ನಾಯಕನಟ ರಾಜ್ಚರಣ್, ‘ಸಿದ್ಧಾಂತ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಮೆರಿಕದಲ್ಲಿ ಸಸ್ಯ ವಿಜ್ಞಾನಿಯಾಗಿರುತ್ತೇನೆ. ನನ್ನಲ್ಲಿರುವ ವಿಶೇಷ ಫೋಟೊಗ್ರಫಿಕ್ ಮೆಮೊರಿಯಿಂದ ಅಮೆರಿಕದಲ್ಲಿ ನಡೆದ ಕೊಲೆಯೊಂದರ ಮೂಲ ಹುಡುಕುತ್ತಾ ಹೋಗುತ್ತೇನೆ. ಆಗ ನೂರಾರು ಕಷ್ಟಗಳು ಎದುರಾಗುತ್ತವೆ. ಅದನ್ನೆಲ್ಲ ಧೈರ್ಯದಿಂದ ಎದುರಿಸಿ ಕೊಲೆಗಾರರನ್ನು ಹೇಗೆ ಕಂಡು ಹಿಡಿಯುತ್ತೇನೆ ಎಂಬುದೇ ಈ ಚಿತ್ರದ ಕತೆ’ ಎಂದು ಹೇಳಿದರು.