ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್, ‘ವೃತ್ತಿ ರಂಗಭೂಮಿ ಕಲಾವಿದರದ್ದು ಜನಬಳಕೆಯ ಭಾಷೆ, ಜನರದ್ದೇ ಕಥೆ. ಹೀಗಾಗಿ, ಈ ನಾಟಕಗಳು ಜನರಿಗೆ ಆಪ್ತವಾಗುತ್ತವೆ. ಆದರೆ, ಹವ್ಯಾಸಿ ಕಲಾವಿದರ ನಾಟಕಗಳು ಸಾಮಾನ್ಯರಿಗೆ ಅರ್ಥವೇ ಆಗುವುದಿಲ್ಲ. ಆ ನಾಟಕಗಳನ್ನು ನೋಡಲು ವಿಶೇಷ ಸಿದ್ಧತೆ ಬೇಕಾಗುತ್ತದೆ. ಎಷ್ಟೇ ಜನಪ್ರಿಯವಾದರೂ ವೃತ್ತಿರಂಗಭೂಮಿಯಷ್ಟು ದೇಸಿತನ ಹವ್ಯಾಸಿ ರಂಗಭೂಮಿಗೆ ಇಲ್ಲ’ ಎಂದು ಹೇಳಿದರು.