<p><strong>ದಾವಣಗೆರೆ:</strong> ನಗರದ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಬೋಟಿಕ್ ಮಂಡಿಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಗುರುವಾರ ಯಶಸ್ವಿಯಾಯಿತು. ಸೇವೆ ಆರಂಭವಾದ ಮೊದಲ ದಿನವೇ ರೋಬೋಟಿಕ್ ತಂತ್ರಜ್ಞಾನದಲ್ಲಿ ಆಸ್ಪತ್ರೆಯು ಹೊಸ ಮೈಲುಗಲ್ಲು ರೂಪಿಸಿತು.</p>.<p>ಬೆಂಗಳೂರಿನ ಮಂಡಿಕೀಲು ಬದಲಾವಣೆ ತಜ್ಞ ಡಾ.ಎ.ಪಿ. ಲಿಂಗರಾಜ್, ಆರೈಕೆ ಆಸ್ಪತ್ರೆಯ ಡಾ.ಧ್ರುವ ವಿ. ಹಾಗೂ ಅರಿವಳಿಕೆ ತಜ್ಞರಾದ ಡಾ.ದೀಪಕ್ ತಂಡ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ಸು ಸಾಧಿಸಿತು.</p>.<p>ಆಧುನಿಕ ರೋಬೋಟಿಕ್ ತಂತ್ರಜ್ಞಾನದಿಂದ ಅತಿ ನಿಖರವಾದ ಚಿಕಿತ್ಸಾ ಉಪಕರಣಗಳನ್ನು ಬಳಸಿ ಒಂದೇ ದಿನ ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು. ಈ ಚಿಕಿತ್ಸೆಯು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ನಡೆಯಿತು.</p>.<p>‘ಇಂತಹ ತಂತ್ರಜ್ಞಾನ ಬಳಕೆಯಿಂದ ರಕ್ತಸ್ರಾವ ಕಡಿಮೆಯಾಗಿದ್ದು, ಅತ್ಯಂತ ನಿಖರವಾಗಿ ಮರುಜೋಡಣೆ ಮಾಡಲಾಯಿತು. ಶಸ್ತ್ರಚಿಕಿತ್ಸೆ ನಂತರ ಕಡಿಮೆ ನೋವು ಹಾಗೂ ವೇಗದ ಚೇತರಿಕೆ ಕಂಡುಬಂದಿತು’ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.</p>.<div><blockquote>ಮಧ್ಯ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಆರೈಕೆ ಆಸ್ಪತ್ರೆ ಈ ಸೇವೆ ಒದಗಿಸಿದೆ. ರೋಬೋಟಿಕ್ ಚಿಕಿತ್ಸೆಗೆ ಇನ್ನು ಮುಂದೆ ಬೇರೆಡೆಗೆ ಹೋಗುವ ಅಗತ್ಯವಿಲ್ಲ</blockquote><span class="attribution"> ಡಾ.ಟಿ.ಜಿ. ರವಿಕುಮಾರ್ ಮುಖ್ಯಸ್ಥರು ಆರೈಕೆ ಆಸ್ಪತ್ರೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ನಗರದ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಬೋಟಿಕ್ ಮಂಡಿಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಗುರುವಾರ ಯಶಸ್ವಿಯಾಯಿತು. ಸೇವೆ ಆರಂಭವಾದ ಮೊದಲ ದಿನವೇ ರೋಬೋಟಿಕ್ ತಂತ್ರಜ್ಞಾನದಲ್ಲಿ ಆಸ್ಪತ್ರೆಯು ಹೊಸ ಮೈಲುಗಲ್ಲು ರೂಪಿಸಿತು.</p>.<p>ಬೆಂಗಳೂರಿನ ಮಂಡಿಕೀಲು ಬದಲಾವಣೆ ತಜ್ಞ ಡಾ.ಎ.ಪಿ. ಲಿಂಗರಾಜ್, ಆರೈಕೆ ಆಸ್ಪತ್ರೆಯ ಡಾ.ಧ್ರುವ ವಿ. ಹಾಗೂ ಅರಿವಳಿಕೆ ತಜ್ಞರಾದ ಡಾ.ದೀಪಕ್ ತಂಡ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ಸು ಸಾಧಿಸಿತು.</p>.<p>ಆಧುನಿಕ ರೋಬೋಟಿಕ್ ತಂತ್ರಜ್ಞಾನದಿಂದ ಅತಿ ನಿಖರವಾದ ಚಿಕಿತ್ಸಾ ಉಪಕರಣಗಳನ್ನು ಬಳಸಿ ಒಂದೇ ದಿನ ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು. ಈ ಚಿಕಿತ್ಸೆಯು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ನಡೆಯಿತು.</p>.<p>‘ಇಂತಹ ತಂತ್ರಜ್ಞಾನ ಬಳಕೆಯಿಂದ ರಕ್ತಸ್ರಾವ ಕಡಿಮೆಯಾಗಿದ್ದು, ಅತ್ಯಂತ ನಿಖರವಾಗಿ ಮರುಜೋಡಣೆ ಮಾಡಲಾಯಿತು. ಶಸ್ತ್ರಚಿಕಿತ್ಸೆ ನಂತರ ಕಡಿಮೆ ನೋವು ಹಾಗೂ ವೇಗದ ಚೇತರಿಕೆ ಕಂಡುಬಂದಿತು’ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.</p>.<div><blockquote>ಮಧ್ಯ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಆರೈಕೆ ಆಸ್ಪತ್ರೆ ಈ ಸೇವೆ ಒದಗಿಸಿದೆ. ರೋಬೋಟಿಕ್ ಚಿಕಿತ್ಸೆಗೆ ಇನ್ನು ಮುಂದೆ ಬೇರೆಡೆಗೆ ಹೋಗುವ ಅಗತ್ಯವಿಲ್ಲ</blockquote><span class="attribution"> ಡಾ.ಟಿ.ಜಿ. ರವಿಕುಮಾರ್ ಮುಖ್ಯಸ್ಥರು ಆರೈಕೆ ಆಸ್ಪತ್ರೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>