<p>ದಾವಣಗೆರೆ: ದಾವಣಗೆರೆ ರೈಲು ನಿಲ್ದಾಣವನ್ನು ಸಂಪರ್ಕಿಸಿ ಹೋಗುವ ಮೂರು ರೈಲುಗಳು ಆರಂಭಗೊಂಡಿವೆ. ಜನರು ನಿಧಾನವಾಗಿ ಸ್ಪಂದನೆ ನೀಡಲು ಆರಂಭಿಸಿದ್ದಾರೆ. ಟಿಕೆಟ್ ಬುಕ್ಗೆ ಮಾಡಲು ಜನ ಸರದಿಯಲ್ಲಿ ನಿಂತಿರುವುದು ಮಂಗಳವಾರ ಕಂಡು ಬಂತು.</p>.<p>ಬೆಂಗಳೂರು–ಬೆಳಗಾವಿ ರೈಲು ವಾರಕ್ಕೆ ಮೂರು ದಿನ ಸಂಚರಿಸುತ್ತದೆ. ಹಾಗಾಗಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಂಗಳೂರಿನಿಂದ ಬೆಳಗಾವಿ ಕಡೆಗೆ ಹಾಗೂ ಮಂಗಳವಾರ, ಗುರುವಾರ, ಶನಿವಾರ ಬೆಳಗಾವಿಯಿಂದ ಬೆಂಗಳೂರು ಕಡೆಗೆ ರೈಲು ಸಂಚರಿಸುತ್ತಿದೆ. ಬೆಳಿಗ್ಗೆ 12.45ಕ್ಕೆ ದಾವಣಗೆರೆ ನಿಲ್ದಾಣಕ್ಕೆ ಈ ರೈಲು ತಲುಪುತ್ತಿದೆ.</p>.<p>ಬೆಂಗಳೂರು–ಹುಬ್ಬಳ್ಳಿ ಜನಶತಾಬ್ದಿ ರೈಲು ಪ್ರತಿದಿನ ಸಂಚರಿಸುತ್ತಿದ್ದು, ಬೆಳಿಗ್ಗೆ 10.50ಕ್ಕೆ ದಾವಣಗೆರೆ ರೈಲು ನಿಲ್ದಾಣಕ್ಕೆ ತಲುಪುತ್ತಿದೆ.</p>.<p>ಯಶವಂತಪುರ–ದೆಹಲಿಯ ಹಝರತ್ ನಿಜಾಮುದ್ದೀನ್ ನಡುವೆ ಓಡುವ ಸಂಪರ್ಕ್ ಕ್ರಾಂತಿ ರೈಲು ವಾರಕ್ಕೆ ಎರಡುಬಾರಿ ಸಂಚರಿಸುತ್ತಿದೆ. ಮಂಗಳವಾರ ಮತ್ತು ಗುರುವಾರ ಬೆಂಗಳೂರು ಕಡೆಗೆ ಹಾಗೂ ಬುಧವಾರ ಮತ್ತು ಶನಿವಾರ ಬೆಂಗಳೂರಿನಿಂದ ದೆಹಲಿ ಕಡೆಗೆ ತೆರಳುತ್ತಿದೆ.</p>.<p>ಈ ಮೂರು ರೈಲುಗಳಲ್ಲಿ ದಾವಣಗೆರೆಯಿಂದ ಬೆಂಗಳೂರು ಕಡೆಗೆ ಹೋಗಲು ಹೆಚ್ಚು ಪ್ರಯಾಣಿಕರಿದ್ದು, ಹುಬ್ಬಳ್ಳಿ, ಬೆಳಗಾವಿ ಕಡೆಗೆ ಹೋಗುವವರ ಸಂಖ್ಯೆ ಕಡಿಮೆ ಇದೆ.</p>.<p>ಮೊದಲ ದಿನಕ್ಕೆ ಹೋಲಿಸಿದರೆ ಇಂದು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಜನ ನಿಧಾನವಾಗಿ ಓಡಾಟ ಆರಂಭಿಸುತ್ತಿದ್ದಾರೆ ಎಂದು ದಾವಣಗೆರೆ ಸ್ಟೇಷನ್ ಮ್ಯಾನೇಜರ್ ಸುಬ್ರಹ್ಮಣ್ಯೇಶ್ವರ ಶರ್ಮಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ದಾವಣಗೆರೆ ರೈಲು ನಿಲ್ದಾಣವನ್ನು ಸಂಪರ್ಕಿಸಿ ಹೋಗುವ ಮೂರು ರೈಲುಗಳು ಆರಂಭಗೊಂಡಿವೆ. ಜನರು ನಿಧಾನವಾಗಿ ಸ್ಪಂದನೆ ನೀಡಲು ಆರಂಭಿಸಿದ್ದಾರೆ. ಟಿಕೆಟ್ ಬುಕ್ಗೆ ಮಾಡಲು ಜನ ಸರದಿಯಲ್ಲಿ ನಿಂತಿರುವುದು ಮಂಗಳವಾರ ಕಂಡು ಬಂತು.</p>.<p>ಬೆಂಗಳೂರು–ಬೆಳಗಾವಿ ರೈಲು ವಾರಕ್ಕೆ ಮೂರು ದಿನ ಸಂಚರಿಸುತ್ತದೆ. ಹಾಗಾಗಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಂಗಳೂರಿನಿಂದ ಬೆಳಗಾವಿ ಕಡೆಗೆ ಹಾಗೂ ಮಂಗಳವಾರ, ಗುರುವಾರ, ಶನಿವಾರ ಬೆಳಗಾವಿಯಿಂದ ಬೆಂಗಳೂರು ಕಡೆಗೆ ರೈಲು ಸಂಚರಿಸುತ್ತಿದೆ. ಬೆಳಿಗ್ಗೆ 12.45ಕ್ಕೆ ದಾವಣಗೆರೆ ನಿಲ್ದಾಣಕ್ಕೆ ಈ ರೈಲು ತಲುಪುತ್ತಿದೆ.</p>.<p>ಬೆಂಗಳೂರು–ಹುಬ್ಬಳ್ಳಿ ಜನಶತಾಬ್ದಿ ರೈಲು ಪ್ರತಿದಿನ ಸಂಚರಿಸುತ್ತಿದ್ದು, ಬೆಳಿಗ್ಗೆ 10.50ಕ್ಕೆ ದಾವಣಗೆರೆ ರೈಲು ನಿಲ್ದಾಣಕ್ಕೆ ತಲುಪುತ್ತಿದೆ.</p>.<p>ಯಶವಂತಪುರ–ದೆಹಲಿಯ ಹಝರತ್ ನಿಜಾಮುದ್ದೀನ್ ನಡುವೆ ಓಡುವ ಸಂಪರ್ಕ್ ಕ್ರಾಂತಿ ರೈಲು ವಾರಕ್ಕೆ ಎರಡುಬಾರಿ ಸಂಚರಿಸುತ್ತಿದೆ. ಮಂಗಳವಾರ ಮತ್ತು ಗುರುವಾರ ಬೆಂಗಳೂರು ಕಡೆಗೆ ಹಾಗೂ ಬುಧವಾರ ಮತ್ತು ಶನಿವಾರ ಬೆಂಗಳೂರಿನಿಂದ ದೆಹಲಿ ಕಡೆಗೆ ತೆರಳುತ್ತಿದೆ.</p>.<p>ಈ ಮೂರು ರೈಲುಗಳಲ್ಲಿ ದಾವಣಗೆರೆಯಿಂದ ಬೆಂಗಳೂರು ಕಡೆಗೆ ಹೋಗಲು ಹೆಚ್ಚು ಪ್ರಯಾಣಿಕರಿದ್ದು, ಹುಬ್ಬಳ್ಳಿ, ಬೆಳಗಾವಿ ಕಡೆಗೆ ಹೋಗುವವರ ಸಂಖ್ಯೆ ಕಡಿಮೆ ಇದೆ.</p>.<p>ಮೊದಲ ದಿನಕ್ಕೆ ಹೋಲಿಸಿದರೆ ಇಂದು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಜನ ನಿಧಾನವಾಗಿ ಓಡಾಟ ಆರಂಭಿಸುತ್ತಿದ್ದಾರೆ ಎಂದು ದಾವಣಗೆರೆ ಸ್ಟೇಷನ್ ಮ್ಯಾನೇಜರ್ ಸುಬ್ರಹ್ಮಣ್ಯೇಶ್ವರ ಶರ್ಮಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>