ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸದಿಂದ ಅಮಾನತು: ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ

ಕೆಲಸದಿಂದ ಅಮಾನತು: ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ
Last Updated 14 ಜೂನ್ 2021, 3:13 IST
ಅಕ್ಷರ ಗಾತ್ರ

ದಾವಣಗೆರೆ: ಹಣ ದುರ್ಬಳಕೆ ಆರೋಪ ಹೊರಿಸಿ ಅಮಾನತು ಮಾಡಿದ್ದರಿಂದ ನೊಂದುಕೊಂಡು ಶ್ಯಾಗಲೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದ ಬಿ.ಎನ್. ಚಂದ್ರಪ್ಪ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಒಂದು ವರ್ಷದಿಂದ ಅವರಿಗೆ ಬರಬೇಕಾದ ಸಂಬಳ ಕೊಟ್ಟಿಲ್ಲ. ಸಂಬಳ ಮಂಜೂರು ಮಾಡಲು ₹1 ಲಕ್ಷವನ್ನು ಸಹಕಾರ ಸಂಘಗಳ ಕಚೇರಿಯಲ್ಲಿನ ಉಪನಿಬಂಧಕರ ಕಚೇರಿಯ ಗುಮಾಸ್ತ ಹಾಗೂ ‘ಡಿ’ ದರ್ಜೆಯ ನೌಕರರು ಲಂಚ ಕೇಳಿದ್ದರು. ₹20 ಸಾವಿರ ಹೊಂದಿಸಿ ಕೊಟ್ಟರೂ ಸಂಬಳ ಕೊಡದೆ ಹಣ ದುರ್ಬಳಕೆ ಆರೋಪದ ಮೇಲೆ ಕೆಲವರ ಚಿತಾವಣೆಯಿಂದ ನನ್ನನ್ನು ಅಮಾನತು ಮಾಡಲಾಯಿತು. ಸಂಬಳವಿಲ್ಲದೆ ಸಂಸಾರ ನೆಡೆಸುವುದು ಕಷ್ಟವಾಗಿ, ಬೇರೆ ದಾರಿ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ’ ಎಂದು ಪತ್ರದಲ್ಲಿ ಬರೆದಿಟ್ಟು ಸಾವನ್ನಪ್ಪಿದ್ದಾರೆ.

ಹದಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ತನಿಖೆ ನೆಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT