ದಾವಣಗೆರೆಯ ದೊಡ್ಡಪೇಟೆಯ ಬಸವೇಶ್ವರ ಮತ್ತು ದಾನಮ್ಮ ದೇವಾಲಯದಲ್ಲಿ ಪೊಲೀಸರು ಹಾಗೂ ದೇವಾಲಯದ ಟ್ರಸ್ಟಿಗಳ ಸಮ್ಮುಖದಲ್ಲಿ ಮೃತರ ಮಕ್ಕಳು, ಪತಿಯಂದಿರು ಹಾಗೂ ಸಂಬಂಧಿಕರು ಅಪಘಾತದಲ್ಲಿ ಮೃತಪಟ್ಟವರ ವಾಚ್ಗಳು, ಬಂಗಾರದ ಆಭರಣಗಳು, ಉಂಗುರ, ವ್ಯಾನಿಟಿ ಬ್ಯಾಗ್ಗಳು, ಮೊಬೈಲ್ಗಳನ್ನು ನೋಡಿ ಭಾವುಕರಾದರು. ಕೆಲ ಚೈನುಗಳು ಅರ್ಧಕ್ಕೆ ಕಟ್ ಆಗಿದ್ದವು. ಕಿವಿಯೋಲೆಗಳು ಒಂದು ಇದ್ದರೆ ಮತ್ತೊಂದು ಇಲ್ಲದಂತೆ ಆಗಿದ್ದವು.ಬ್ಯಾಗ್ನೊಳಗೆ ಇಟ್ಟಿದ ಕೆಲ ಮೊಬೈಲ್ಗಳು ಸುರಕ್ಷಿತವಾಗಿದ್ದವು. ಕೆಲವು ಜಜ್ಜಿ ಹೋಗಿದ್ದವು.