<p><strong>ದಾವಣಗೆರೆ: ‘</strong>ಮಾರ್ಚ್ 11ರಂದು ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ವೀರಮದಕರಿ ಮಹಾದ್ವಾರ ಹಾಗೂ ವಾಲ್ಮಿಕಿ ವೃತ್ತದ ನಾಮಫಲಕವನ್ನು ಜಿಲ್ಲಾಡಳಿತ ತೆರವುಗೊಳಿಸಿರುವುದು ಖಂಡನೀಯ’ ಎಂದು ವಾಲ್ಮೀಕಿ ಸಮುದಾಯದ ಮುಖಂಡ ತುಳುಸಿರಾಮ್ ಟಿ.ಆರ್. ಹೇಳಿದರು.</p>.<p>‘1999ರಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅನುದಾನದಡಿ ನಿರ್ಮಾಣಗೊಂಡಿದ್ದ ಮಹಾದ್ವಾರವನ್ನು ಪುಣ್ಯಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾಜಿ ಸಚಿವ ಎಚ್. ಶಿವಪ್ಪ ಅವರು ಉದ್ಘಾಟಿಸಿದ್ದರು. ಇದನ್ನು ಅವಲೋಕಿಸದೇ ಸತ್ಯಶೋಧನಾ ಸಮಿತಿ ವರದಿ ಆಧರಿಸಿ ನಾಮಫಲಕ ತೆರವುಗೊಳಿಸಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಸರ್ಕಾರದಿಂದ ಮಂಜೂರಾದ ಅನುದಾನದಿಂದ ಮಹಾದ್ವಾರ ಹಾಗೂ ನಾಮಫಲಕವನ್ನು ತೆರವುಗೊಳಿಸಿ ನಷ್ಟ ಮಾಡಿರುವುದಲ್ಲದೆ ನಾಡಿನ ಮುಂಚೂಣಿಯಲ್ಲಿರುವ ಹಿರಿಯರಿಗೆ ಅಪಮಾನಗೊಳಿಸಿದಂತೆ ಆಗಿದೆ. ಜಿಲ್ಲಾಡಳಿತವು ಇದನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಾಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.</p>.<p>‘ತೆರವು ಕಾರ್ಯಾಚರಣೆಯ ಮೂಲಕ ಸಮುದಾಯವನ್ನು ತುಳಿಯುವ ಕೆಲಸ ಆಗಿದೆ. ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ತೆರವಿನ ವೇಳೆ ಪೊಲೀಸರು ಪ್ರತಿಭಟನನಿರತ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಕಾನೂನು ಹೋರಾಟಕ್ಕೂ ತಯಾರಿ ನಡೆಸುತ್ತಿದ್ದೇವೆ’ ಎಂದರು. </p>.<p>ಜಿಗಳಿ ರಂಗಪ್ಪ, ಮಲ್ಲಾಪುರ ದೇವರಾಜ, ಬೇವಿನಹಳ್ಳಿ ಮಹೇಶ್, ಕೆ.ಸಿ. ನಾಗರಾಜ, ಕೆ.ಆರ್. ರಂಗಪ್ಪ, ಕೆ.ಎಂ. ಚೆನ್ನಬಸಪ್ಪ, ರಂಗನಾಥ ರಾವ್ ಹಾಗೂ ನಿಜಲಿಂಗಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: ‘</strong>ಮಾರ್ಚ್ 11ರಂದು ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ವೀರಮದಕರಿ ಮಹಾದ್ವಾರ ಹಾಗೂ ವಾಲ್ಮಿಕಿ ವೃತ್ತದ ನಾಮಫಲಕವನ್ನು ಜಿಲ್ಲಾಡಳಿತ ತೆರವುಗೊಳಿಸಿರುವುದು ಖಂಡನೀಯ’ ಎಂದು ವಾಲ್ಮೀಕಿ ಸಮುದಾಯದ ಮುಖಂಡ ತುಳುಸಿರಾಮ್ ಟಿ.ಆರ್. ಹೇಳಿದರು.</p>.<p>‘1999ರಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅನುದಾನದಡಿ ನಿರ್ಮಾಣಗೊಂಡಿದ್ದ ಮಹಾದ್ವಾರವನ್ನು ಪುಣ್ಯಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾಜಿ ಸಚಿವ ಎಚ್. ಶಿವಪ್ಪ ಅವರು ಉದ್ಘಾಟಿಸಿದ್ದರು. ಇದನ್ನು ಅವಲೋಕಿಸದೇ ಸತ್ಯಶೋಧನಾ ಸಮಿತಿ ವರದಿ ಆಧರಿಸಿ ನಾಮಫಲಕ ತೆರವುಗೊಳಿಸಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಸರ್ಕಾರದಿಂದ ಮಂಜೂರಾದ ಅನುದಾನದಿಂದ ಮಹಾದ್ವಾರ ಹಾಗೂ ನಾಮಫಲಕವನ್ನು ತೆರವುಗೊಳಿಸಿ ನಷ್ಟ ಮಾಡಿರುವುದಲ್ಲದೆ ನಾಡಿನ ಮುಂಚೂಣಿಯಲ್ಲಿರುವ ಹಿರಿಯರಿಗೆ ಅಪಮಾನಗೊಳಿಸಿದಂತೆ ಆಗಿದೆ. ಜಿಲ್ಲಾಡಳಿತವು ಇದನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಾಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.</p>.<p>‘ತೆರವು ಕಾರ್ಯಾಚರಣೆಯ ಮೂಲಕ ಸಮುದಾಯವನ್ನು ತುಳಿಯುವ ಕೆಲಸ ಆಗಿದೆ. ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ತೆರವಿನ ವೇಳೆ ಪೊಲೀಸರು ಪ್ರತಿಭಟನನಿರತ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಕಾನೂನು ಹೋರಾಟಕ್ಕೂ ತಯಾರಿ ನಡೆಸುತ್ತಿದ್ದೇವೆ’ ಎಂದರು. </p>.<p>ಜಿಗಳಿ ರಂಗಪ್ಪ, ಮಲ್ಲಾಪುರ ದೇವರಾಜ, ಬೇವಿನಹಳ್ಳಿ ಮಹೇಶ್, ಕೆ.ಸಿ. ನಾಗರಾಜ, ಕೆ.ಆರ್. ರಂಗಪ್ಪ, ಕೆ.ಎಂ. ಚೆನ್ನಬಸಪ್ಪ, ರಂಗನಾಥ ರಾವ್ ಹಾಗೂ ನಿಜಲಿಂಗಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>