ಕೋರ್ಟ್ ತೀರ್ಪಿನ ಆದೇಶದಂತೆ ರಾಜ್ಯ ಯಾವುದೇ ಸಾರ್ವಜನಿಕ ಸ್ಥಳ ಅಥವಾ ಸರ್ಕಾರಿ ಕಟ್ಟಡಗಳಿಗೆ ಜೀವಿತ ವ್ಯಕ್ತಿಗಳಾದ ಶಾಸಕ ಅಥವಾ ಸಂಸದರ ಹೆಸರನ್ನು ಇಡಬಾರದು. ಇಂತಹ ಹೆಸರು ಇಟ್ಟಿರುವುದು ಕಂಡುಬಂದಲ್ಲಿ ಸ್ಥಳೀಯ ಆಡಳಿತ ಅಂತಹ ಹೆಸರನ್ನು ತೆಗೆದುಹಾಕುವ ಕಾರ್ಯವನ್ನು ಕೈಗೊಳ್ಳಬೇಕೆಂದು ಆದೇಶ ನೀಡಿದೆ. ಅದರಂತೆ ಪಟ್ಟಣದಲ್ಲಿ ಈ ಹಿಂದೆ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ ಅವರ ಹೆಸರನ್ನು ಇಟ್ಟಿರುವ ಸಮುದಾಯ ಭವನ, ಬಡಾವಣೆ, ರಂಗಮಂದಿರ ಹಾಗೂ ಮಾಡಾಳ್ ವಿರೂಪಾಕ್ಷಪ್ಪ ವಾಣಿಜ್ಯ ಸಂಕೀರ್ಣದ ಹೆಸರು ಹೊಂದಿರುವ ನಾಮಫಲಕಗಳ ಮೇಲೆ ಬಣ್ಣ ಬಳಿಸುತ್ತಿದ್ದೇವೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಕೆ. ಪರಮೇಶ್ ಪತ್ರಿಕೆಗೆ ತಿಳಿಸಿದರು.