<p><strong>ಶಿವಮೊಗ್ಗ: </strong>ಪ್ರಸಕ್ತ ವರ್ಷ ಜ.31ಕ್ಕೆ ಸುಸ್ತಿಯಾಗಿರುವ ಕೃಷಿ ಸಾಲಗಳ ಬಡ್ಡಿ ಸಂಪೂರ್ಣ ಮನ್ನ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಜಿಲ್ಲೆಯ ರೈತರು ಬಾಕಿ ಅಸಲು ಪಾವತಿಸುವ ಮೂಲಕ ಬಡ್ಡಿಮನ್ನಾ ಪ್ರಯೋಜನ ಪಡೆಯಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡಕೋರಿದರು.</p>.<p>ಡಿಸಿಸಿ ಹಾಗೂ ಪೀಕಾರ್ಡ್ ಬ್ಯಾಂಕ್ನಲ್ಲಿ ಸಾಲ ಪಡೆದು ಸುಸ್ತಿಯಾಗಿರುವ ರೈತರಿಗೆ ಈ ಯೋಜನೆ ಅನ್ವಯಿಸುತ್ತದೆ. ಪಬಡ್ಡಿ ಮನ್ನಾ ಪ್ರಯೋಜನ ಪಡೆಯುವ ರೈತರು ಮಾರ್ಚ್ 31ರ ಒಳಗೆ ಅಸಲು ಪಾವತಿಸಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>ಜಿಲ್ಲೆಯಲ್ಲಿ 165 ಪ್ರಾಥಮಿಕ ಸಹಕಾರ ಸಂಘಗಳಿವೆ. 8 ಡಿಸಿಸಿ ಬ್ಯಾಂಕ್ ಶಾಖೆಗಳಿವೆ. ಸುಮಾರು 728 ಸದಸ್ಯರ ಸಾಲ ಸುಸ್ತಿಯಾಗಿದೆ. ಪೀಕಾರ್ಡ್ ಬ್ಯಾಂಕ್ನಲ್ಲಿ 12,500 ಸದಸ್ಯರು ದೀರ್ಘಾವಧಿಸಾಲ ಪಡೆದಿದ್ದಾರೆ. ₨ 124 ಕೋಟಿ ಅಸಲು ಇದೆ. ಡಿಸಿಸಿ ಬ್ಯಾಂಕ್ನಲ್ಲಿ ಪಡೆದ 6079 ರೈತರ ಸಾಲ 30.15 ಕೋಟಿ ಇದೆ. ಅಸಲಿಗಿಂತ ಬಡ್ಡಿಯೇ ₨ 31.60 ಕೋಟಿ ಯಾಗಿದೆ. ಡಿಸಿಸಿ ಬ್ಯಾಂಕ್ನ ಮಧ್ಯಮಾವಧಿ ಸಾಲದ ಪ್ರಯೋಜನ13,228 ರೈತರಿಗೆ ದೊರಕಲಿದೆ ಎಂದರು.</p>.<p>ಡಿಸಿಸಿ ಬ್ಯಾಂಕ್ ಜ.31ರವರೆಗೆ 63,008 ರೈತರಿಗೆ ₨ 330 ಕೋಟಿ ಸಾಲ ನೀಡಿದೆ.ಮಾರ್ಚ್ ಅಂತ್ಯದವರೆಗೆ ಇನ್ನಷ್ಟು ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ವಿವರ ನೀಡಿದರು.</p>.<p><strong>ನಿಯಮದ ಅನ್ವಯ ನೇಮಕ:</strong></p>.<p>ನಬಾರ್ಡ್ ನಿಯಮದ ಪ್ರಕಾರವೇ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.ಸಹಕಾರ ಇಲಾಖೆ ಜಿಲ್ಲಾ ಪಂಚಾಯತಿಗೆತಪ್ಪುಮಾಹಿತಿ ನೀಡಿದೆ. ನಿಯಮಬಿಟ್ಟು ಸಿಬ್ಬಂದಿ ನೇಮಕ ಮಾಡಿಕೊಂಡಿಲ್ಲ.ಇತರೆ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಚನ್ನವೀರಪ್ಪ, ನಿರ್ದೇಶಕರಾದದುಗ್ಗಪ್ಪಗೌಡ, ಸುಧೀರ್, ಬಿ.ಡಿ.ಭೂಕಾಂತ್, ಎಸ್.ಪಿ.ದಿನೇಶ್, ಎಚ್.ಎಲ್.ಷಡಾಕ್ಷರಿ, ವ್ಯವಸ್ಥಾಪಕ ನಿರ್ದೇಶಕ ರಾಜಣ್ಣ ರೆಡ್ಡಿಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಪ್ರಸಕ್ತ ವರ್ಷ ಜ.31ಕ್ಕೆ ಸುಸ್ತಿಯಾಗಿರುವ ಕೃಷಿ ಸಾಲಗಳ ಬಡ್ಡಿ ಸಂಪೂರ್ಣ ಮನ್ನ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಜಿಲ್ಲೆಯ ರೈತರು ಬಾಕಿ ಅಸಲು ಪಾವತಿಸುವ ಮೂಲಕ ಬಡ್ಡಿಮನ್ನಾ ಪ್ರಯೋಜನ ಪಡೆಯಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡಕೋರಿದರು.</p>.<p>ಡಿಸಿಸಿ ಹಾಗೂ ಪೀಕಾರ್ಡ್ ಬ್ಯಾಂಕ್ನಲ್ಲಿ ಸಾಲ ಪಡೆದು ಸುಸ್ತಿಯಾಗಿರುವ ರೈತರಿಗೆ ಈ ಯೋಜನೆ ಅನ್ವಯಿಸುತ್ತದೆ. ಪಬಡ್ಡಿ ಮನ್ನಾ ಪ್ರಯೋಜನ ಪಡೆಯುವ ರೈತರು ಮಾರ್ಚ್ 31ರ ಒಳಗೆ ಅಸಲು ಪಾವತಿಸಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>ಜಿಲ್ಲೆಯಲ್ಲಿ 165 ಪ್ರಾಥಮಿಕ ಸಹಕಾರ ಸಂಘಗಳಿವೆ. 8 ಡಿಸಿಸಿ ಬ್ಯಾಂಕ್ ಶಾಖೆಗಳಿವೆ. ಸುಮಾರು 728 ಸದಸ್ಯರ ಸಾಲ ಸುಸ್ತಿಯಾಗಿದೆ. ಪೀಕಾರ್ಡ್ ಬ್ಯಾಂಕ್ನಲ್ಲಿ 12,500 ಸದಸ್ಯರು ದೀರ್ಘಾವಧಿಸಾಲ ಪಡೆದಿದ್ದಾರೆ. ₨ 124 ಕೋಟಿ ಅಸಲು ಇದೆ. ಡಿಸಿಸಿ ಬ್ಯಾಂಕ್ನಲ್ಲಿ ಪಡೆದ 6079 ರೈತರ ಸಾಲ 30.15 ಕೋಟಿ ಇದೆ. ಅಸಲಿಗಿಂತ ಬಡ್ಡಿಯೇ ₨ 31.60 ಕೋಟಿ ಯಾಗಿದೆ. ಡಿಸಿಸಿ ಬ್ಯಾಂಕ್ನ ಮಧ್ಯಮಾವಧಿ ಸಾಲದ ಪ್ರಯೋಜನ13,228 ರೈತರಿಗೆ ದೊರಕಲಿದೆ ಎಂದರು.</p>.<p>ಡಿಸಿಸಿ ಬ್ಯಾಂಕ್ ಜ.31ರವರೆಗೆ 63,008 ರೈತರಿಗೆ ₨ 330 ಕೋಟಿ ಸಾಲ ನೀಡಿದೆ.ಮಾರ್ಚ್ ಅಂತ್ಯದವರೆಗೆ ಇನ್ನಷ್ಟು ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ವಿವರ ನೀಡಿದರು.</p>.<p><strong>ನಿಯಮದ ಅನ್ವಯ ನೇಮಕ:</strong></p>.<p>ನಬಾರ್ಡ್ ನಿಯಮದ ಪ್ರಕಾರವೇ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.ಸಹಕಾರ ಇಲಾಖೆ ಜಿಲ್ಲಾ ಪಂಚಾಯತಿಗೆತಪ್ಪುಮಾಹಿತಿ ನೀಡಿದೆ. ನಿಯಮಬಿಟ್ಟು ಸಿಬ್ಬಂದಿ ನೇಮಕ ಮಾಡಿಕೊಂಡಿಲ್ಲ.ಇತರೆ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಚನ್ನವೀರಪ್ಪ, ನಿರ್ದೇಶಕರಾದದುಗ್ಗಪ್ಪಗೌಡ, ಸುಧೀರ್, ಬಿ.ಡಿ.ಭೂಕಾಂತ್, ಎಸ್.ಪಿ.ದಿನೇಶ್, ಎಚ್.ಎಲ್.ಷಡಾಕ್ಷರಿ, ವ್ಯವಸ್ಥಾಪಕ ನಿರ್ದೇಶಕ ರಾಜಣ್ಣ ರೆಡ್ಡಿಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>