<p>ದಾವಣಗೆರೆ: ಇಲ್ಲಿನ ಬಾರ್ಲೈನ್ ರಸ್ತೆಯ ‘ಮರ್ಕಜಿ ಎ ಮಹಮ್ಮದಿಯ’ ಮಸೀದಿಯ ಸಾರ್ವಜನಿಕ ಭೇಟಿಗೆ ಸೆ.14ರಂದು ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ‘ನಮ್ಮೂರ ಮಸೀದಿ ನೋಡ ಬನ್ನಿ’ ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.</p>.<p>‘ಮಾನವೀಯ ಮನೋಭಾವ ಎತ್ತಿ ಹಿಡಿಯುವ ಹಾಗೂ ಸಹೋದರತೆಯ ಸಂದೇಶ ಸಾರುವ ಉದ್ದೇಶದಿಂದ ಮಸೀದಿ ಭೇಟಿಗೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 7 ಗಂಟೆಯವರೆಗೂ ಮಸೀದಿಯ ಬಾಗಿಲು ಎಲ್ಲರಿಗೂ ತೆರೆದಿರುತ್ತವೆ. ಆಸಕ್ತರು ಮಸೀದಿಗೆ ಭೇಟಿ ನೀಡಿ ವೀಕ್ಷಿಸಬಹುದು’ ಎಂದು ಶಿಕ್ಷಕ ಮೊಹಮ್ಮದ್ ಉಮರ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>‘ಮಸೀದಿ ಧಾರ್ಮಿಕ ಶ್ರದ್ಧಾ ಕೇಂದ್ರ. ಶಾಂತಿ, ನೆಮ್ಮದಿಯನ್ನು ಬಯಸಿ ಧಾರ್ಮಿಕ ತಾಣಕ್ಕೆ ಭಕ್ತರು ಬರುತ್ತಾರೆ. ಆದರೆ, ಮಸೀದಿಯ ಬಗೆಗೆ ಸಾರ್ವಜನಿಕರಲ್ಲಿ ತಪ್ಪು ಭಾವನೆಗಳಿವೆ. ಇದನ್ನು ಹೋಗಲಾಡಿಸುವ ದೃಷ್ಟಿಯಿಂದ ಮಸೀದಿಗೆ ಆಹ್ವಾನ ನೀಡಲಾಗಿದೆ. ಮಹಿಳೆಯರೂ ಸೇರಿ ಎಲ್ಲ ಧರ್ಮಿಯರು ಬರಬಹುದು’ ಎಂದು ಹೇಳಿದರು.</p>.<p>‘ಮಸೀದಿಯಲ್ಲಿ ನಡೆಯುವ ಧಾರ್ಮಿಕ ಆಚರಣೆಯನ್ನು ವೀಕ್ಷಿಸಲು ಅವಕಾಶವಿದೆ. ನಮಾಜು ಸೇರಿ ಧಾರ್ಮಿಕ ವಿಧಿವಿಧಾನಗಳ ಕುರಿತು ಗುರುಗಳು ಪರಿಚಯ ಮಾಡಿಕೊಡಲಿದ್ದಾರೆ. ಸಾಮಾನ್ಯ ದಿನಗಳಲ್ಲಿಯೂ ಮಸೀದಿ ಭೇಟಿಗೆ ಎಲ್ಲರಿಗೂ ಮುಕ್ತ ಅವಕಾಶವಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<p>ಮಸೀದಿ ಅಧ್ಯಕ್ಷ ಸೈಯದ್ ಮಂಜೂರ್ ಅಹಮ್ಮದ್, ಖಜಾಂಚಿ ಎಂ.ಎ.ಅತಾವುಲ್ಲಾ, ಮುಖಂಡರಾದ ಡಿ.ಕೆ.ಶಕೀಲ್ ಅಹಮ್ಮದ್, ಡಿ.ಎಂ.ನೇಮತ್ ಉಲ್ಲಾ, ಉಮರ್ ಫಾರೂಕ್ ಮೊಹಮ್ಮದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ಇಲ್ಲಿನ ಬಾರ್ಲೈನ್ ರಸ್ತೆಯ ‘ಮರ್ಕಜಿ ಎ ಮಹಮ್ಮದಿಯ’ ಮಸೀದಿಯ ಸಾರ್ವಜನಿಕ ಭೇಟಿಗೆ ಸೆ.14ರಂದು ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ‘ನಮ್ಮೂರ ಮಸೀದಿ ನೋಡ ಬನ್ನಿ’ ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.</p>.<p>‘ಮಾನವೀಯ ಮನೋಭಾವ ಎತ್ತಿ ಹಿಡಿಯುವ ಹಾಗೂ ಸಹೋದರತೆಯ ಸಂದೇಶ ಸಾರುವ ಉದ್ದೇಶದಿಂದ ಮಸೀದಿ ಭೇಟಿಗೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 7 ಗಂಟೆಯವರೆಗೂ ಮಸೀದಿಯ ಬಾಗಿಲು ಎಲ್ಲರಿಗೂ ತೆರೆದಿರುತ್ತವೆ. ಆಸಕ್ತರು ಮಸೀದಿಗೆ ಭೇಟಿ ನೀಡಿ ವೀಕ್ಷಿಸಬಹುದು’ ಎಂದು ಶಿಕ್ಷಕ ಮೊಹಮ್ಮದ್ ಉಮರ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>‘ಮಸೀದಿ ಧಾರ್ಮಿಕ ಶ್ರದ್ಧಾ ಕೇಂದ್ರ. ಶಾಂತಿ, ನೆಮ್ಮದಿಯನ್ನು ಬಯಸಿ ಧಾರ್ಮಿಕ ತಾಣಕ್ಕೆ ಭಕ್ತರು ಬರುತ್ತಾರೆ. ಆದರೆ, ಮಸೀದಿಯ ಬಗೆಗೆ ಸಾರ್ವಜನಿಕರಲ್ಲಿ ತಪ್ಪು ಭಾವನೆಗಳಿವೆ. ಇದನ್ನು ಹೋಗಲಾಡಿಸುವ ದೃಷ್ಟಿಯಿಂದ ಮಸೀದಿಗೆ ಆಹ್ವಾನ ನೀಡಲಾಗಿದೆ. ಮಹಿಳೆಯರೂ ಸೇರಿ ಎಲ್ಲ ಧರ್ಮಿಯರು ಬರಬಹುದು’ ಎಂದು ಹೇಳಿದರು.</p>.<p>‘ಮಸೀದಿಯಲ್ಲಿ ನಡೆಯುವ ಧಾರ್ಮಿಕ ಆಚರಣೆಯನ್ನು ವೀಕ್ಷಿಸಲು ಅವಕಾಶವಿದೆ. ನಮಾಜು ಸೇರಿ ಧಾರ್ಮಿಕ ವಿಧಿವಿಧಾನಗಳ ಕುರಿತು ಗುರುಗಳು ಪರಿಚಯ ಮಾಡಿಕೊಡಲಿದ್ದಾರೆ. ಸಾಮಾನ್ಯ ದಿನಗಳಲ್ಲಿಯೂ ಮಸೀದಿ ಭೇಟಿಗೆ ಎಲ್ಲರಿಗೂ ಮುಕ್ತ ಅವಕಾಶವಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<p>ಮಸೀದಿ ಅಧ್ಯಕ್ಷ ಸೈಯದ್ ಮಂಜೂರ್ ಅಹಮ್ಮದ್, ಖಜಾಂಚಿ ಎಂ.ಎ.ಅತಾವುಲ್ಲಾ, ಮುಖಂಡರಾದ ಡಿ.ಕೆ.ಶಕೀಲ್ ಅಹಮ್ಮದ್, ಡಿ.ಎಂ.ನೇಮತ್ ಉಲ್ಲಾ, ಉಮರ್ ಫಾರೂಕ್ ಮೊಹಮ್ಮದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>