<p><strong>ಮಲೇಬೆನ್ನೂರು: </strong>ಪ್ರಸಕ್ತ ಅವಸರ, ಒತ್ತಡ ಹಾಗೂ ದುಬಾರಿ ದಿನ ಸಾಮಾಜಿಕ ಕಳಕಳಿ ಇರುವ ಹಲವಾರು ಸಂಘಟನೆಗಳು ಸಾಮೂಹಿಕ ವಿವಾಹಗಳಂತಹ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.<br /> ಇಲ್ಲಿನ ನಂದಿಗುಡಿ ರಸ್ತೆ ಆಂಜನೇಯ ದೇವಾಲಯ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದ ಧರ್ಮಸಭೆಯಲ್ಲಿ ಬುಧವಾರ ಅವರು ಆಶೀರ್ವಚನ ನೀಡಿದರು.<br /> <br /> ಬಾಲ್ಯಾವಸ್ಥೆಯಲ್ಲಿ ಶಿಕ್ಷಣ ಪಡೆಯುವುದು, ಯೌವನಾವಸ್ಥೆ ತಲುಪಿದ ವರ ದುಶ್ಚಟಗಳ ದಾಸನಾಗುವುದನ್ನು ತಪ್ಪಿಸಿ ಸರಿದಾರಿಗೆ ತರಲು ಹಿಂದಿನ ಕಾಲದಲ್ಲಿ ಮದುವೆ ಮಾಡುತ್ತ್ದ್ದಿದರು.ಸಮಸ್ಯೆ ಸುಳಿಯಲ್ಲಿ ಸಿಲುಕದಂತೆ ಸತ್ಪ್ರಜೆಗಳನ್ನಾಗಿಸುವುತ್ತ ಹಿರಿಯರ ಸಲಹೆ ಸೂಚನೆ ಮಾರ್ಗದರ್ಶನ ಪಡೆದು ಉತ್ತಮ ಜೀವನ ನಡೆಸುವಂತೆ ಕೋರಿದರು.<br /> <br /> ಸಾಮೂಹಿಕ ವಿವಾಹ ಬಡ, ಹಾಗೂ ಕೆಳವರ್ಗದ ಜನತೆಗೆ ವರದಾವಾಗಿದೆ. ಶೋಷಿತ ವರ್ಗದ ಪರವಾಗಿ ಶ್ರಮಿಸಿದ ಬಸವಣ್ಣನ ಜನ್ಮದಿನದಂದು ಹಮ್ಮಿಕೊಂಡಿರುವುದು ಉತ್ತಮ ಸಂಪ್ರದಾಯ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದರು ಹರ್ಷ ವ್ಯಕ್ತಪಡಿಸಿದರು.<br /> <br /> ಮಹಾತ್ಮರ ನೆನಪಿಗೆ ಜನ್ಮದಿನ, ಜಯಂತಿ, ಆರಾಧನೆ ಮಾಡಿ ಆಚರಿಸಿದರೆ, ರಾಜಕಾರಣಿಗಳಿಗೆ ಪುಣ್ಯಸ್ಮರಣೆ ಎನ್ನುವ ಅರ್ಥ ಬಿಡಿಸಿ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು.<br /> <br /> ನವ ವಿವಾಹಿತರು ಕುಟುಂಬ ಯೋಜನೆ ಅಳವಡಿಸಿಕೊಂಡು 2 ಮಕ್ಕಳನ್ನು ಪಡೆದು ಶಿಕ್ಷಣ ನೀಡುವ ಕುರಿತು ಯೋಜನೆ ರೂಪಿಸಿ ಮಾದರಿ ಜೀವನ ನಡೆಸಿ. ಸಾಮೂಹಿಕ ವಿವಾಹ ಹಮ್ಮಿಕೊಂಡ ದೇವಾಲಯ ಸಮಿತಿ ಕಾರ್ಯ ಸ್ಮರಣಾರ್ಹ ಎಂದು ಶಾಸಕ ಬಿ.ಪಿ. ಹರೀಶ್ ಸಂತಸ ವ್ಯಕ್ತಪಡಿಸಿದರು.<br /> <br /> ಪ್ರಸಕ್ತ ದುಬಾರಿ ದಿನ ಹಣವಂತರಿಗೆ ವಿವಾಹ ಪ್ರತಿಷ್ಠೆ ಪ್ರಶ್ನೆಯಾಗಿದ್ದರೆ ಬಡವರು ಹಾಗೂ ಮಧ್ಯಮ ವರ್ಗಕ್ಕೆ ಸಮಸ್ಯೆಯಾಗಿದೆ. ಸರಳ ವಿವಾಹ ಹಮ್ಮಿಕೊಂಡು ಒಂದೇ ವೇದಿಕೆಯಲ್ಲಿ ಹತ್ತಾರು ವಿವಾಹ ಮಾಡುವುದರಿಂದ ದುಂದವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ತಿಳಿಸಿದರು.<br /> <br /> ಜಿ.ಪಂ. ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಮಾಗಾನಹಳ್ಳಿ ಹಾಲಪ್ಪ, ಎಚ್.ಜಿ. ಗುರುಸಿದ್ದಪ್ಪ ಇತರರು ಮಾತನಾಡಿದರು. <br /> <br /> ಗ್ರಾಮದ ಮುಖಂಡರಾದ ಕೆ.ಪಿ. ಸಿದ್ದಬಸಪ್ಪ, ವಾಗೀಶ್ಸ್ವಾಮಿ, ಬಿ. ಚಿದಾನಂದಪ್ಪ, ನಿಟ್ಟೂರು ಹೊನ್ನಪ್ಪ, ಕೆ. ಪರಶುರಾಮಪ್ಪ, ಮೊಹ್ಮದ್ ರೋಷನ್, ಫೈಜು, ಪಿ.ಎಸ್. ಹನುಮಂತಪ್ಪ, ಬಿ. ವೀರಯ್ಯ, ಓಬಳಪ್ಪ ಇತರರು ಉಪಸ್ಥಿತರಿದ್ದರು.<br /> <br /> ದೇವಾಲಯ ಸಮಿತಿ ಅನ್ನಸಂತರ್ಪಣೆ ಏರ್ಪಡಿಸಿತ್ತು. ದಾನಿಗಳು ಮಜ್ಜಿಗೆ ವಿತರಿಸಿದರು. ದೇವಾಲಯ ನಿರ್ಮಾಣಕ್ಕೆ ಧನಸಹಾಯ ಮಾಡಿದ ದಾನಿಗಳನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. 34 ಜೋಡಿಗಳು ದಾಂಪತ್ಯ ಸ್ವೀಕರಿಸಿದರು.ದಂಡೀ ತಿಪ್ಪೇಸ್ವಾಮಿ ಸ್ವಾಗತಿಸಿದರು, ಹನುಮಂತಪ್ಪ ನಿರೂಪಿಸಿ ವಂದಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು: </strong>ಪ್ರಸಕ್ತ ಅವಸರ, ಒತ್ತಡ ಹಾಗೂ ದುಬಾರಿ ದಿನ ಸಾಮಾಜಿಕ ಕಳಕಳಿ ಇರುವ ಹಲವಾರು ಸಂಘಟನೆಗಳು ಸಾಮೂಹಿಕ ವಿವಾಹಗಳಂತಹ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.<br /> ಇಲ್ಲಿನ ನಂದಿಗುಡಿ ರಸ್ತೆ ಆಂಜನೇಯ ದೇವಾಲಯ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದ ಧರ್ಮಸಭೆಯಲ್ಲಿ ಬುಧವಾರ ಅವರು ಆಶೀರ್ವಚನ ನೀಡಿದರು.<br /> <br /> ಬಾಲ್ಯಾವಸ್ಥೆಯಲ್ಲಿ ಶಿಕ್ಷಣ ಪಡೆಯುವುದು, ಯೌವನಾವಸ್ಥೆ ತಲುಪಿದ ವರ ದುಶ್ಚಟಗಳ ದಾಸನಾಗುವುದನ್ನು ತಪ್ಪಿಸಿ ಸರಿದಾರಿಗೆ ತರಲು ಹಿಂದಿನ ಕಾಲದಲ್ಲಿ ಮದುವೆ ಮಾಡುತ್ತ್ದ್ದಿದರು.ಸಮಸ್ಯೆ ಸುಳಿಯಲ್ಲಿ ಸಿಲುಕದಂತೆ ಸತ್ಪ್ರಜೆಗಳನ್ನಾಗಿಸುವುತ್ತ ಹಿರಿಯರ ಸಲಹೆ ಸೂಚನೆ ಮಾರ್ಗದರ್ಶನ ಪಡೆದು ಉತ್ತಮ ಜೀವನ ನಡೆಸುವಂತೆ ಕೋರಿದರು.<br /> <br /> ಸಾಮೂಹಿಕ ವಿವಾಹ ಬಡ, ಹಾಗೂ ಕೆಳವರ್ಗದ ಜನತೆಗೆ ವರದಾವಾಗಿದೆ. ಶೋಷಿತ ವರ್ಗದ ಪರವಾಗಿ ಶ್ರಮಿಸಿದ ಬಸವಣ್ಣನ ಜನ್ಮದಿನದಂದು ಹಮ್ಮಿಕೊಂಡಿರುವುದು ಉತ್ತಮ ಸಂಪ್ರದಾಯ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದರು ಹರ್ಷ ವ್ಯಕ್ತಪಡಿಸಿದರು.<br /> <br /> ಮಹಾತ್ಮರ ನೆನಪಿಗೆ ಜನ್ಮದಿನ, ಜಯಂತಿ, ಆರಾಧನೆ ಮಾಡಿ ಆಚರಿಸಿದರೆ, ರಾಜಕಾರಣಿಗಳಿಗೆ ಪುಣ್ಯಸ್ಮರಣೆ ಎನ್ನುವ ಅರ್ಥ ಬಿಡಿಸಿ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು.<br /> <br /> ನವ ವಿವಾಹಿತರು ಕುಟುಂಬ ಯೋಜನೆ ಅಳವಡಿಸಿಕೊಂಡು 2 ಮಕ್ಕಳನ್ನು ಪಡೆದು ಶಿಕ್ಷಣ ನೀಡುವ ಕುರಿತು ಯೋಜನೆ ರೂಪಿಸಿ ಮಾದರಿ ಜೀವನ ನಡೆಸಿ. ಸಾಮೂಹಿಕ ವಿವಾಹ ಹಮ್ಮಿಕೊಂಡ ದೇವಾಲಯ ಸಮಿತಿ ಕಾರ್ಯ ಸ್ಮರಣಾರ್ಹ ಎಂದು ಶಾಸಕ ಬಿ.ಪಿ. ಹರೀಶ್ ಸಂತಸ ವ್ಯಕ್ತಪಡಿಸಿದರು.<br /> <br /> ಪ್ರಸಕ್ತ ದುಬಾರಿ ದಿನ ಹಣವಂತರಿಗೆ ವಿವಾಹ ಪ್ರತಿಷ್ಠೆ ಪ್ರಶ್ನೆಯಾಗಿದ್ದರೆ ಬಡವರು ಹಾಗೂ ಮಧ್ಯಮ ವರ್ಗಕ್ಕೆ ಸಮಸ್ಯೆಯಾಗಿದೆ. ಸರಳ ವಿವಾಹ ಹಮ್ಮಿಕೊಂಡು ಒಂದೇ ವೇದಿಕೆಯಲ್ಲಿ ಹತ್ತಾರು ವಿವಾಹ ಮಾಡುವುದರಿಂದ ದುಂದವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ತಿಳಿಸಿದರು.<br /> <br /> ಜಿ.ಪಂ. ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಮಾಗಾನಹಳ್ಳಿ ಹಾಲಪ್ಪ, ಎಚ್.ಜಿ. ಗುರುಸಿದ್ದಪ್ಪ ಇತರರು ಮಾತನಾಡಿದರು. <br /> <br /> ಗ್ರಾಮದ ಮುಖಂಡರಾದ ಕೆ.ಪಿ. ಸಿದ್ದಬಸಪ್ಪ, ವಾಗೀಶ್ಸ್ವಾಮಿ, ಬಿ. ಚಿದಾನಂದಪ್ಪ, ನಿಟ್ಟೂರು ಹೊನ್ನಪ್ಪ, ಕೆ. ಪರಶುರಾಮಪ್ಪ, ಮೊಹ್ಮದ್ ರೋಷನ್, ಫೈಜು, ಪಿ.ಎಸ್. ಹನುಮಂತಪ್ಪ, ಬಿ. ವೀರಯ್ಯ, ಓಬಳಪ್ಪ ಇತರರು ಉಪಸ್ಥಿತರಿದ್ದರು.<br /> <br /> ದೇವಾಲಯ ಸಮಿತಿ ಅನ್ನಸಂತರ್ಪಣೆ ಏರ್ಪಡಿಸಿತ್ತು. ದಾನಿಗಳು ಮಜ್ಜಿಗೆ ವಿತರಿಸಿದರು. ದೇವಾಲಯ ನಿರ್ಮಾಣಕ್ಕೆ ಧನಸಹಾಯ ಮಾಡಿದ ದಾನಿಗಳನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. 34 ಜೋಡಿಗಳು ದಾಂಪತ್ಯ ಸ್ವೀಕರಿಸಿದರು.ದಂಡೀ ತಿಪ್ಪೇಸ್ವಾಮಿ ಸ್ವಾಗತಿಸಿದರು, ಹನುಮಂತಪ್ಪ ನಿರೂಪಿಸಿ ವಂದಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>