ವಿಷಯ ತಿಳಿದ ಗ್ರಾಮದ ನಾಯಕ ಸಮಾಜದವರು ಮದಕರಿ ವೃತ್ತದಲ್ಲಿ ಜಮಾಯಿಸಿ ಧರಣಿ ಕುಳಿತರು. ಇದರಿಂದ ಸಂಚಾರ ಮಧ್ಯಾಹ್ನ 3ಗಂಟೆ ವರೆಗೆ ವಾಹನಗಳ ಸಂಚಾರ ಅಸ್ತವ್ಯಸ್ತವಾಯಿತು. ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ್, ಗ್ರಾಮೀಣ ಡಿವೈಎಸ್ಪಿ ಬಸವರಾಜ್ ನಾಯ್ಕ, ಹರಿಹರ ಪೊಲೀಸ್ ಇನ್ಸ್ಪೆಕ್ಟರ್ ದೇವಾನಂದ್, ಮಲೆಬೆನ್ನೂರು ಪಿಎಸ್ಐ ಪ್ರಭು ಡಿ. ಮತ್ತು ಕಂದಾಯ ಇಲಾಖೆಯ ಗ್ರೇಡ್ 2 ತಹಶೀಲ್ದಾರ್ ಶಶಿಧರಯ್ಯ, ಉಪವಿಭಾಗಾಧಿಕಾರಿ ದುರ್ಗಾ ಶ್ರೀ, ಕಂದಾಯ ನಿರೀಕ್ಷಕ ಎಚ್.ಎಲ್.ಆನಂದ್, ತಾಲ್ಲೂಕು ಪಂಚಾಯಿತಿ ಇ.ಒ. ರವಿ. ಪ್ರತಿಭಟನಕಾರರ ಜೊತೆ ಮಾತುಕತೆ ನಡೆಸಿ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡುವಲ್ಲಿ ಯಶಸ್ವಿಯಾದರು.