ದೇವರಬೆಳಕೆರೆ ಅಣೆಕಟ್ಟೆ ಕೆಳಭಾಗದ ನಂದಿತಾವರೆ, ಕುಣಿಬೆಳೆಕೆರೆ, ಬ್ಯಾಲದಹಳ್ಳಿ, ರಾಮತೀರ್ಥ ಭಾಗದ ತೋಟಗಳು ಬಿಸಿಲಿಗೆ ಒಣಗಿವೆ. ಕೊಳವೆಬಾವಿ ಕೈಕೊಟ್ಟ ಕಾರಣ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಹಿಂದೆ ಹಳ್ಳ ಒಣಗಿದಾಗ ಪಿಕಪ್ ಜಲಾಶಯದ ಕ್ರಸ್ಟ್ಗೇಟ್ ತೆಗೆದು ಅಡಿಕೆ, ಬಾಳೆ, ವೀಳ್ಯದ ಎಲೆ ತೋಟಗಳ ನೀರು ಹರಿಸಲಾಗಿತ್ತು. ಈಗ ಆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಮಲ್ಲೇಶಪ್ಪ, ಅಂಜನಪ್ಪ ಒತ್ತಾಯಿಸಿದರು.