ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ: ಹೈಸ್ಕೂಲ್‌ ಮೈದಾನದಲ್ಲಿ ಕಾಶಿ ವಿಶ್ವನಾಥ ಮಂಟಪ

ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್‌ನಿಂದ ಅದ್ದೂರಿ ಗಣೇಶೋತ್ಸವಕ್ಕೆ ಭರದ ಸಿದ್ಧತೆ
Published : 31 ಆಗಸ್ಟ್ 2024, 7:37 IST
Last Updated : 31 ಆಗಸ್ಟ್ 2024, 7:37 IST
ಫಾಲೋ ಮಾಡಿ
Comments
₹ 2 ಲಕ್ಷ ಮೊತ್ತದ ವಿನಾಯಕ ಮೂರ್ತಿ ಶಿವನ ಅವತಾರದಲ್ಲಿ ನಿಲ್ಲಲಿರುವ ವಿಘ್ನೇಶ್ವರ  ಭವ್ಯ ಮಂಟಪದಲ್ಲಿ ಜ್ಯೋತಿರ್ಲಿಂಗ ದರ್ಶನ
ದೂರದ ವಾರಾಣಸಿ ಕಾಶಿ ವಿಶ್ವನಾಥ ದೇವಾಲಯಕ್ಕೆ ಹೋಗಿ ಬರುವುದು ಬಡ ಜನರಿಗೆ ವೆಚ್ಚದಾಯಕ. ಹೀಗಾಗಿ ದೇವಾಲಯದ ಶೈಲಿಯಲ್ಲೇ ಮಂಟಪ ನಿರ್ಮಿಸುತ್ತಿದ್ದು ಎಲ್ಲರೂ ಇಲ್ಲಿಯೇ ಕಣ್ತುಂಬಿಕೊಳ್ಳಬಹುದು
ಜೊಳ್ಳಿ ಗುರು ಸಂಸ್ಥಾಪಕ ಅಧ್ಯಕ್ಷ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್
18 ಅಡಿ ಎತ್ತರದ ವಿನಾಯಕ ಮೂರ್ತಿ
ಈ ಬಾರಿ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾಗಣಪತಿ ಟ್ರಸ್ಟ್‌ನಿಂದ 18 ಅಡಿ ಎತ್ತರದ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ ಬೆಳಗಾವಿಯಲ್ಲಿ ಮೂರ್ತಿ ತಯಾರಾಗುತ್ತಿದೆ. ಇದಕ್ಕಾಗಿ ಟ್ರಸ್ಟ್ ₹ 2 ಲಕ್ಷ ವ್ಯಯಿಸುತ್ತಿದೆ. ಟ್ರಸ್ಟ್‌ನಿಂದ ಇಲ್ಲಿಯವರೆಗೂ ಪ್ರತಿಷ್ಠಾಪಿಸಿದ ಮೂರ್ತಿಗಳ ಪೈಕಿ ಈ ವರ್ಷ ಪ್ರತಿಷ್ಠಾಪಿಸಲಿರುವ ಮೂರ್ತಿಯೇ ಅತಿ ದೊಡ್ಡದಾಗಿರಲಿದೆ. ಕಳೆದ ವರ್ಷ 12 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ‘ಇಷ್ಟು ವರ್ಷ ಕುಳಿತ ಭಂಗಿಯಲ್ಲಿರುವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಇದೇ ಮೊದಲ ಬಾರಿ ಶಿವನ ಅವತಾರದಲ್ಲಿ ನಿಂತಿರುವ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ’ ಎಂದು ಟ್ರಸ್ಟ್‌ನ ಮುಖಂಡರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT