ಬಸವಾಪಟ್ಟಣ: ಸಮೀಪದ ಶ್ರೀರಾಮನಗರದಲ್ಲಿ ಭಾನುವಾರ ಬೀಸಿದ ಭಾರಿ ಬಿರುಗಾಳಿ ಮಳೆಗೆ ಒಂಬತ್ತು ವಿದ್ಯುತ್ ಕಂಬ ಮತ್ತು ಹಲವು ಮರಗಳು ನೆಲಕ್ಕುರುಳಿವೆ.
ಸಂಜೆಯಿಂದ ಗ್ರಾಮದಲ್ಲಿ ಭಾರಿ ಗಾಳಿ ಬೀಸಲಾರಂಭಿಸಿತ್ತು. ಗಾಳಿಯ ವೇಗ ಹೆಚ್ಚಾಗುತ್ತಿದ್ದಂತೆ ಮರ ಹಾಗೂ ಕಂಬಗಳು ನೆಲಕ್ಕೆ ಬಿದ್ದವು. ವಿದ್ಯುತ್ ತಂತಿಗಳು ನೆಲಕ್ಕೆ ಬಿದ್ದಿದ್ದರಿಂದ ಗ್ರಾಮಸ್ಥರು ರಸ್ತೆಗಳಲ್ಲಿ ಓಡಾಡಲು ಪರದಾಡಿದರು.
ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಯಾರಿಗೂ ಅಪಾಯವಾಗಿಲ್ಲ. ಬೆಸ್ಕಾಂ ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದ್ದು, ಸೋಮವಾರ ದುರಸ್ತಿ ನಡೆಸಿ, ವಿದ್ಯುತ್ ಸಂಪರ್ಕ ನೀಡುವುದಾಗಿ ತಿಳಿಸಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.