‘ಹಾಲೇಶ್ ಮದುವೆಯಾಗುವುದಾಗಿ ನಂಬಿಸಿ 15 ವರ್ಷದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದು, ಈತನ ಕೃತ್ಯಕ್ಕೆ ಹಾಲೇಶಪ್ಪ ಹಾಗೂ ಹನುಮಂತಪ್ಪ ಸಹಕರಿಸಿದ್ದರು. ರುದ್ರೇಶ್ ಹಾಲೇಶ್ನ ಸ್ನೇಹಿತನಾಗಿದ್ದು, ಬಾಲಕಿಯನ್ನು ಕರೆದೊಯ್ಯಲು ಸಹಾಯ ಮಾಡಿದ್ದು, ಆತನನ್ನು ಬಂಧಿಸಲಾಗಿದೆ. ಹನುಮಂತಪ್ಪ ಪರಾರಿಯಾಗಿದ್ದು, ಆತನ ಪತ್ತೆಗೆ ತಂಡ ರಚಿಸಲಾಗಿದೆ’ ಎಂದು ಸಿಪಿಐ ಟಿ.ವಿ. ದೇವರಾಜ್ ತಿಳಿಸಿದ್ದಾರೆ.