<p>ಹರಿಹರ: ತಾಲ್ಲೂಕಿನಾದ್ಯಂತ 2 ದಿನಗಳಿಂದ ಸುರಿಯುತ್ತಿರುವ ಪುನರ್ವಸು ಮಳೆಗೆ 6 ಮನೆಗಳಿಗೆ ಹಾನಿಯಾಗಿದೆ.</p>.<p>ಶನಿವಾರ ಸಂಜೆಯಿಂದ ಎಡೆಬಿಡದೆ ಅವ್ಯಾಹತವಾಗಿ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಎರಡು, ಹಟ್ಟಿ ಗ್ರಾಮದಲ್ಲಿ ಒಂದು ಸೇರಿ ಗ್ರಾಮಾಂತರ ಪ್ರದೇಶದ 4 ಹಾಗೂ ನಗರ ಪ್ರದೇಶದ ಭರತ್ ಆಯಿಲ್ ಮಿಲ್ ಕಾಂಪೌಂಡಿನಲ್ಲಿ 2 ಮನೆಗಳಿಗೆ ಹಾನಿಯಾಗಿದೆ.</p>.<p>ಸಾಲಕಟ್ಟಿ ಗ್ರಾಮದ ಎ.ಕೆ. ಅಜ್ಜಪ್ಪ, ದೀಟೂರು ಗ್ರಾಮದ ಕಾಶಿನಾಥ, ಕೊಂಡಜ್ಜಿ ಗ್ರಾಮದ ಅಂಜಿನಪ್ಪ, ನಗರದ ಭಾರತ್ ಆಯಿಲ್ ಮಿಲ್ ಕಾಂಪೌಂಡಿನ ಗಂಗಮ್ಮ ಮತ್ತು ಶೋಭಾ ಅವರ ಮನೆಯ ಚಾವಣಿ ಕುಸಿದು ಬಿದ್ದಿವೆ ಎಂದು ರಾಜಸ್ವ ನಿರೀಕ್ಷಕ ಸಮೀರ್ ಅಹಮದ್, ಆನಂದ್, ಗ್ರಾಮ<br />ಲೆಕ್ಕಿಗರಾದ ಎಚ್.ಜಿ. ಹೇಮಂತ್, ಲೋಹಿತ್ ಮತ್ತು ಸುರೇಶ್ ತಿಳಿಸಿದರು.</p>.<p class="Subhead">ತುಂಬಿ ಹರಿಯುತ್ತಿರುವ ಹಳ್ಳ: ಸತತ ಮಳೆಯಿಂದಾಗಿ ಸಾರಥಿ-ಪಾಮೇನಹಳ್ಳಿ ಮಧ್ಯದಲ್ಲಿರುವ ಹಳ್ಳವು ತುಂಬಿ ಹರಿಯುತ್ತಿದ್ದು, ಎರಡು ಗ್ರಾಮಗಳ ಸಂಪರ್ಕ ಕಡಿತವಾಗಿದೆ.</p>.<p>ಸುತ್ತಮುತ್ತಲ ಹಾಗೂ ತಾಲ್ಲೂಕಿನ ಬಹುತೇಕ ಹೊಲ ಗದ್ದೆಗಳು ನೀರಿನಿಂದ ತುಂಬಿ ಹರಿಯುತ್ತಿದ್ದು, ಬೆಳೆ ಹಾನಿಯಾಗಿಲ್ಲ ಎಂದು ಸಹಾಯಕ ಕೃಷಿ ಅಧಿಕಾರಿ ಗೋವರ್ಧನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಿಹರ: ತಾಲ್ಲೂಕಿನಾದ್ಯಂತ 2 ದಿನಗಳಿಂದ ಸುರಿಯುತ್ತಿರುವ ಪುನರ್ವಸು ಮಳೆಗೆ 6 ಮನೆಗಳಿಗೆ ಹಾನಿಯಾಗಿದೆ.</p>.<p>ಶನಿವಾರ ಸಂಜೆಯಿಂದ ಎಡೆಬಿಡದೆ ಅವ್ಯಾಹತವಾಗಿ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಎರಡು, ಹಟ್ಟಿ ಗ್ರಾಮದಲ್ಲಿ ಒಂದು ಸೇರಿ ಗ್ರಾಮಾಂತರ ಪ್ರದೇಶದ 4 ಹಾಗೂ ನಗರ ಪ್ರದೇಶದ ಭರತ್ ಆಯಿಲ್ ಮಿಲ್ ಕಾಂಪೌಂಡಿನಲ್ಲಿ 2 ಮನೆಗಳಿಗೆ ಹಾನಿಯಾಗಿದೆ.</p>.<p>ಸಾಲಕಟ್ಟಿ ಗ್ರಾಮದ ಎ.ಕೆ. ಅಜ್ಜಪ್ಪ, ದೀಟೂರು ಗ್ರಾಮದ ಕಾಶಿನಾಥ, ಕೊಂಡಜ್ಜಿ ಗ್ರಾಮದ ಅಂಜಿನಪ್ಪ, ನಗರದ ಭಾರತ್ ಆಯಿಲ್ ಮಿಲ್ ಕಾಂಪೌಂಡಿನ ಗಂಗಮ್ಮ ಮತ್ತು ಶೋಭಾ ಅವರ ಮನೆಯ ಚಾವಣಿ ಕುಸಿದು ಬಿದ್ದಿವೆ ಎಂದು ರಾಜಸ್ವ ನಿರೀಕ್ಷಕ ಸಮೀರ್ ಅಹಮದ್, ಆನಂದ್, ಗ್ರಾಮ<br />ಲೆಕ್ಕಿಗರಾದ ಎಚ್.ಜಿ. ಹೇಮಂತ್, ಲೋಹಿತ್ ಮತ್ತು ಸುರೇಶ್ ತಿಳಿಸಿದರು.</p>.<p class="Subhead">ತುಂಬಿ ಹರಿಯುತ್ತಿರುವ ಹಳ್ಳ: ಸತತ ಮಳೆಯಿಂದಾಗಿ ಸಾರಥಿ-ಪಾಮೇನಹಳ್ಳಿ ಮಧ್ಯದಲ್ಲಿರುವ ಹಳ್ಳವು ತುಂಬಿ ಹರಿಯುತ್ತಿದ್ದು, ಎರಡು ಗ್ರಾಮಗಳ ಸಂಪರ್ಕ ಕಡಿತವಾಗಿದೆ.</p>.<p>ಸುತ್ತಮುತ್ತಲ ಹಾಗೂ ತಾಲ್ಲೂಕಿನ ಬಹುತೇಕ ಹೊಲ ಗದ್ದೆಗಳು ನೀರಿನಿಂದ ತುಂಬಿ ಹರಿಯುತ್ತಿದ್ದು, ಬೆಳೆ ಹಾನಿಯಾಗಿಲ್ಲ ಎಂದು ಸಹಾಯಕ ಕೃಷಿ ಅಧಿಕಾರಿ ಗೋವರ್ಧನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>