ಬಸವನ ಬಾಗೇವಾಡಿಯ ಎಚ್. ಹಿಪ್ಪರಗಿಯ ದೃಶ್ಯಕಲಾ ಮಹಾವಿದ್ಯಾಲಯದ ಉಪನ್ಯಾಸಕರಾಗಿರುವ ರಾಮಪ್ಪ ಸಾಸನೂರ್ ಅವರು ಬರೆದಿರುವ ಸುಮಾರು 40 ರೇಖಾಚಿತ್ರಗಳು ಪ್ರದರ್ಶನಗೊಳ್ಳಲಿವೆ. ರಾಮಪ್ಪ ಅವರ ರೇಖಾಚಿತ್ರಗಳು ಭಾವಗೀತಾತ್ಮಕ ರೇಖೆಗಳು, ಪಿಕ್ಟೋರಿಯಲ್ ಲೈನ್ ಡ್ರಾಯಿಂಗ್, ಕನ್ನಡದ ಒಲವಿನ ಕವಿ ಕೆ.ಎಸ್. ನರಸಿಂಗಸ್ವಾಮಿ ಅವರ ಕವಿತೆಗಳಂತೆ ಶೃಂಗಾರ–ಲಾಸ್ಯ ಗುಣಗಳನ್ನು ಮೈದುಂಬಿಕೊಂಡಿವೆ. ಅವರ ರೇಖೆಗಳ ಬಾಗು–ಬಳುಕು, ವೈಯ್ಯಾರ ವಿಶೇಷತೆಗಳು ಸಮ್ಮೋಹನಗೊಳಿಸುತ್ತವೆ.