ವೇದಿಕೆ ರಾಜ್ಯಾಧ್ಯಕ್ಷ ಎ. ಉಮೇಶ್, ‘ರೇಣುಕಾಚಾರ್ಯ ಅವರು ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಲು ಕಸರತ್ತು ನಡೆಸುವಂತಿದೆ. ಅಂತಹ ಆಸಕ್ತಿ ಇದ್ದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿ. ಜವಾಬ್ದಾರಿ ಸ್ಥಾನದಲ್ಲಿರುವವರು ಅಧಿಕಾರ ದುರ್ಬಳಕೆ ಮಾಡುತ್ತಿದ್ದು, ಈ ಸಂಬಂಧ ‘ಜನಪ್ರತಿನಿಧಿಗಳ ನ್ಯಾಯಾಲಯ’ದ ಮೊರೆ ಹೋಗುತ್ತೇವೆ’ ಎಂದರು.