<p>ಚನ್ನಗಿರಿ: ತಾಲ್ಲೂಕಿನ ಹಿರೇಮಳಲಿ ಗ್ರಾಮದ ಬಳಿ ಭದ್ರಾ ಎಡದಂಡೆ ನಾಲೆ ಹಾದು ಹೋಗಿದ್ದು, 6 ಕಿ.ಮೀ. ಉದ್ದದ ಸುರಂಗದಿಂದ ನೀರು ರಭಸವಾಗಿ ಹರಿದು ಹೊರಗೆ ಬರುವ ದೃಶ್ಯ ಅತ್ಯಂತ ರಮಣೀಯವಾಗಿದೆ. ಈ ನಾಲೆಯ ಎರಡೂ ಬದಿಯಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ.</p>.<p>ಗುರುರಾಜಪುರ ಗ್ರಾಮದ ಬಳಿ ಪ್ರಾರಂಭವಾಗುವ ಸುರಂಗ ಹಿರೇಮಳಲಿ ಗ್ರಾಮದ ಬಳಿ ಕೊನೆಗೊಳ್ಳುತ್ತದೆ. ನಾಲ್ಕೈದು ಗ್ರಾಮಗಳ ಮೂಲಕ ಈ ಸುರಂಗ ಹಾದು ಹೋಗಿದ್ದು, ಸುರಂಗ ನಾಲೆ ಗ್ರಾಮದೊಳಗೆ ಹಾದು ಹೋಗಿದೆ ಎಂಬುದು ಗೊತ್ತಾಗದಂತೆ ಸುರಂಗವನ್ನು ಮುಚ್ಚಲಾಗಿದೆ.</p>.<p>ನಾಲೆಯ ಉದ್ದಕ್ಕೂ ಎರಡು ಬದಿಯಲ್ಲಿ ಗಿಡಗಂಟೆಗಳು ಬೆಳೆದು ನಿಂತಿರುವುದರಿಂದ ನಾಲೆಯ ತಡೆಗೋಡೆಗೆ ಗಿಡಗಂಟೆಗಳ ಬೇರುಗಳು ಇಳಿದು ಬಿರುಕು ಬಿಡುವ ಸಂಭವ ಇದೆ.</p>.<p>ಭದ್ರಾ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿಯನ್ನು ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲಾಗಿತ್ತು. ಆಗ ನಾಲೆ ಬದಿಯ ಗಿಡಗಂಟೆಗಳನ್ನು ತೆಗೆಯಲಾಗಿತ್ತು. ಈಗಾಗಲೇ ಕಾಮಗಾರಿ ಕೈಗೊಂಡು 15 ವರ್ಷಗಳಾಗಿವೆ. ಆ ಬಳಿಕ ಯಾವ ಸರ್ಕಾರವೂ ನಾಲೆಯ ಆಧುನೀಕರಣ ಕಾಮಗಾರಿಯನ್ನು ಕೈಗೆತ್ತಿ ಕೊಂಡಿಲ್ಲ. </p>.<p>ನೀರಾವರಿ ಇಲಾಖೆಯ ಅಧಿಕಾರಿಗಳು ಭದ್ರಾ ನಾಲೆಯ ಎರಡೂ ಬದಿಯಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳನ್ನು ತೆಗೆಯಿಸಲು ಮುಂದಾಗಬೇಕು ಎನ್ನುತ್ತಾರೆ ಹಿರೇಮಳಲಿ ಗ್ರಾಮದ ರೈತರಾದ ಓಂಕಾರಪ್ಪ. </p>.<p>ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಗಿಡಗಂಟೆಗಳನ್ನು ತೆಗೆಯಿಸಲು ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಬಿಡುಗಡೆಯಾದರೆ ಗಿಡಗಂಟೆಗಳನ್ನು ತೆಗೆಯಿಸಲಾಗುವುದು ಎಂದು ನೀರಾವರಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚನ್ನಗಿರಿ: ತಾಲ್ಲೂಕಿನ ಹಿರೇಮಳಲಿ ಗ್ರಾಮದ ಬಳಿ ಭದ್ರಾ ಎಡದಂಡೆ ನಾಲೆ ಹಾದು ಹೋಗಿದ್ದು, 6 ಕಿ.ಮೀ. ಉದ್ದದ ಸುರಂಗದಿಂದ ನೀರು ರಭಸವಾಗಿ ಹರಿದು ಹೊರಗೆ ಬರುವ ದೃಶ್ಯ ಅತ್ಯಂತ ರಮಣೀಯವಾಗಿದೆ. ಈ ನಾಲೆಯ ಎರಡೂ ಬದಿಯಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ.</p>.<p>ಗುರುರಾಜಪುರ ಗ್ರಾಮದ ಬಳಿ ಪ್ರಾರಂಭವಾಗುವ ಸುರಂಗ ಹಿರೇಮಳಲಿ ಗ್ರಾಮದ ಬಳಿ ಕೊನೆಗೊಳ್ಳುತ್ತದೆ. ನಾಲ್ಕೈದು ಗ್ರಾಮಗಳ ಮೂಲಕ ಈ ಸುರಂಗ ಹಾದು ಹೋಗಿದ್ದು, ಸುರಂಗ ನಾಲೆ ಗ್ರಾಮದೊಳಗೆ ಹಾದು ಹೋಗಿದೆ ಎಂಬುದು ಗೊತ್ತಾಗದಂತೆ ಸುರಂಗವನ್ನು ಮುಚ್ಚಲಾಗಿದೆ.</p>.<p>ನಾಲೆಯ ಉದ್ದಕ್ಕೂ ಎರಡು ಬದಿಯಲ್ಲಿ ಗಿಡಗಂಟೆಗಳು ಬೆಳೆದು ನಿಂತಿರುವುದರಿಂದ ನಾಲೆಯ ತಡೆಗೋಡೆಗೆ ಗಿಡಗಂಟೆಗಳ ಬೇರುಗಳು ಇಳಿದು ಬಿರುಕು ಬಿಡುವ ಸಂಭವ ಇದೆ.</p>.<p>ಭದ್ರಾ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿಯನ್ನು ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲಾಗಿತ್ತು. ಆಗ ನಾಲೆ ಬದಿಯ ಗಿಡಗಂಟೆಗಳನ್ನು ತೆಗೆಯಲಾಗಿತ್ತು. ಈಗಾಗಲೇ ಕಾಮಗಾರಿ ಕೈಗೊಂಡು 15 ವರ್ಷಗಳಾಗಿವೆ. ಆ ಬಳಿಕ ಯಾವ ಸರ್ಕಾರವೂ ನಾಲೆಯ ಆಧುನೀಕರಣ ಕಾಮಗಾರಿಯನ್ನು ಕೈಗೆತ್ತಿ ಕೊಂಡಿಲ್ಲ. </p>.<p>ನೀರಾವರಿ ಇಲಾಖೆಯ ಅಧಿಕಾರಿಗಳು ಭದ್ರಾ ನಾಲೆಯ ಎರಡೂ ಬದಿಯಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳನ್ನು ತೆಗೆಯಿಸಲು ಮುಂದಾಗಬೇಕು ಎನ್ನುತ್ತಾರೆ ಹಿರೇಮಳಲಿ ಗ್ರಾಮದ ರೈತರಾದ ಓಂಕಾರಪ್ಪ. </p>.<p>ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಗಿಡಗಂಟೆಗಳನ್ನು ತೆಗೆಯಿಸಲು ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಬಿಡುಗಡೆಯಾದರೆ ಗಿಡಗಂಟೆಗಳನ್ನು ತೆಗೆಯಿಸಲಾಗುವುದು ಎಂದು ನೀರಾವರಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>