹುಚ್ಚಾಟಕ್ಕೆ 30 ಜನರು ಗಾಯಗೊಂಡಿದ್ದರು. ಇದರಿಂದ ಪುರಸಭೆಯ ಆಡಳಿತ ಮಂಡಳಿ ಮುಸಿಯಾವನ್ನು ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಭಾನುವಾರ ಬೆಳಿಗ್ಗೆಯಿಂದಲೇ ಮುಸಿಯಾವನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಕಾರ್ಯತಂತ್ರ ರೂಪಿಸಿ ಸಂಜೆ 4 ಗಂಟೆ ವೇಳೆಗೆ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು.</p>.<p>ಮುಸಿಯಾವನ್ನು ಜೀವಸಹಿತ ಹಿಡಿಯಲು ಬೋನು ಸಹಿತ ಆಗಮಿಸಿದ್ದ ತಜ್ಞರ ತಂಡ ಅದನ್ನು ಹಿಡಿಯಲು ಸಾಕಷ್ಟು ಶ್ರಮಪಟ್ಟಿತು. ಕೊನೆಯಲ್ಲಿ ಅರಿವಳಿಕೆ ತಜ್ಞರು ಮದ್ದನ್ನು ಚುಚ್ಚಿ ಪ್ರಜ್ಞೆ ತಪ್ಪಿಸಿ ಹಿಡಿಯಬೇಕಾಯಿತು. ಮುಸಿಯಾವನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯ 5 ಜನರ ತಂಡ ಹಾಗೂ ಪುರಸಭೆಯ ಸಿಬ್ಬಂದಿ ಸಾಕಷ್ಟು ಬೆವರು ಹರಿಸಬೇಕಾಯಿತು.</p>.<p>ಪುರಸಭೆಯ ಅಧ್ಯಕ್ಷ ಕೆ.ವಿ. ಶ್ರೀಧರ್, ಹೆಲ್ತ್ ಇನ್ಸ್ಪೆಕ್ಟರ್ ನಾಗೇಶ್, ಸಿಬ್ಬಂದಿ ರವಿ, ಲಕ್ಷ್ಮಣ್, ರಾಜು, ಅಂಕಣ್ಣ ಹಾಜರಿದ್ದರು.</p>.<p>ಐದು ತಿಂಗಳಿನಿಂದ ಕಾಟ ಕೊಡುತ್ತಿದ್ದ ಮುಸಿಯಾವನ್ನು ಈಚೆಗೆ ಸೆರೆಹಿಡಿಯಲಾಗಿತ್ತು. 40ಕ್ಕೂ ಹೆಚ್ಚು ಸಾರ್ವಜನಿಕರಿಗೆ ಕಚ್ಚಿ ಗಾಯಗೊಳಿಸಿತ್ತು. ಅದನ್ನು ಇದೇ ತಜ್ಞರ ತಂಡ ಹಿಡಿದು ಲಯನ್ ಸಫಾರಿಗೆ ಬಿಟ್ಟಿದ್ದನ್ನು ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>