ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ದೋಷ: ಇಂಟರ್ ಸಿಟಿ ರೈಲು ವಿಳಂಬ

Last Updated 11 ನವೆಂಬರ್ 2019, 15:28 IST
ಅಕ್ಷರ ಗಾತ್ರ

ದಾವಣಗೆರೆ: ಎಂಜಿನ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಬೆಂಗಳೂರು-ಧಾರವಾಡ ಸಿದ್ಧಗಂಗಾ ಇಂಟರ್ ಸಿಟಿ ರೈಲು ಇಲ್ಲಿನ ರೈಲು ನಿಲ್ದಾಣದಿಂದ ಒಂದೂವರೆ ಗಂಟೆ ವಿಳಂಬವಾಗಿ ಹೊರಟಿತು.

ನಿಗದಿತ ಸಮಯ 6.20ಕ್ಕೆ ದಾವಣಗೆರೆ ರೈಲು ನಿಲ್ದಾಣಕ್ಕೆ ಬಂದ ರೈಲು 6.25ಕ್ಕೆ ಹೊರಡಬೇಕಿತ್ತು. ಆದರೆ, ಆ ವೇಳೆಗೆ ತಾಂತ್ರಿಕ ದೋಷದಿಂದ ಎಂಜಿನ್ ಚಾಲನೆ ಆಗಲಿಲ್ಲ.

55 ನಿಮಿಷಗಳ ಕಾಲ ರೈಲ್ವೆ ಅಧಿಕಾರಿಗಳು ಪ್ರಯತ್ನಿಸಿದರೂ ಎಂಜಿನ್‌ ಚಾಲು ಆಗಿಲ್ಲ. ಕೊನೆಗೆ ಸಂಜೆ 7.20ಕ್ಕೆ ಹರಿಹರದಿಂದ ಮತ್ತೊಂದು ಎಂಜಿನ್ ತಂದು ಜೋಡಿಸಿದ ಬಳಿಕ 7.25ಕ್ಕೆ ದಾವಣಗೆರೆಯಿಂದ ರೈಲು ಹೊರಟಿತು. ಒಂದೂವರೆ ಗಂಟೆ ಕಾಲ ಪ್ರಯಾಣಿಕರು ರೈಲು ನಿಲ್ದಾಣದಲ್ಲೇ ಕಾಲ ಕಳೆಯಬೇಕಾಯಿತು. ಸಕಾಲಕ್ಕೆ ಊರಿಗೆ ತಲುಪಲಾಗದೇ ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT