ದೇವಸ್ಥಾನದಲ್ಲಿ ಮುಂಜಾನೆ ವೀರಭದ್ರೇಶ್ವರಸ್ವಾಮಿ, ಕಾಳಿಕಾಂಬದೇವಿಗೆ ರುದ್ರಾಭಿಷೇಕ, ವಿಶೇಷ ಆಲಂಕಾರ ಪೂಜೆ ಹಾಗೂ ಕಲ್ಯಾಣೋತ್ಸವ ನೆರವೇರಿತು. ರಥವನ್ನು ಹೂವಿನಮಾಲೆ, ಬಾಳೆಗೊನೆ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ತೇರಿನ ಗಾಲಿಗೆ ಎಡೆಬಾನ ಸೇವೆ ಸಲ್ಲಿಸಿದ ನಂತರ ದೇವಾಲಯದಿಂದ ವಿವಿಧ ಮಂಗಳವಾದ್ಯಗಳೊಂದಿಗೆ ವೀರಭದ್ರೇಶ್ವರಸ್ವಾಮಿ ಮತ್ತು ಕಾಳಿಕಾಂಬ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತರು ರಥವನ್ನು ಎಳೆದರು.