ನಾವು ತೊಡುವ ಬಟ್ಟೆಗಳು ಖಾಕಿ, ಕಾವಿ, ಖಾದಿಯಾಗಿರಬಹುದು. ಬಟ್ಟೆಗಳಿಗಿಂತ ಬದುಕು ಬಹಳ ಮುಖ್ಯ. ಹಾಗಾಗಿಯೇ ಶರಣರು ಹೇಳಿರುವಂತೆ ಇವನಾರವ, ಇವನಾರವ ಎನ್ನದೇ, ಇವ ನಮ್ಮವ ಇವ ನಮ್ಮವ ಎಂಬಂತೆ ಎಲ್ಲರನ್ನೂ ಅಪ್ಪಿಕೊಳ್ಳಬೇಕು. ಒಪ್ಪಿಕೊಳ್ಳಬೇಕು. ಇಂತಹ ಸಂದೇಶವನ್ನು ಎಲ್ಲಾ ಮಕ್ಕಳು, ಸಾರ್ವಜನಿಕರು, ರಾಜಕೀಯ ನೇತಾರರಲ್ಲಿ ನಾವು ಬೆಳೆಸಿದರೆ ಸಮಾಜದಲ್ಲಿರುವ ಅನಿಷ್ಠಗಳನ್ನು ಹೋಗಲಾಡಿಸಲು ಸಾಧ್ಯ. ಅಂತಹ ಧೀಶಕ್ತಿಯನ್ನು ಶರಣರು ಎಲ್ಲರಿಗೂ ಕರುಣಿಸಲಿ ಎಂದು ಹಾರೈಸಿದರು.