ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗದ ಕಾರಣಕ್ಕಾಗಿ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ವಿಶ್ವನಾಥ್ ಅವರಲ್ಲಿ ದಾಖಲೆಗಳಿದ್ದರೆ ನೀಡಲಿ. ಎಂಎಲ್ಸಿ ನಾಮನಿರ್ದೇಶನ ಆದವರಿಗೆ ಸಚಿವಸ್ಥಾನ ನೀಡಲು ಬರುವುದಿಲ್ಲ. ವಿಶ್ವನಾಥ್ ಕೂಡ ನಮ್ಮ ನಾಯಕರೇ ಆಗಿದ್ದಾರೆ. ಮುಂದೆ ನೋಡೋಣ’ ಎಂದು ತಿಳಿಸಿದರು.