<p><strong>ದಾವಣಗೆರೆ:</strong> ಸಾಲ ಕೊಡುವುದಾಗಿ ನಂಬಿಸಿ ಖಾಸಗಿ ಫೈನಾನ್ಸ್ ಕಂಪನಿಯೊಂದು ಫೈನಾನ್ಸ್ನಲ್ಲೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ₹1.16 ಲಕ್ಷ ವಂಚಿಸಿದೆ.</p>.<p>ಚನ್ನಗಿರಿ ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದ ಜಿ.ಎಚ್. ಪ್ರವೀಣ್ ವಂಚನೆಗೆ ಒಳಗಾದವರು.</p>.<p>ಸೊನಾಟೆಲ್ ಫೈನಾನ್ಸ್ ಲಿಮಿಟೆಡ್ ಕಂಪನಿಯವರು ಎಂದು ಹಿಂದಿ ಭಾಷೆಯಲ್ಲಿ ಪ್ರವೀಣ್ ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ₹4 ಲಕ್ಷ ವೈಯಕ್ತಿಕ ಸಾಲ ಕೊಡುವುದಾಗಿ ಹೇಳಿ, ಪಾನ್, ಆಧಾರ ನಂಬರ್ ಪಡೆದಿದ್ದಾನೆ. ಬಳಿಕ ವಿಮೆ ದಾಖಲೆ ದಾಖಲೆಗಳ ಖರ್ಚಿಗೆ ₹13 ಸಾವಿರ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಆಗ ಪ್ರವೀಣ್ ಅವರು ಗೂಗಲ್ ಪೇ ಮುಖಾಂತರ ಹಣ ಹಾಕಿದ್ದಾರೆ.</p>.<p>ಸಾಲ ಭದ್ರತೆಗಾಗಿ ₹53,400, ಅಲ್ಲದೇ ಜಿಎಸ್ಟಿ ಕಟ್ಟದೇ ಇರುವ ಕಾರಣ ನಿಮಗೆ ಲೋನ್ ಆಗಿಲ್ಲ ಎಂದು ₹44, 700 ಹಣವನ್ನು ಪ್ರವೀಣ್ ಅವರಿಂದ ಪಡೆದುಕೊಂಡಿದ್ದಾರೆ. ಅಂತಿಮವಾಗಿ ನಿಮ್ಮ ಹಣ ಒಂದು ವಾರದಲ್ಲಿ ಬರುತ್ತದೆ ಲೋನ್ ರದ್ದು ಮಾಡಲು ಮತ್ತೆ ಹಣ ಕಟ್ಟಿ ಎಂದಿದ್ದಕ್ಕೆ ಪ್ರವೀಣ್ ಮತ್ತೊಮ್ಮೆ ₹5 ಸಾವಿರ ಕಟ್ಟಿದ್ದಾರೆ. ಆದರೆ ಕಟ್ಟಿದ ಹಣ ಮಾತ್ರ ವಾಪಸ್ ಬರಲಿಲ್ಲ ಎಂದು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಸಾಲ ಕೊಡುವುದಾಗಿ ನಂಬಿಸಿ ಖಾಸಗಿ ಫೈನಾನ್ಸ್ ಕಂಪನಿಯೊಂದು ಫೈನಾನ್ಸ್ನಲ್ಲೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ₹1.16 ಲಕ್ಷ ವಂಚಿಸಿದೆ.</p>.<p>ಚನ್ನಗಿರಿ ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದ ಜಿ.ಎಚ್. ಪ್ರವೀಣ್ ವಂಚನೆಗೆ ಒಳಗಾದವರು.</p>.<p>ಸೊನಾಟೆಲ್ ಫೈನಾನ್ಸ್ ಲಿಮಿಟೆಡ್ ಕಂಪನಿಯವರು ಎಂದು ಹಿಂದಿ ಭಾಷೆಯಲ್ಲಿ ಪ್ರವೀಣ್ ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ₹4 ಲಕ್ಷ ವೈಯಕ್ತಿಕ ಸಾಲ ಕೊಡುವುದಾಗಿ ಹೇಳಿ, ಪಾನ್, ಆಧಾರ ನಂಬರ್ ಪಡೆದಿದ್ದಾನೆ. ಬಳಿಕ ವಿಮೆ ದಾಖಲೆ ದಾಖಲೆಗಳ ಖರ್ಚಿಗೆ ₹13 ಸಾವಿರ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಆಗ ಪ್ರವೀಣ್ ಅವರು ಗೂಗಲ್ ಪೇ ಮುಖಾಂತರ ಹಣ ಹಾಕಿದ್ದಾರೆ.</p>.<p>ಸಾಲ ಭದ್ರತೆಗಾಗಿ ₹53,400, ಅಲ್ಲದೇ ಜಿಎಸ್ಟಿ ಕಟ್ಟದೇ ಇರುವ ಕಾರಣ ನಿಮಗೆ ಲೋನ್ ಆಗಿಲ್ಲ ಎಂದು ₹44, 700 ಹಣವನ್ನು ಪ್ರವೀಣ್ ಅವರಿಂದ ಪಡೆದುಕೊಂಡಿದ್ದಾರೆ. ಅಂತಿಮವಾಗಿ ನಿಮ್ಮ ಹಣ ಒಂದು ವಾರದಲ್ಲಿ ಬರುತ್ತದೆ ಲೋನ್ ರದ್ದು ಮಾಡಲು ಮತ್ತೆ ಹಣ ಕಟ್ಟಿ ಎಂದಿದ್ದಕ್ಕೆ ಪ್ರವೀಣ್ ಮತ್ತೊಮ್ಮೆ ₹5 ಸಾವಿರ ಕಟ್ಟಿದ್ದಾರೆ. ಆದರೆ ಕಟ್ಟಿದ ಹಣ ಮಾತ್ರ ವಾಪಸ್ ಬರಲಿಲ್ಲ ಎಂದು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>