‘ಒಂದು ವರ್ಷದಿಂದ ಅವರಿಗೆ ಬರಬೇಕಾದ ಸಂಬಳ ಕೊಟ್ಟಿಲ್ಲ. ಸಂಬಳ ಮಂಜೂರು ಮಾಡಲು ₹1 ಲಕ್ಷವನ್ನು ಸಹಕಾರ ಸಂಘಗಳ ಕಚೇರಿಯಲ್ಲಿನ ಉಪನಿಬಂಧಕರ ಕಚೇರಿಯ ಗುಮಾಸ್ತ ಹಾಗೂ ‘ಡಿ’ ದರ್ಜೆಯ ನೌಕರರು ಲಂಚ ಕೇಳಿದ್ದರು. ₹20 ಸಾವಿರ ಹೊಂದಿಸಿ ಕೊಟ್ಟರೂ ಸಂಬಳ ಕೊಡದೆ ಹಣ ದುರ್ಬಳಕೆ ಆರೋಪದ ಮೇಲೆ ಕೆಲವರ ಚಿತಾವಣೆಯಿಂದ ನನ್ನನ್ನು ಅಮಾನತು ಮಾಡಲಾಯಿತು. ಸಂಬಳವಿಲ್ಲದೆ ಸಂಸಾರ ನೆಡೆಸುವುದು ಕಷ್ಟವಾಗಿ, ಬೇರೆ ದಾರಿ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ’ ಎಂದು ಪತ್ರದಲ್ಲಿ ಬರೆದಿಟ್ಟು ಸಾವನ್ನಪ್ಪಿದ್ದಾರೆ.