<p><strong>ಮಲೇಬೆನ್ನೂರು:</strong> ಇಲ್ಲಿನ ನೆಮ್ಮದಿ ಕೇಂದ್ರ ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿದ ಜನತೆ, ರೈತರು ಹಾಗೂ ವಿದ್ಯಾರ್ಥಿಗಳು ಬಲವಂತವಾಗಿ ಬಾಗಿಲು ಮುಚ್ಚಿಸಿ ರಸ್ತೆ ತಡೆ ನಡೆಸಿದ ಘಟನೆ ಮಂಗಳವಾರ ಜರುಗಿತು.</p>.<p>ಉನ್ನತ ವಿದ್ಯಾಭ್ಯಾಸ, ಶಾಲಾ ಕಾಲೇಜಿಗೆ ಸೇರ ಬಯಸುವ ವಿದ್ಯಾರ್ಥಿವೃಂದ ಆದಾಯ, ಜಾತಿ ಪ್ರಮಾಣ ಪತ್ರ ಪಡೆಯಲು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿದ್ದರು.</p>.<p>ಪಡಿತರಚೀಟಿ, ವೃದ್ಧಾಪ್ಯ ವೇತನಕ್ಕೆ ಅರ್ಜಿಸಲ್ಲಿಸುವವರು ಹಾಗೂ ಪಹಣಿ ಪಡೆಯಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.</p>.<p>ನೆಮ್ಮದಿ ಕೇಂದ್ರದ ಏಕಮಾತ್ರ ಸಿಬ್ಬಂದಿ ಎಂದಿನಂತೆ ಕಚೇರಿ ಆರಂಭಿಸಿದರು. ಆದರೆ, ಸ್ವಲ್ಪ ಹೊತ್ತಿನಲ್ಲಿ ವಿದ್ಯುತ್ಪೂರೈಕೆ ಸ್ಥಗಿತವಾಯಿತು.</p>.<p>ಉಪಸ್ಥಿತ ವಿದ್ಯಾರ್ಥಿಗಳು ಪದವಿ, ಡಿಪ್ಲೊಮಾ ತರಗತಿ ಸೇರಲು ಜೂನ್ 15 ಅಂತಿಮ ದಿನ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ರೈತರು ಸ್ಥಳಕ್ಕಾಗಮಿಸಿ ನೆಮ್ಮದಿ ಕೇಂದ್ರಕ್ಕೆ ಒಂದು ಗಣಕಯಂತ್ರ, ಪ್ರಿಂಟರ್ ಪೂರೈಸಿದ್ದಾರೆ. ಚಿಕ್ಕ ಯುಪಿಎಸ್ನಿಂದ ಪ್ರಯೋಜನವಿಲ್ಲ ಎಂದು ಸಮಸ್ಯೆಯನ್ನು ತಹಶೀಲ್ದಾರ್ ಗಮನಕ್ಕೆ ತಂದರು.</p>.<p>ಸ್ವಲ್ಪ ಸಮಯದಲ್ಲಿ ನೆಮ್ಮದಿ ಕೇಂದ್ರ ಜಿಲ್ಲಾ ಮುಖ್ಯಸ್ಥರು ಬಂದು ಸಮಸ್ಯೆ ಪರಿಹರಿಸುತ್ತಾರೆ ಎಂಬ ಆಶ್ವಾಸನೆ ನೀಡಿ 2 ಗಂಟೆ ಕಳೆದರೂ ಯಾರೂ ಬರಲಿಲ್ಲ. ರೈತರ ಸಹನೆ ಮೀರಿ ರಸ್ತೆ ತಡೆ ಆರಂಭಿಸಿದರು. ಸುಮಾರು ಅರ್ಧ ಗಂಟೆ ವಾಹನ ಸಂಚಾರ ಸ್ಥಗಿತವಾಗಿತ್ತು. ಪಿಎಸ್ಐ ರಮೇಶ್ ಆಗಮಿಸಿ ಸಮಸ್ಯೆ ಕುರಿತು ಧರಣಿ ನಿರತರ ಮನವೊಲಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.</p>.<p>ಉಪ ತಹಶೀಲ್ದಾರ್ ರೆಹಾನ್ ಪಾಶಾ, ಗ್ರಾಮ ಲೆಕ್ಕಾಧಿಕಾರಿ ಭಕ್ತವತ್ಸಲ ಇದ್ದರು.</p>.<p>ನಂತರ ತಹಶೀಲ್ದಾರ್ ಜಿ. ನಜ್ಮಾ ನೆಮ್ಮದಿ ಕೇಂದ್ರದ ದಾವಣಗೆರೆ ಜಿಲ್ಲಾ ವ್ಯವಸ್ಥಾಪಕ ಕೆ.ಎಂ. ಉಮೇಶ್ ಅವನ್ನು ಕರೆಸಿ, ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು. ಬುಧವಾರದಿಂದ ಇನ್ನೊಂದು ಗಣಕ ಯಂತ್ರ, ಹೆಚ್ಚಿನ ಪ್ರಮಾಣದ ಯುಪಿಎಸ್ ಒದಗಿಸುವ ಭರವಸೆ ನೀಡಿದ ನಂತರ ಕೇಂದ್ರ ಪುನರಾರಂಭವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು:</strong> ಇಲ್ಲಿನ ನೆಮ್ಮದಿ ಕೇಂದ್ರ ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿದ ಜನತೆ, ರೈತರು ಹಾಗೂ ವಿದ್ಯಾರ್ಥಿಗಳು ಬಲವಂತವಾಗಿ ಬಾಗಿಲು ಮುಚ್ಚಿಸಿ ರಸ್ತೆ ತಡೆ ನಡೆಸಿದ ಘಟನೆ ಮಂಗಳವಾರ ಜರುಗಿತು.</p>.<p>ಉನ್ನತ ವಿದ್ಯಾಭ್ಯಾಸ, ಶಾಲಾ ಕಾಲೇಜಿಗೆ ಸೇರ ಬಯಸುವ ವಿದ್ಯಾರ್ಥಿವೃಂದ ಆದಾಯ, ಜಾತಿ ಪ್ರಮಾಣ ಪತ್ರ ಪಡೆಯಲು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿದ್ದರು.</p>.<p>ಪಡಿತರಚೀಟಿ, ವೃದ್ಧಾಪ್ಯ ವೇತನಕ್ಕೆ ಅರ್ಜಿಸಲ್ಲಿಸುವವರು ಹಾಗೂ ಪಹಣಿ ಪಡೆಯಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.</p>.<p>ನೆಮ್ಮದಿ ಕೇಂದ್ರದ ಏಕಮಾತ್ರ ಸಿಬ್ಬಂದಿ ಎಂದಿನಂತೆ ಕಚೇರಿ ಆರಂಭಿಸಿದರು. ಆದರೆ, ಸ್ವಲ್ಪ ಹೊತ್ತಿನಲ್ಲಿ ವಿದ್ಯುತ್ಪೂರೈಕೆ ಸ್ಥಗಿತವಾಯಿತು.</p>.<p>ಉಪಸ್ಥಿತ ವಿದ್ಯಾರ್ಥಿಗಳು ಪದವಿ, ಡಿಪ್ಲೊಮಾ ತರಗತಿ ಸೇರಲು ಜೂನ್ 15 ಅಂತಿಮ ದಿನ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ರೈತರು ಸ್ಥಳಕ್ಕಾಗಮಿಸಿ ನೆಮ್ಮದಿ ಕೇಂದ್ರಕ್ಕೆ ಒಂದು ಗಣಕಯಂತ್ರ, ಪ್ರಿಂಟರ್ ಪೂರೈಸಿದ್ದಾರೆ. ಚಿಕ್ಕ ಯುಪಿಎಸ್ನಿಂದ ಪ್ರಯೋಜನವಿಲ್ಲ ಎಂದು ಸಮಸ್ಯೆಯನ್ನು ತಹಶೀಲ್ದಾರ್ ಗಮನಕ್ಕೆ ತಂದರು.</p>.<p>ಸ್ವಲ್ಪ ಸಮಯದಲ್ಲಿ ನೆಮ್ಮದಿ ಕೇಂದ್ರ ಜಿಲ್ಲಾ ಮುಖ್ಯಸ್ಥರು ಬಂದು ಸಮಸ್ಯೆ ಪರಿಹರಿಸುತ್ತಾರೆ ಎಂಬ ಆಶ್ವಾಸನೆ ನೀಡಿ 2 ಗಂಟೆ ಕಳೆದರೂ ಯಾರೂ ಬರಲಿಲ್ಲ. ರೈತರ ಸಹನೆ ಮೀರಿ ರಸ್ತೆ ತಡೆ ಆರಂಭಿಸಿದರು. ಸುಮಾರು ಅರ್ಧ ಗಂಟೆ ವಾಹನ ಸಂಚಾರ ಸ್ಥಗಿತವಾಗಿತ್ತು. ಪಿಎಸ್ಐ ರಮೇಶ್ ಆಗಮಿಸಿ ಸಮಸ್ಯೆ ಕುರಿತು ಧರಣಿ ನಿರತರ ಮನವೊಲಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.</p>.<p>ಉಪ ತಹಶೀಲ್ದಾರ್ ರೆಹಾನ್ ಪಾಶಾ, ಗ್ರಾಮ ಲೆಕ್ಕಾಧಿಕಾರಿ ಭಕ್ತವತ್ಸಲ ಇದ್ದರು.</p>.<p>ನಂತರ ತಹಶೀಲ್ದಾರ್ ಜಿ. ನಜ್ಮಾ ನೆಮ್ಮದಿ ಕೇಂದ್ರದ ದಾವಣಗೆರೆ ಜಿಲ್ಲಾ ವ್ಯವಸ್ಥಾಪಕ ಕೆ.ಎಂ. ಉಮೇಶ್ ಅವನ್ನು ಕರೆಸಿ, ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು. ಬುಧವಾರದಿಂದ ಇನ್ನೊಂದು ಗಣಕ ಯಂತ್ರ, ಹೆಚ್ಚಿನ ಪ್ರಮಾಣದ ಯುಪಿಎಸ್ ಒದಗಿಸುವ ಭರವಸೆ ನೀಡಿದ ನಂತರ ಕೇಂದ್ರ ಪುನರಾರಂಭವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>