<p><strong>ದಾವಣಗೆರೆ</strong>: ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯ ತಿದ್ದುಪಡಿಗೆ ನಗರದ ದಲ್ಲಾಳಿಗಳು ಹಾಗೂವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.</p>.<p>‘ಸುಗ್ರೀವಾಜ್ಞೆ ತಂದರೂ ಅವಧಿ ಮೂರರಿಂದ ನಾಲ್ಕು ವರ್ಷ ಅಷ್ಟೆ. ಆ ನಂತರ ರೈತರು ಎಪಿಎಂಸಿಗೆ ಬರುತ್ತಾರೆ. ರೈತರು ಮತ್ತು ನಮ್ಮ (ವರ್ತಕರು) ಬಾಂಧವ್ಯ ತುಂಬಾ ಹಿಂದಿನದು. ರೈತರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಅವರಿಗೆ ಸಲಹೆ ನೀಡುತ್ತೇವೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡಲು ಹೋಗುವುದಿಲ್ಲ’ ಎಂಬುದು ವ್ಯಾಪಾರಿಗಳ ನಂಬಿಕೆ.</p>.<p>‘383 ದಲ್ಲಾಳಿಗಳು, 1,600 ವರ್ತಕರು ಹಾಗೂ 380ಕ್ಕೂ ಹೆಚ್ಚು ಹಮಾಲರು ಹಾಗೂ ನೌಕರರು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ. ದೈತ್ಯ ಕಂಪನಿಗಳು ಕಾಲಿಟ್ಟರೆ ಇವರೆಲ್ಲರ ಜೀವನಕ್ಕೆ ಕುತ್ತು ಬರುತ್ತದೆ’ ಎಂಬುದು ಬಹುತೇಕ ವರ್ತಕರ ಅಭಿಪ್ರಾಯ.</p>.<p>‘ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗಬೇಕು. ತೂಕದಲ್ಲಿ ಮೋಸವಾಗಬಾರದು ಎಂಬ ಉದ್ದೇಶದಿಂದ 50 ವರ್ಷಗಳ ಹಿಂದೆ ಜಾರಿಗೆ ತಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಏಕಾಏಕಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಿದರೆ ನಾವೇನು ಮಾಡುವುದು’ ಎಂಬುದು ಎಪಿಎಂಸಿ ವರ್ತಕರ ಪ್ರಶ್ನೆ.</p>.<p>‘ಎಂಎನ್ಸಿಗಳು ಮಾರುಕಟ್ಟೆ ಯಾರ್ಡ್ ಬಿಟ್ಟು ಎಲ್ಲಿ ಬೇಕಾದರೂ ಖರೀದಿ ಮಾಡಬಹುದಾಗಿದೆ. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸುತ್ತವೆ. ದ್ವಿತೀಯ ಮತ್ತು ತೃತೀಯ ದರ್ಜೆಯ ಉತ್ಪನ್ನಗಳನ್ನುನಾವು ಖರೀದಿಸಿ ಯಾರಿಗೆ ಮಾರಾಟ ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ ದಲ್ಲಾಳಿಗಳ ಸಂಘದ ಮಾಜಿ ಅಧ್ಯಕ್ಷ ಕುಸುಮ್ ಶ್ರೇಷ್ಠಿ.</p>.<p>‘ರೈತರಿಗೆ ಲಾಭವಾಗಲಿ ಎನ್ನುವ ಉದ್ದೇಶದಿಂದ ಈ ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ಹೊರಟಿದೆ.ಹಳ್ಳಿಗಳಿಗೆ ಹೋಗಿ ರೈತರಿಂದ ಉತ್ಪನ್ನಗಳನ್ನು ನೇರವಾಗಿ ಖರೀದಿಸುವುದರಿಂದ ರೈತರಿಗೆ ಸಾರಿಗೆ ವೆಚ್ಚವೂ ಉಳಿತಾಯವಾಗಲಿದೆ. ಆದರೆ ದಲ್ಲಾಳಿಗಳು, ವರ್ತಕರು ಹಾಗೂ ಹಮಾಲರಿಗೆ ಸಮಸ್ಯೆಯಾಗುತ್ತದೆ’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಜೆ. ಪ್ರಭು.</p>.<p class="Subhead">ಕಾಯುವುದು ತಪ್ಪುತ್ತದೆ: ‘ಮನೆಗೆ ಬಂದು ಖರೀದಿ ಮಾಡಿದರೆ ಇನ್ನೂ ಒಳ್ಳೆಯದು. ಎಪಿಎಂಸಿಯಲ್ಲಿ ರಾತ್ರಿ ವೇಳೆ ಕಾಯುವುದು ತಪ್ಪುತ್ತದೆ. ಎಪಿಎಂಸಿಗೆ ಭತ್ತ ತಂದರೆ ಹಮಾಲರಿಗೆ 50 ಕೆ.ಜಿ ಹಾಗೂ ದಲ್ಲಾಳಿಗೆ 25 ಕೆ.ಜಿ ಭತ್ತ ಕೊಡಬೇಕು. ಅಲ್ಲದೇ ₹100ಕ್ಕೆ ₹ 2 ಕಮಿಷನ್ ನೀಡಬೇಕು. ಮನೆಗೆ ಬಂದು ಖರೀದಿ ಮಾಡಿದರೆ ಒಳ್ಳೆಯದು’ ಎನ್ನುತ್ತಾರೆ ಎಲೆಬೇತೂರು ರೈತ ಸಿದ್ದಲಿಂಗಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯ ತಿದ್ದುಪಡಿಗೆ ನಗರದ ದಲ್ಲಾಳಿಗಳು ಹಾಗೂವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.</p>.<p>‘ಸುಗ್ರೀವಾಜ್ಞೆ ತಂದರೂ ಅವಧಿ ಮೂರರಿಂದ ನಾಲ್ಕು ವರ್ಷ ಅಷ್ಟೆ. ಆ ನಂತರ ರೈತರು ಎಪಿಎಂಸಿಗೆ ಬರುತ್ತಾರೆ. ರೈತರು ಮತ್ತು ನಮ್ಮ (ವರ್ತಕರು) ಬಾಂಧವ್ಯ ತುಂಬಾ ಹಿಂದಿನದು. ರೈತರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಅವರಿಗೆ ಸಲಹೆ ನೀಡುತ್ತೇವೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡಲು ಹೋಗುವುದಿಲ್ಲ’ ಎಂಬುದು ವ್ಯಾಪಾರಿಗಳ ನಂಬಿಕೆ.</p>.<p>‘383 ದಲ್ಲಾಳಿಗಳು, 1,600 ವರ್ತಕರು ಹಾಗೂ 380ಕ್ಕೂ ಹೆಚ್ಚು ಹಮಾಲರು ಹಾಗೂ ನೌಕರರು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ. ದೈತ್ಯ ಕಂಪನಿಗಳು ಕಾಲಿಟ್ಟರೆ ಇವರೆಲ್ಲರ ಜೀವನಕ್ಕೆ ಕುತ್ತು ಬರುತ್ತದೆ’ ಎಂಬುದು ಬಹುತೇಕ ವರ್ತಕರ ಅಭಿಪ್ರಾಯ.</p>.<p>‘ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗಬೇಕು. ತೂಕದಲ್ಲಿ ಮೋಸವಾಗಬಾರದು ಎಂಬ ಉದ್ದೇಶದಿಂದ 50 ವರ್ಷಗಳ ಹಿಂದೆ ಜಾರಿಗೆ ತಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಏಕಾಏಕಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಿದರೆ ನಾವೇನು ಮಾಡುವುದು’ ಎಂಬುದು ಎಪಿಎಂಸಿ ವರ್ತಕರ ಪ್ರಶ್ನೆ.</p>.<p>‘ಎಂಎನ್ಸಿಗಳು ಮಾರುಕಟ್ಟೆ ಯಾರ್ಡ್ ಬಿಟ್ಟು ಎಲ್ಲಿ ಬೇಕಾದರೂ ಖರೀದಿ ಮಾಡಬಹುದಾಗಿದೆ. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸುತ್ತವೆ. ದ್ವಿತೀಯ ಮತ್ತು ತೃತೀಯ ದರ್ಜೆಯ ಉತ್ಪನ್ನಗಳನ್ನುನಾವು ಖರೀದಿಸಿ ಯಾರಿಗೆ ಮಾರಾಟ ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ ದಲ್ಲಾಳಿಗಳ ಸಂಘದ ಮಾಜಿ ಅಧ್ಯಕ್ಷ ಕುಸುಮ್ ಶ್ರೇಷ್ಠಿ.</p>.<p>‘ರೈತರಿಗೆ ಲಾಭವಾಗಲಿ ಎನ್ನುವ ಉದ್ದೇಶದಿಂದ ಈ ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ಹೊರಟಿದೆ.ಹಳ್ಳಿಗಳಿಗೆ ಹೋಗಿ ರೈತರಿಂದ ಉತ್ಪನ್ನಗಳನ್ನು ನೇರವಾಗಿ ಖರೀದಿಸುವುದರಿಂದ ರೈತರಿಗೆ ಸಾರಿಗೆ ವೆಚ್ಚವೂ ಉಳಿತಾಯವಾಗಲಿದೆ. ಆದರೆ ದಲ್ಲಾಳಿಗಳು, ವರ್ತಕರು ಹಾಗೂ ಹಮಾಲರಿಗೆ ಸಮಸ್ಯೆಯಾಗುತ್ತದೆ’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಜೆ. ಪ್ರಭು.</p>.<p class="Subhead">ಕಾಯುವುದು ತಪ್ಪುತ್ತದೆ: ‘ಮನೆಗೆ ಬಂದು ಖರೀದಿ ಮಾಡಿದರೆ ಇನ್ನೂ ಒಳ್ಳೆಯದು. ಎಪಿಎಂಸಿಯಲ್ಲಿ ರಾತ್ರಿ ವೇಳೆ ಕಾಯುವುದು ತಪ್ಪುತ್ತದೆ. ಎಪಿಎಂಸಿಗೆ ಭತ್ತ ತಂದರೆ ಹಮಾಲರಿಗೆ 50 ಕೆ.ಜಿ ಹಾಗೂ ದಲ್ಲಾಳಿಗೆ 25 ಕೆ.ಜಿ ಭತ್ತ ಕೊಡಬೇಕು. ಅಲ್ಲದೇ ₹100ಕ್ಕೆ ₹ 2 ಕಮಿಷನ್ ನೀಡಬೇಕು. ಮನೆಗೆ ಬಂದು ಖರೀದಿ ಮಾಡಿದರೆ ಒಳ್ಳೆಯದು’ ಎನ್ನುತ್ತಾರೆ ಎಲೆಬೇತೂರು ರೈತ ಸಿದ್ದಲಿಂಗಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>