ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಕಳೆದ 20 ದಿನಗಳಿಂದ ಮಳೆ ಕೊರತೆಯಿಂದ ಭೂಮಿಯ ತೇವಾಂಶ ಕೊರತೆ ಉಂಟಾಗಿ ಬೆಳೆ ಬಾಡಲಾರಂಭಿಸಿದ್ದವು. ಮಳೆ ವಿರಾಮ ನೀಡಿದ್ದರಿಂದ ಹೊಲದಲ್ಲಿನ ಕಳೆ, ಎಡಿಕೊಂಟೆ ಕಾರ್ಯದಲ್ಲಿ ರೈತರು ತಲ್ಲೀನರಾಗಿದ್ದರು. ಹೊಲದ ಕೆಲಸ ಮುಗಿಸಿದ ರೈತರು ಮಳೆಗಾಗಿ ಕಾಯುತ್ತಿದ್ದರು. ರಾತ್ರಿ ಸುರಿದ ಮಳೆ ಹೋಬಳಿ ರೈತರಲ್ಲಿ ಮಂದಹಾಸ ಮೂಡಿಸಿದೆ. ಕೃಷಿ ಚಟುವಟಿಕೆ ಬಿರುಸುಗೊಳ್ಳುವ ವಿಶ್ವಾಸವನ್ನು ರೈತರು ವ್ಯಕ್ತಪಡಿಸಿದ್ದಾರೆ.