ಇಲ್ಲಿನ ಜಯದೇವ ಸರ್ಕಲ್ನಲ್ಲಿ ಗುರುವಾರ ಪ್ರತಿಭಟನೆಗೆ ಕಾರ್ಮಿಕರು ಮುಂದಾದಾಗ, ‘ನಗರದಲ್ಲಿ ಡಿ.21ರವರೆಗೆ ನಿಷೇಧಾಜ್ಞೆ ಜಾರಿ ಇದ್ದು, ಪ್ರತಿಭಟನೆ ಮಾಡುವಂತಿಲ್ಲ. ಅಗತ್ಯ ಇದ್ದರೆ ಸಂಘಟನೆ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿ. ಇದನ್ನು ಮೀರಿ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಎಚ್ಚರಿಕೆ ನೀಡಿದರು.