<p><strong>ದಾವಣಗೆರೆ</strong>: ‘ಬದುಕು ಬಯಕೆ ಭಾವನೆ’ ಕೃತಿಯು ಸ್ಫೂರ್ತಿದಾಯಕ ಮತ್ತು ಜೀವನೋತ್ಸವ ಮೂಡಿಸು ವಂಥದ್ದಾಗಿದೆ. ವೈವಿಧ್ಯಮಯ ಭಾವನೆಗಳನ್ನು ಶಕ್ತಿವರ್ಧಕ ಟಾನಿಕ್ ರೂಪದಲ್ಲಿ ನೀಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.</p>.<p>ಕಲಾ ಕನ್ಸ್ಟ್ರಕ್ಷನ್ ಎಂಜಿನಿಯರ್ ಎಚ್. ವಿ. ಮಂಜುನಾಥ ಸ್ವಾಮಿ ಅವರ ‘ಬದುಕು ಬಯಕೆ ಭಾವನೆ’ ಪುಸ್ತಕವನ್ನು ಲಯನ್ಸ್ ಕ್ಲಬ್ನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>ಜಯವಿಭವ ವಿದ್ಯಾಸಂಸ್ಥೆಯ ಎಂ.ಕೆ. ಬಕ್ಕಪ್ಪ ‘ಜೀವನದಲ್ಲಿ ಮನಃಶಾಂತಿ ಮತ್ತು ನೆಮ್ಮದಿ ಹುಡುಕುವವರಿಗೆ ಈ ಪುಸ್ತಕ ಮಾರ್ಗದರ್ಶನ ನೀಡಬಲ್ಲದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ಕಲಾವಿದ ಅರುಣ್ ಕುಮಾರ್ ಆರ್.ಟಿ. ಮಾತನಾಡಿ, ‘ಇದು ಪಾಂಡಿತ್ಯದ ಬರಹವಲ್ಲ. ಅನುಭವದ ಬರಹಗಳು. ಮಂಜಣ್ಣ ವ್ಯಕ್ತಪಡಿಸಿರುವ ವಿಷಯಗಳಲ್ಲಿ ಗಟ್ಟಿತನವಿದೆ. ಯುವ ಜನರ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಸ್ಫೂರ್ತಿದಾಯಕ ವಿಷಯಗಳು ಈ ಪುಸ್ತಕದಲ್ಲಿ ಅಡಗಿವೆ’ ಎಂದು ವಿಶ್ಲೇಷಿಸಿದರು.</p>.<p>ಮುರುಘರಾಜೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ. ಜಯಕುಮಾರ್, ‘ಕಡುಬಡತನದಲ್ಲಿ ಬೆಳೆದ ಮಂಜುನಾಥ ಸ್ವಾಮಿ ಕಷ್ಟಪಟ್ಟು ಬದುಕನ್ನು ಕಟ್ಟಿಕೊಂಡರು. ನಂತರ ಸಮಾಜ ಸೇವೆಯ ಬಯಕೆಯನ್ನು ಹೊಂದಿ ಲಯನ್ಸ್ ಕ್ಲಬ್ ಮುಂತಾದ ಸಂಘಟನೆಗಳಲ್ಲಿ ತೊಡಗಿಸಿಕೊಂಡರು. ಈಗ ಬರವಣಿಗೆಯ ಮೂಲಕ ಭಾವನೆ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ‘ಮಂಜುನಾಥಸ್ವಾಮಿ ಒಳ್ಳೆಯ ವಾಗ್ಮಿ. ಅವರ ಬರಹಗಳು ಪರಿಣಾಮ ಬೀರುವಂಥವುಗಳಾಗಿವೆ. ಇನ್ನೂ ಹೆಚ್ಚು ಹೆಚ್ಚು ಪುಸ್ತಕಗಳು ಅವರು ರಚನೆ ಮಾಡಲಿ’ ಎಂದು ಹಾರೈಸಿದರು.</p>.<p>ಕೃತಿಕಾರ ಎಚ್.ವಿ. ಮಂಜುನಾಥ ಸ್ವಾಮಿ, ‘ಕಟ್ಟಡ ನಿರ್ಮಾಣದ ಕೆಲವು ತಾಂತ್ರಿಕ ವಿಷಯಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಬರೆಯುವುದನ್ನು ಪ್ರಾರಂಭಿಸಿದೆ. ನಂತರ ವಿವಿಧ ವಿಷಯ ಗಳನ್ನು ಬರೆಯಲು ತೊಡಗಿಸಿಕೊಂಡೆ’ ಎಂದು ನೆನಪಿಸಿಕೊಂಡರು.</p>.<p>ಅಜಯ್ ಕುಮಾರ್ ಪ್ರಾರ್ಥನೆ ಮಾಡಿದರು. ಲಯನ್ಸ್ ಅಧ್ಯಕ್ಷ ಎಸ್. ಓಂಕಾರಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಕೋರಿ ಶಿವಕುಮಾರ್ ವಂದಿಸಿದರು. ಸುರಭಿ, ಶಿವಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಬಿ.ಎಸ್. ನಾಗಪ್ರಕಾಶ್, ಎ.ಎಸ್. ಮೃತ್ಯುಂಜಯ, ಎಸ್.ವಿ. ಬಂಡಿವಾಡ, ಪತ್ರಕರ್ತ ಇ.ಎಂ. ಮಂಜುನಾಥ ಅವರೂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ‘ಬದುಕು ಬಯಕೆ ಭಾವನೆ’ ಕೃತಿಯು ಸ್ಫೂರ್ತಿದಾಯಕ ಮತ್ತು ಜೀವನೋತ್ಸವ ಮೂಡಿಸು ವಂಥದ್ದಾಗಿದೆ. ವೈವಿಧ್ಯಮಯ ಭಾವನೆಗಳನ್ನು ಶಕ್ತಿವರ್ಧಕ ಟಾನಿಕ್ ರೂಪದಲ್ಲಿ ನೀಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.</p>.<p>ಕಲಾ ಕನ್ಸ್ಟ್ರಕ್ಷನ್ ಎಂಜಿನಿಯರ್ ಎಚ್. ವಿ. ಮಂಜುನಾಥ ಸ್ವಾಮಿ ಅವರ ‘ಬದುಕು ಬಯಕೆ ಭಾವನೆ’ ಪುಸ್ತಕವನ್ನು ಲಯನ್ಸ್ ಕ್ಲಬ್ನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>ಜಯವಿಭವ ವಿದ್ಯಾಸಂಸ್ಥೆಯ ಎಂ.ಕೆ. ಬಕ್ಕಪ್ಪ ‘ಜೀವನದಲ್ಲಿ ಮನಃಶಾಂತಿ ಮತ್ತು ನೆಮ್ಮದಿ ಹುಡುಕುವವರಿಗೆ ಈ ಪುಸ್ತಕ ಮಾರ್ಗದರ್ಶನ ನೀಡಬಲ್ಲದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>ಕಲಾವಿದ ಅರುಣ್ ಕುಮಾರ್ ಆರ್.ಟಿ. ಮಾತನಾಡಿ, ‘ಇದು ಪಾಂಡಿತ್ಯದ ಬರಹವಲ್ಲ. ಅನುಭವದ ಬರಹಗಳು. ಮಂಜಣ್ಣ ವ್ಯಕ್ತಪಡಿಸಿರುವ ವಿಷಯಗಳಲ್ಲಿ ಗಟ್ಟಿತನವಿದೆ. ಯುವ ಜನರ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಸ್ಫೂರ್ತಿದಾಯಕ ವಿಷಯಗಳು ಈ ಪುಸ್ತಕದಲ್ಲಿ ಅಡಗಿವೆ’ ಎಂದು ವಿಶ್ಲೇಷಿಸಿದರು.</p>.<p>ಮುರುಘರಾಜೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ. ಜಯಕುಮಾರ್, ‘ಕಡುಬಡತನದಲ್ಲಿ ಬೆಳೆದ ಮಂಜುನಾಥ ಸ್ವಾಮಿ ಕಷ್ಟಪಟ್ಟು ಬದುಕನ್ನು ಕಟ್ಟಿಕೊಂಡರು. ನಂತರ ಸಮಾಜ ಸೇವೆಯ ಬಯಕೆಯನ್ನು ಹೊಂದಿ ಲಯನ್ಸ್ ಕ್ಲಬ್ ಮುಂತಾದ ಸಂಘಟನೆಗಳಲ್ಲಿ ತೊಡಗಿಸಿಕೊಂಡರು. ಈಗ ಬರವಣಿಗೆಯ ಮೂಲಕ ಭಾವನೆ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ‘ಮಂಜುನಾಥಸ್ವಾಮಿ ಒಳ್ಳೆಯ ವಾಗ್ಮಿ. ಅವರ ಬರಹಗಳು ಪರಿಣಾಮ ಬೀರುವಂಥವುಗಳಾಗಿವೆ. ಇನ್ನೂ ಹೆಚ್ಚು ಹೆಚ್ಚು ಪುಸ್ತಕಗಳು ಅವರು ರಚನೆ ಮಾಡಲಿ’ ಎಂದು ಹಾರೈಸಿದರು.</p>.<p>ಕೃತಿಕಾರ ಎಚ್.ವಿ. ಮಂಜುನಾಥ ಸ್ವಾಮಿ, ‘ಕಟ್ಟಡ ನಿರ್ಮಾಣದ ಕೆಲವು ತಾಂತ್ರಿಕ ವಿಷಯಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಬರೆಯುವುದನ್ನು ಪ್ರಾರಂಭಿಸಿದೆ. ನಂತರ ವಿವಿಧ ವಿಷಯ ಗಳನ್ನು ಬರೆಯಲು ತೊಡಗಿಸಿಕೊಂಡೆ’ ಎಂದು ನೆನಪಿಸಿಕೊಂಡರು.</p>.<p>ಅಜಯ್ ಕುಮಾರ್ ಪ್ರಾರ್ಥನೆ ಮಾಡಿದರು. ಲಯನ್ಸ್ ಅಧ್ಯಕ್ಷ ಎಸ್. ಓಂಕಾರಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಕೋರಿ ಶಿವಕುಮಾರ್ ವಂದಿಸಿದರು. ಸುರಭಿ, ಶಿವಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಬಿ.ಎಸ್. ನಾಗಪ್ರಕಾಶ್, ಎ.ಎಸ್. ಮೃತ್ಯುಂಜಯ, ಎಸ್.ವಿ. ಬಂಡಿವಾಡ, ಪತ್ರಕರ್ತ ಇ.ಎಂ. ಮಂಜುನಾಥ ಅವರೂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>